(www.vknews.com) : ಈ ಹಿಂದೆ ಹಸಿವಿಗಾಗಿ ಅಕ್ಕಿ ಕದ್ದ ಮಧು ಎಂಬ ಯುವಕನನ್ನು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಘಟನೆ ಕೇರಳದಲ್ಲಿ ನಡೆದಿತ್ತು.ಆ ನಂತರ ಗರ್ಭಿಣಿ ಯಾದ ಬೆಕ್ಕಿನ ಕೊರಳಿಗೆ ಹಗ್ಗ ಕಟ್ಟಿ ನೇತು ಹಾಕಿ ಸಾಯಿಸಲಾಗಿತ್ತು.ಅದೂ ಅಲ್ಲದೇ ಅನಾನಸಿನೊಳಗಿಟ್ಟ ಪಟಾಕಿ ಸಿಡಿದು ತೀವ್ರ ಗಾಯಗೊಂಡ ತುಂಬು ಗರ್ಭಿಣಿ ಆನೆಯೊಂದು ದಾರುಣ ವಾಗಿ ಕೊನೆಯುಸಿರೆಳೆದ ಘಟನೆ ಯು ದೇಶದಾದ್ಯಂತ ಚರ್ಚೆ ಗೆ ಗ್ರಾಸವಾಗಿತ್ತು.
ಆದರೆ ಚೊಕ್ಕಬೆಟ್ಟು ಪರಿಸರದಲ್ಲಿ ನಡೆದ ಘಟನೆಯೊಂದು ಮಾನವೀಯತೆಯ ಆದರ್ಶವನ್ನು ಪಾಲಿಸಿದಂತಿತ್ತು.
ನಾಯಿ ತನ್ನ ತಲೆಯನ್ನು ಕೊಡದಲ್ಲಿ ಸಿಕ್ಕಿ ಹಾಕಿಸಿ ಕೊಂಡು ಸುಮಾರು ಹದಿನೈದು ದಿನಗಳಿಂದ ಪರದಾಡುತ್ತಿತ್ತು.ಇದನ್ನು ಕಂಡು ಮರುಗಿದ ಚೊಕ್ಕಬೆಟ್ಟು ಪರಿಸರದ ಯುವಕರು ಆ ನಾಯಿಯನ್ನು ಹೇಗಾದರೂ ಮಾಡಿ ಬಚಾವು ಮಾಡಬೇಕೆಂದು ತೀರ್ಮಾನ ಮಾಡುತ್ತಾರೆ.ರಾತ್ರಿ ಹಗಲೆನ್ನದೇ ಆ ನಾಯಿಯನ್ನು ಹಿಡಿದು ರಕ್ಷಿಸಲು ಮುಂದಾಗುತ್ತಾರೆ.ಆದರೆ ನಾಯಿಯು ಹಿಡಿತಕ್ಕೆ ಸಿಗದೇ ತಪ್ಪಿಸಿ ಕೊಳ್ಳುತ್ತಿತ್ತು.ಈ ಸಂದರ್ಭದಲ್ಲಿ ಆಲ್ ಇಂಡಿಯಾ ಡೆವೆಲಪ್ಮೆಂಟ್ ಫೋರಂ ಇದರ ಜಿಲ್ಲಾ ಅಧ್ಯಕ್ಷರಾದ ಆಸಿಫ್ ಚೊಕ್ಕಬೆಟ್ಟು ಕೂಡಾ ನಾಯಿಯ ರಕ್ಷಣೆಗೆ ನಿಲ್ಲುತ್ತಾರೆ. ಮಂಗಳೂರಿನ ಅನಿಮಲ್ಸ್ ಕೇರ್ ಟ್ರಸ್ಟ್ ನವರನ್ನು ಸಂಪರ್ಕಿಸಿ ನಾಯಿಯ ರಕ್ಷಣೆ ಗೆ ಕೋರುತ್ತಾರೆ.ಇದಕ್ಕೆ ಸ್ಪಂದಿಸಿದ ಅನಿಮಲ್ಸ್ ಕೇರ್ ನವರು ತನ್ನ ಕಾರ್ಯಾಚರಣೆ ಗೆ ತೊಡಗುತ್ತಾರೆ.
ಒಂದೆರಡು ದಿನಗಳ ಸಾಹಸದಿಂದ ಕೇರ್ ಟೀಮ್ ನವರು ತಂತ್ರ ಪೂರ್ವಕ ನಾಯಿಯನ್ನು ಹಿಡಿದು ರಕ್ಷಣೆ ಮಾಡುತ್ತಾರೆ. ಅನಿಮಲ್ಸ್ ಕೇರ್ ಟೀಮಿನ ಸಹಕಾರವನ್ನು ಕೊಂಡಾಡಿದ ಊರಿನ ಜನ ಹತ್ತು ಹದಿನೈದು ದಿನಗಳಿಂದ ನಾಯಿಯನ್ನು ಉಳಿಸಲು ಶ್ರಮ ಪಟ್ಟ ಊರಿನ ಯುವಕರ ಸಾಹಸವನ್ನು ಕೊಂಡಾಡುತ್ತಿದ್ದಾರೆ.ಈ ಒಂದು ಘಟನೆಯ ಮೂಲಕ ಮಾನವೀಯತೆಯ ಮೌಲ್ಯವನ್ನು ಚೊಕ್ಕಬೆಟ್ಟಿನ ಯುವಕರ ತೋರಿ ಕೊಟ್ಟಿದ್ದಾರೆ. ಒಂದು ಜೀವವನ್ನು ಉಳಿಸುವುದು ಪುಣ್ಯವೆಂದು ಸಾರಿದ ಪ್ರವಾದಿ ಸ ರವರ ಆದರ್ಶ ವನ್ನು ಪಾಲಿಸಿ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವರದಿ : ರಹ್ಮಾನ್ ತುಂಬೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.