(www.vknews.com) : ಒಂದು ರಾಷ್ಟ್ರ ನಾಶವಾಗುವುದು ಯುದ್ದದಿಂದಲ್ಲ ದಾರಿದ್ರ್ಯದಿಂದಲ್ಲ ತಮ್ಮೊಳಗಿನ ಮನುಷ್ಯತ್ವ ಸಾಯುವಾಗ ದೇಶ ಸಾಯುತ್ತದೆ ಅರ್ಥಾತ್ ದೇಶ ನಾಶವಾಗುತ್ತದೆ.
ದಕ್ಷಿಣ ಆಫ್ರಿಕಾದ ಒಂದು ಪ್ರಸಿದ್ಧ ಯುನಿವರ್ಸಿಟಿಯ ಒಂದು ಗೋಡೆಯಲ್ಲಿ ಹೀಗೆ ಬರೆದಿದೆ. ಒಂದು ರಾಷ್ಟವನ್ನು ನಾಶ ಮಾಡಲು ಅಣುಬಾಂಬು,ಮಿಸೇಲ್ ಗಳ ಅವಶ್ಯಕತೆ ಇಲ್ಲ. ತಿರುಗಿ ಆ ದೇಶದ ಜನರಿಗೆ ಮಕ್ಕಳಿಗೆ ಸಿಗುವ ವಿದ್ಯಾಭ್ಯಾಸವನ್ನು ಒಡೆದರೆ ಮತ್ತು ಇಲ್ಲವಾಗಿಸಿದರೆ ಸಾಕಾಗುತ್ತದೆ. ವಿದ್ಯಾಭ್ಯಾಸವನ್ನು ಇಲ್ಲದಂತೆ ಮಾಡಿದರೆ ಅಥವಾ ಅದನ್ನು ಒಂದು ವ್ಯಾಪಾರವನ್ನಾಗಿ ಮಾಡಿದರೆ ಅಂತಹ ವಿದ್ಯಾಭ್ಯಾಸದಲ್ಲಿ ಬರುವ ಡಾಕ್ಟರ್ ಗಳು ಆ ದೇಶದ ಅಷ್ಟೂ ರೋಗಿಗಳನ್ನು ಕೊಲ್ಲುತ್ತಾರೆ. ಇಂಜಿನಿಯರ್ ಗಳು ಕಟ್ಟಡಗಳನ್ನು ಸೇತುವೆಗಳನ್ನು ನಾಶಮಾಡುತ್ತಾರೆ.ಮತಪಂಡಿತರುಗಳು ಮನುಷ್ಯರ ಮನುಷ್ಯತ್ವನ್ನು ಇಲ್ಲದಂತೆ ಮಾಡುತ್ತಾರೆ ಮತ್ತು ಜನರ ನಡುವೆ ಕೋಮುದ್ವೇಷವನ್ನು ಉಂಟು ಮಾಡುತ್ತಾರೆ. ರಾಜಕಾರಣಿಗಳು ಭ್ರಷ್ಟಾರಾಗುತ್ತಾರೆ,ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿ ಅತ್ಯಾಚಾರವನ್ನು ಮಾಡುತ್ತಾರೆ. ಮಕ್ಕಳು ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ. ನ್ಯಾಯಾಧೀಶರುಗಳು ಕಾನೂನನ್ನು ಮಾರಾಟ ಮಾಡುತ್ತಾರೆ ಅದನ್ನು ಹಿಸುಕಿ ಚಿವುಟಿ ಕೊಲ್ಲುತ್ತಾರೆ.
ಇದೆಲ್ಲಾ ನಮ್ಮ ದೇಶದಲ್ಲಿ ಇದೇ ಅಂತ ಆದರೆ ನಮ್ಮ ದೇಶ ನಾಶವಾಗುತ್ತಿದೆ ಎಂದು ಅರ್ಥ. ಇದೆಲ್ಲಾ ಸರಿ ಆಗಬೇಕು ಎಂದಾದರೆ ನಮ್ಮಲ್ಲಿ ಬ್ರಿಟಿಷರು ಬಿಟ್ಟು ಹೋದ ಕೆಲವು ಪದ್ದತಿಗಳಲ್ಲಿ ಬದಲಾವಣೆ ಆಗಬೇಕು.ನೀರು ಎಂದರೆ ಎಚ್ ಟು ಒ ಎನ್ನುವವನು ಡಿಗ್ರಿ ಪಡೆದವನು ಆಗಿರಬಹುದು.ಆದರೆ ನೀರು ಎಂದರೆ ತನ್ನಲ್ಲಿ ಇರುವ ನೀರನ್ನು ಇನ್ನೊಬ್ಬನಿಗೆ ಕುಡಿಸುವವ ನಿಜವಾಗಿಯೂ ಮನುಷ್ಯನಾಗುತ್ತಾನೆ. ವ್ಯಾಯಾಮ ಆಟದ ತರಗತಿಗಳು ಶಾಲೆಯಲ್ಲಿ ಇದ್ದ ಹಾಗೆ ನಿಜವಾಗಿಯೂ ನಮ್ಮ ದೇಶ ಎಂದರೆ ಏನು,ನಮ್ಮ ಸಂಸ್ಕೃತಿ ಎಂತದು ನಮ್ಮ ತಾಯಿ,ತಂದೆ ಎಂದರೇನು ಅವರ ಶಕ್ತಿ ಎಂತಹದು ಮತ್ತು ನಮ್ಮ ದೇಶದ ನಿಯಮಗಳೇನು ನಮ್ಮ ದೇಶದ ಪೌರತ್ವ ನಮಗೆ ಕೊಟ್ಟಿರುವ ಅವಕಾಶಗಳೇನು ಮನುಷ್ಯನಲ್ಲಿ ಇರಬೇಕಾದ ಕ್ವಾಲಿಟಿಗಳು ಮನುಷ್ಯನ ಒಳ್ಳೆಯ ಕೆಟ್ಟ ಲಕ್ಷಣಗಳು ಇದೆಲ್ಲವನ್ನೂ ಕಲಿಸುವ ತರಗತಿಗಳನ್ನೂ ಪ್ರಾರಂಭಿಸಬೇಕು.
ನಮ್ಮ ದೇಶದ ರಾಜಕೀಯ ಅಥವಾ ಸರಕಾರ ಯಾವುದೇ ಇರಲಿ ಆದರೆ ನಮಗೆ ನಮ್ಮ ದೇಶ ಎನ್ನುವುದು ಇರುವುದು ಒಂದೇ….
– ಅಕ್ಬರ್ ಅಲಿ ಬಜ್ಪೆ (ವೀಡಿಯೊ ಆಧಾರಿತ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.