ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಲಾಕ್ ಡೌನ್ ಪ್ರಯುಕ್ತ ನಿಲ್ಲಿಸಿದ್ದ ಸಾಮೂಹಿಕ ನಮಾಝ್ ಹಾಗೂ ಜುಮುಅ ಖುತುಬ ಪುನರಾರಂಭಿಸಲು ಸರಕಾರದ ಆಜ್ಞೆ ಬಂದ ಹಿನ್ನೆಲೆಯಲ್ಲಿ ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಬಹು. ಸಯ್ಯದ್ ಮುಹಮ್ಮದ್ ಜಿಫ್ರಿ ತಂಙಳ್ ಹಾಗೂ ಇಂಡಿಯನ್ ಗ್ರಾಂಡ್ ಮುಫ್ತಿ ಬಹು. ಎ.ಪಿ.ಉಸ್ತಾದರ ಮಾರ್ಗದರ್ಶನ ಹಾಗೂ ಉಭಯ ಜಿಲ್ಲೆಗಳ ಖಾಝಿಗಳ ಮತ್ತು ಬೆಳ್ಳಾರೆ ಮಹಲ್ ಇಮಾಮರಾದ ಬಹು.ಯೂನುಸ್ ಸಖಾಫಿ ಯವರುಗಳ ನಿರ್ದೇಶನ ಪ್ರಕಾರ ಜಮಾಅತ್ ಅಧ್ಯಕ್ಷ ಕೆ.ಎಂ ಮುಹಮ್ಮದ್ ಹಾಜಿ ಯವರ ಅನುಮತಿ ಮೇರೆಗೆ ದಿನಾಂಕ ಜೂನ್ 08 ರಂದು ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಪ್ರಾರಂಭಗೊಂಡಿತು.
ಹಾಗೂ ಇಂದು ಶುಕ್ರವಾರ ಜುಮ್ಅ ಖುತ್ಬಾ ನೆರವೇರಿತು. ವಿಸ್ವಾಸಿಗಳು ಸರ್ಕಾರ ಮತ್ತು ಜಮಾಅತಿನ ನಿಯಮಗಳನ್ನು ಪಾಲಿಸಿಕೊಂಡು ಪ್ರಾರ್ಥನೆಯಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.