(www.vknews.com) : ಮಂಜಿನ ನಗರಿಯೆಂದರೆ ನೆನಪಿನ ನಾಗಾಲೋಟಕ್ಕೆ ಪಟ್ಟನೆ ಹೊಳೆಯುವುದು ಅಲ್ಲಿನ ಮೈ ಕೊರೆವ ಚಳಿ ಈ ಚಳಿಗೆ ಮೈಯೊಡ್ಡಿದರೆ ಅದೆಂಥಹಾ ಕಹಿ ನೆನಪುಗಳೇ ಆದರು ಮಾಯವಾಗುವುದು ಖಂಡಿತ ಇದು ಮಡಿಕೇರಿಯ ಒಂದು ಸಾಧಾರಣ ಚಿತ್ರಣ.
ಆದರೆ ನಾ ಕಂಡ ಮಂಜಿನ ನಗರಿ ಬೇರೆಯೇ ಆಗಿತ್ತು ಸದಾ ಒಂದಿಲ್ಲೊಂದು ಕೋಮಿನ ಮಧ್ಯೆ ಜಗಳ ಕಾಯುವಿಕೆಯಲ್ಲಿ ಸುದ್ಧಿಯಲ್ಲಿರುವ ನಮ್ಮ ಕರಾವಳಿಗರಿಗೆ ಸೆಡ್ಡು ಹೊಡೆಯುತ್ತಾ ಈ ಮಂಜಿನ ನಗರಿ ತನ್ನದೇ ಆದ ಸೌಹಾರ್ಧತೆಗೆ ಸಾಕ್ಷಿಯಾಗಿದೆ ಅದೇ ರೀತಿ ಇಲ್ಲಿನ ಯುವ ಸಮೂಹವಂತು ಬಹಳ ಅಚ್ಚರಿದಾಯಕವಾಗಿದೆ ಅದ್ಯಾವ ಶತ್ರುವಿನ ಮನದೊಳಗೆಯೂ ಪ್ರೀತಿ ಮೂಡಿಸುವಲ್ಲಿ ಇಲ್ಲಿನ ಯುವಕರು ನಿಸ್ಸೀಮರು ಇಂತಹವರ ಸಾಲಿನಲ್ಲಿ ನಿಲ್ಲುವ ಒಬ್ಬ ಗೆಳೆಯ ನನಗೂ ಇದ್ದಾನೆ ಹೆಸರು ಸಿದ್ದೀಕ್ ಶನಿವಾರಸಂತೆ,ಕೊಡಗು
ಹೌದು ಈ ಗೆಳೆಯನನ್ನು ನಾನು ಮುಖತಃ ಭೇಟಿಯಾಗಿಲ್ಲ ಆದರೆ ವಾಟ್ಸಾಪ್’ನ ಒಂದು ಸ್ನೇಹ ಕೂಟದಲ್ಲಿ ಈ ಗೆಳೆಯ ನನಗೆ ಚಿರಪರಿಚಿತ ಈ ಗೆಳೆಯನ ನಿತ್ಯ ಹವ್ಯಾಸವಾದ ಕವನ ಸುಭಾಷಿತ ಲೇಖನಗಳೆಂದರೆ ಎಲ್ಲರಿಗೂ ಅಚ್ಚು ಮೆಚ್ಚು ತನ್ನ ಲೇಖನಗಳಿಂದ ಅದ್ಯಾರ ಮನಸ್ಸನ್ನೂ ಕೂಡ ಗೆಲ್ಲಲು ಸಾಮರ್ಥ್ಯವಿರುವ ಈ ಉತ್ಸಾಹಿ ಯುವಕನ ಕಾರ್ಯಕ್ಕೆ ಅದೆಂತಹ ಪ್ರಶಸ್ತಿಗಳು ಕೂಡ ಕಡಿಮೆಯೇ ಈ ಗೆಳೆಯ ನನಗೆ ಇಷ್ಟವಾಗಲು ಕಾರಣ ಇಂದಿನ ಯುವ ಸಮೂಹ ಸಾಮಾಜಿಕ ಜಾಲ ತಾಣವನ್ನು ಸಮಯವನ್ನು ಪೋಲು ಮಾಡಲೋಸ್ಕರ ಉಪಯೋಗಿಸಿದರೆ ಇಂತಹ ಸಮೂಹದಲ್ಲಿ ಈ ಯುವಕ ಭಿನ್ನ ಸ್ಥಾನದಲ್ಲಿ ನಿಲ್ಲುತ್ತಾರೆ ತನಗೆ ಸಿಕ್ಕ ವೇದಿಕೆಯನ್ನು ದುರುಪಯೋಗ ಪಡಿಸದೆ ಬಡವರ ನೊಂದವರ ಕಣ್ಣೀರೊರೆಸಲು ಉಪಯೋಗಿಸುತ್ತಿದ್ದಾರೆ
ಅಹಂ ಎಂಬುವುದು ತನ್ನ ಹತ್ತಿರ ಸುಳಿಯಲು ಬಿಡದೆ ತನಗಿಂತ ಕಿರಿಯರಿಗೂ ಗೌರವ ನೀಡುವ ವ್ಯಕ್ತಿತ್ವ ಇವರದು ಇವರ ಲೇಖನಗಳನ್ನು ಮೆಚ್ಚಿದ ಅಭಿಮಾನಿಗಳು ಇವರ ಹೆಸರಿನಲ್ಲಿ ಒಂದು ಅಭಿಮಾನಿಗಳ ಬಳಗವನ್ನೆ ರಚಿಸಿದ್ದಾರೆ ಅದರಲ್ಲಿ ನಾನೂ ಒಬ್ಬ
ಈ ಸಾಹಿತ್ಯ ಲೋಕದ ದಿಗ್ಗಜನ ಬಗ್ಗೆ ಬರೆಯಲು ಹೋದರೆ ಅದೊಂದು ಮಹಾ ಕಾವ್ಯವಾಗುವುದು ಖಂಡಿತ ಈ ಗೆಳೆಯನ ಮೇರು ವ್ಯಕ್ತಿತ್ವವನ್ನು ಕೇವಲ ನನ್ನ ಈ ಸಣ್ಣ ಲೇಖನದಿಂದ ವರ್ಣಿಸಲು ಕಷ್ಟಸಾಧ್ಯ ಈ ಗೆಳೆಯನ ಇನ್ನಷ್ಟು ಲೇಖನಗಳು ಮೂಡಿಬರಲಿ ಎಂದು ಹಾರೈಸುವ
ಪ್ರೀತಿಯ ಗೆಳೆಯ
✍️ ಅಶ್ಫಾಖ್ ಅಶ್ಶು ಆಲಾಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.