(www.vknews.com) : 8 ಮಹಿಳೆಯರ ಸಮೇತ ಗಲ್ಫಿನಿಂದ ಬಂದ 12 ಪ್ರಯಾಣಿಕರಿಗೆ ಬೆಂಗಳೂರು ಕೆಎಂಸಿಸಿ ರಕ್ಷಕರಾದರು. ಮಂಗಳೂರು ಮೂಲದವರಾದ 12 ಪ್ರಯಾಣಿಕರ ತಂಡ ನಿನ್ನೆ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದರು. ಇದರಲ್ಲಿ 7 ಗರ್ಭಿಣಿಯರು ವಯಸ್ಕರು ಸೇರಿದ್ದು ವಿಮಾನ ನಿಲ್ದಾಣದಿಂದ ನೇರ ಸರ್ಕಾರದ ಕ್ವಾರೆನ್ಟೈನ್ಗೆ ಹೋಗಬೇಕು ಎಂದು ಘಲ್ಫಿನಿಂದ ಹೇಳಿದ ಮಾತನ್ನು ವಿಶ್ವಾಸಕ್ಕಿಟ್ಟು ಬಂದ ಯಾತ್ರಿಕರು ವಿಮಾನ ನಿಲ್ದಾಣದಿಂದ ಊರಿಗೆ ತಲುಪಲು ಅಥವಾ ಬೆಂಗಳೂರಿನಲ್ಲಿ ತಂಗಳು ಯಾವುದೇ ವ್ಯವಸ್ತೆ ಮಾಡಿರಲಿಲ್ಲ. ಊರಿಗೆ ಹೋಗಿ ಹೋಂ ಕ್ವಾರೆನ್ಟೈನಲ್ಲಿ ಇರಿ ಎಂದು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಸಂದೇಶ ಬರಲು ಸುಮಾರು ಘಂಟೆಗಳ ಕಾಲ ಕಾಯಬೇಕಾಯಿತು.
ರಾತ್ರಿ 11 ಗಂಟೆಗೆ ವಿಮಾನದಿಂದಿಳಿದ ಯಾತ್ರಿಕರು ಊಟ ನೀರು ಏನು ಸಿಗದೇ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಕರಿಗೆ ಸಹಾಯವಾಗಿ ಬಂದದ್ದು ಬೆಂಗಳೂರು ಕೆ.ಎಂ.ಸಿ.ಸಿ.ಯ ಕಾರ್ಯಕರ್ತರು. ಕೇರಳದ ತನ್ನ ಊರಿನಲ್ಲಿ ಹೋಂ ಕ್ವಾರೆನ್ಟೈನಾಗಿ ಕಳೆಯುತ್ತಿರುವ ಬೆಂಗಳೂರು ಕೆ.ಎಂ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ಎಂ.ಕೆ ನೌಶಾದ್ ರಾತ್ರಿ 3 ಘಂಟೆಗೆ ಬೆಂಗಳೂರಿನ ಕಾರ್ಯಕರ್ತರಿಗೆ ವಿವರ ತಲುಪಿಸಿದರು.
ಈ ಸಂದರ್ಭದಲ್ಲಿ ಆಂಬುಲೆನ್ಸ್ ಡ್ರೈವರ್ ಹನೀಫ ವಿಮಾನ ನಿಲ್ದಾಣದಲ್ಲೇ ಇದ್ದುದ್ದರಿಂದ ಅತೀ ಶೀಘ್ರದಲ್ಲಿ ಕಾರ್ಯಾಚರಣೆ ಮಾಡಲು ಸಾಧ್ಯವಾಯಿತು. ಅದಲ್ಲದೇ ಜಂಶೀರ್ ಶಿವಾಜಿನಗರ ಆಂಬುಲೆನ್ಸ್ ಡ್ರೈವರ್ ಶಫೀಕ್ ಕೂಡಲೇ ವಾಹನದೊಂದಿಗೆ ವಿಮಾನ ನಿಲ್ದಾಣ ತಲುಪಿ ಎಲ್ಲರನ್ನೂ ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯುಮಾನಿಟಿ ಸಮುಚ್ಛಯಕ್ಕೆ ತಲುಪಿಸಿ ಊಟೋಪಚಾರ ತಂಗುವ ವ್ಯವಸ್ಥೆ ಮಾಡಿದರು.
ನಿನ್ನೆ ರಾತ್ರಿಯೇ ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ಡ್ರೈವರ್ ಹನೀಫ ಒಂದು ರೋಗಿ ಮಹಿಳೆಯನ್ನ ಮಂಗಳೂರಿನ ಆಸ್ಪತ್ರೆಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದರೆ ಬಾಕಿ ಇರುವವರನ್ನ ಮದ್ಯಾಹ್ನ 12 ಘಂಟೆಗೆ ಊರಿಗೆ ತಲುಪಿಸಲಿದ್ದೇವೆ ಎಂದು ಕೆಎಂಸಿಸಿಯ ನಾಯಕರು ತಿಳಿಸಿದ್ದಾರೆ.
ಏನೇ ಇರಲಿ ಕರೋನ ಸಂಕಷ್ಟ ಸಮಯದಲ್ಲಿ ಸಹಾಯಕರಾಗಿ ಬಂದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಂಘ ಸಂಸ್ಥೆಯಾದ ಆಲ್ ಇಂಡಿಯಾ ಕೆಎಂಸಿಸಿ ನಾಯಕರುಗಳಿಗೂ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಮುಸ್ಲಿಂ ಯೂತ್ ಲೀಗ್ ಬೊಳ್ಳೂರು ಯೂನಿಟ್ ಉಸ್ತುವಾರಿಯಾದ ತ್ವಯ್ಯಿಬ್ ಫೈಝಿ ಬೊಳ್ಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.