ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಹಾಜರಾತಿ
ಮಂಗಳೂರು (www.vknews.com) : ಗುರುವಾರ ನಡೆದ ದ್ವಿತೀಯ ಪಿ.ಯು.ಸಿ. ಇಂಗ್ಲೀಷ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ವಿವರ ಇಂತಿವೆ: ಇಂಗ್ಲೀಷ್ ಪರೀಕ್ಷೆಗೆ 26,952 ವಿದ್ಯಾರ್ಥಿಗಳು ರಿಜಿಸ್ಟ್ರೇಶನ್ (ನೊಂದಣಿ) ಆಗಿದ್ದು, ಒಟ್ಟು26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.466 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ದ.ಕ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಕೃತಜ್ಞತೆ: ಕೋವಿಡ್– 19 ರ ಮಾರ್ಗಸೂಚಿ ನಿಯಮದನ್ವಯ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ಚಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೊಲೀಸ್, ಬಸ್ ಸಿಬ್ಬಂದಿಗಳಿಗೆ ದಕ್ಷಿಣಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಿಬ್ಬಂದಿಗಳು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ತೋಟಗಾರಿಕೆ ಗಿಡಗಳು ಮಾರಾಟಕ್ಕೆ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ/ನರ್ಸರಿಗಳಲ್ಲಿ ಇಲಾಖಾ ದರಗಳನ್ವಯ ರೈತರಿಗೆ ವಿತರಣೆ ಮಾಡಲು ತೋಟಗಾರಿಕೆ ಗಿಡಗಳು ಲಭ್ಯವಿದ್ದು, ಅವುಗಳ ವಿವರ ಇಂತಿವೆ:-
ಮಂಗಳೂರು ಜಿಲ್ಲಾ ನರ್ಸರಿ ತೋಟಗಾರಿಕೆ ಕ್ಷೇತ್ರದಲ್ಲಿ, ಗೇರು ಕಸಿ, ಅಡಿಕೆ, ತೋಟಗಾರಿಕಾ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ -ರಾಘವೇಂದ್ರ ದೂರವಾಣಿ ಸಂಖ್ಯೆ9902056969.
ಪಡೀಲ್ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕೋಕೋ, ಕಾಳುಮೆಣಸು, ತೆಂಗು, ಪಪ್ಪಾಯ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ- ರೇಣುಕಾ ದೂರವಾಣಿ ಸಂಖ್ಯೆ 9480842518 .
ಬಂಟ್ವಾಳ ತಾಲೂಕಿನ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ತೆಂಗು, ನುಗ್ಗೆ, ಕಾಳುಮೆಣಸು, ಗೇರು, ಪಪ್ಪಾಯ, ಕೋಕೋ, ಮಲ್ಲಿಗೆ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಹರೀಶ್ ದೂರವಾಣಿ ಸಂಖ್ಯೆ9036893214 .
ಬಂಟ್ವಾಳ ತಾಲೂಕಿನ ವಿಟ್ಲ ತೋಟಗಾರಿಕೆ ಕ್ಷೇತ್ರದಲ್ಲಿ ನುಗ್ಗೆ, ಮಾವು, ಕಾಳುಮೆಣಸು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರವಿರಾಜ್ ದೂರವಾಣಿ ಸಂಖ್ಯೆ 9449895062.
ಪುತ್ತೂರು ತಾಲೂಕಿನ ಕಬಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು ಕಸಿ, ಅಡಿಕೆ, ನುಗ್ಗೆ, ಕಾಳುಮೆಣಸು, ತೆಂಗು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ರವಿರಾಜ್ ದೂರವಾಣಿ ಸಂಖ್ಯೆ 9449895062.
ಸುಳ್ಯ ತಾಲೂಕಿನ ಹೊಸಗದ್ದೆ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು ಕಸಿ, ಕಾಳು ಮೆಣಸು, ಮಾವು, ಕೋಕೋ, ಅಡಿಕೆ, ತೆಂಗು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಲೋಕೇಶ್ ದೂರವಾಣಿ ಸಂಖ್ಯೆ 9980546690.
ಬೆಳ್ತಂಗಡಿ ತಾಲೂಕಿನ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು, ಅಡಿಕೆ, ತೆಂಗು, ಕಾಳುಮೆಣಸು, ಪಪ್ಪಾಯ, ನುಗ್ಗೆ ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಲಿಖಿತಾರಾಜ್ ದೂರವಾಣಿ ಸಂಖ್ಯೆ 9738515575 ಮತ್ತು ಲೋಕಯ್ಯ ದೂರವಾಣಿ ಸಂಖ್ಯೆ 9632303018.
ಬೆಳ್ತಂಗಡಿ ಕಚೇರಿ ನರ್ಸರಿ ಹಾಗೂ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, ಕಾಳುಮೆಣಸು ತೋಟಗಾರಿಕೆ ಬೆಳೆಗಳಿದ್ದು ಮಾಹಿತಿಗಾಗಿ ಸಂಪರ್ಕಿಸಬಹುದಾದ ಅಧಿಕಾರಿ – ಮೈಲಾರ ದೂರವಾಣಿ ಸಂಖ್ಯೆ 9663247367 .
ಗಿಡಗಳು ಅಡಿಕೆ ಇಲಾಖಾ ದರರೂ.20, ಕಸಿಗೇರು ಇಲಾಖಾ ದರರೂ.25, ಕೋಕೋ ಇಲಾಖಾ ದರರೂ.10, ಕಾಳುಮೆಣಸು ಇಲಾಖಾ ದರರೂ.9, ತೆಂಗು ಇಲಾಖಾ ದರ ರೂ.60, ನುಗ್ಗೆ ಇಲಾಖಾ ದರರೂ.8, ಪಪ್ಪಾಯ ಇಲಾಖಾ ದರರೂ 10, ಮಲ್ಲಿಗೆ ಇಲಾಖಾ ದರರೂ 12, ಮಾವು ಇಲಾಖಾ ದರರೂ.32.
ಆಸಕ್ತ ರೈತರು ಸಂಬಂಧಪಟ್ಟಕ್ಷೇತ್ರ ಮತ್ತು ನರ್ಸರಿಗಳನ್ನು ಸಂಪರ್ಕಿಸಿ ತೋಟಗಾರಿಕೆ ಗಿಡಗಳನ್ನು ಪಡೆದುಕೊಳ್ಳಬಹುದುಎಂದು ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೆಶಕರ ಪ್ರಕಟಣೆ ತಿಳಿಸಿದೆ.
ಭ್ರಷ್ಟಾಚಾರನಿಗ್ರಹ ದಳ ಅಧಿಕಾರಿಗಳ ತಾಲೂಕುಪ್ರವಾಸ
ದಕ್ಷಿಣ ಕನ್ನಡಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜೂನ್ 22, 23 ಮತ್ತು 24 ರಂದುಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲಿದ್ದಾರೆ.
ದೂರುಗಳನ್ನು ಸ್ವೀಕರಿಸುವ ಸ್ಥಳ ಮತ್ತು ದಿನಾಂಕ ಇಂತಿವೆ: ಬೆಳ್ತಂಗಡಿ ಸರ್ಕಾರಿನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆ, ಬಂಟ್ವಾಳ ಸರ್ಕಾರಿನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 22ರಂದು ಮಧ್ಯಾಹ್ನ2.30 ಗಂಟೆಯಿಂದ ಸಂಜೆ 4.30 ಗಂಟೆ, ಸುಳ್ಯ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಬೆಳಿಗ್ಗೆ 11ಗಂಟೆಯಿಂದ ಮದ್ಯಾಹ್ನ 1 ಗಂಟೆ, ಪುತ್ತೂರು ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 23 ರಂದು ಮದ್ಯಾಹ್ನ 2.30 ಗಂಟೆಯಿಂದ ಸಂಜೆ 4.30 ಗಂಟೆ, ಮೂಡಬಿದ್ರೆ ಸರ್ಕಾರಿ ನಿರೀಕ್ಷಣಾ ಮಂದಿರದ ತಾಲೂಕು ಕೇಂದ್ರದಲ್ಲಿ ಜೂನ್ 24 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರಿಂದ ದೂರು ಸ್ವೀಕರಿಸುವರು.
ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ 0824-2483000 ಸಂಪರ್ಕಿಸಲು ಮಂಗಳೂರು ಎ.ಸಿ.ಬಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ಜೂನ್ 21 ರಂದುಅಂತರಾಷ್ಟ್ರೀಯಯೋಗ ದಿನಾಚರಣೆ
ಪ್ರತಿ ವರ್ಷದಂತೆ ಜೂನ್21ರ ದಿನದಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವುದು ವಾಡಿಕೆಯಾಗಿರುತ್ತದೆ. ಪ್ರಸ್ತುತ ಸಾಲಿನಲ್ಲಿ ಕೋವಿಡ್-19ರ ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳು, ಮತ್ತಿತ್ತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇದಿಸಿರುವುದರಿಂದ ಈ ಸಾಲಿನಲ್ಲಿ “ಮನೆಯಲ್ಲಿಯೇಯೋಗ- ಕುಟುಂಬದೊಂದಿಗೆ ಯೋಗ” ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಗ ದಿನಾಚರಣೆಯನ್ನುಆಚರಿಸಲು ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸೂಚಿಸಿದೆ.
ಆದುದರಿಂದ ಜೂನ್ 21 ರಂದು ಆಯುಷ್ ಸಚಿವರ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮವನ್ನುಉದ್ಘಾಟಿಸಲಿದ್ದು, ಪ್ರಧಾನ ಮಂತ್ರಿಗಳು ವಿಡಿಯೋ ಸಂದೇಶವನ್ನುಜನತೆಗೆ ನೀಡಲಿರುವರು.
ನಂತರ ಯೋಗ ತಜ್ಞರುಗಳಿಂದ ಯೋಗಾಸನಗಳ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುವುದು. ದೂರದರ್ಶನದ ಎಲ್ಲಾ ಚಾನೆಲ್ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದ್ದು, ಯೋಗ ಪ್ರಾತ್ಯಕ್ಷಿಕೆಗಳನ್ನು ನೋಡಿಕೊಂಡು ಸಾರ್ವಜನಿಕರು ಮನೆಯಲ್ಲಿಯೇ ಕುಟುಂಬದೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಬೇಕೆಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಇಲಾಖಾ ಪರೀಕ್ಷೆ – ಸರಕಾರಿ ನೌಕರರಿಗೆತರಬೇತಿ
ಕರ್ನಾಟಕ ಲೋಕಸೇವಾ ಆಯೋಗದ 2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ಜುಲೈ 2020ರಲ್ಲಿ ಜರಗಲಿದ್ದು, ಈ ಪರೀಕ್ಷೆಗಳಿಗೆ ಹಾಜರಾಗುವ ಸರಕಾರಿ ನೌಕರರಿಗೆ ತರಬೇತಿ ತರಗತಿಗಳು ಜುಲೈ3ರಿ0ದ ಹ0ಪನಕಟ್ಟೆಯಲ್ಲಿರುವ ಸರಕಾರಿ ನೌಕರರ ಸಭಾಭವನದಲ್ಲಿ ಪ್ರಾರಂಭವಾಗಲಿದೆ.
ಪ್ರತಿದಿನ ಸ0ಜೆ 6 ಗ0ಟೆಗೆ ತರಗತಿಗಳು ಪ್ರಾರ0ಭವಾಗಲಿದ್ದು ಆಸಕ್ತ ಸರಕಾರಿ ನೌಕರರು ತರಬೇತಿಯ ಸದುಪಯೋಗವನ್ನು ಪಡೆಯಬಹುದು ಎ0ದು ಕರ್ನಾಟಕರಾಜ್ಯ ಸರಕಾರಿ ನೌಕರರ ಸ0ಘದ ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ಅವರ ಪ್ರಕಟಣೆ ತಿಳಿಸಿದೆ.
ಕದ್ರಿಉದ್ಯಾನವನ– ಇ-ಟೆಂಡರ್ಆಹ್ವಾನ
2020-21ನೇ ಸಾಲಿಗೆ ಕದ್ರಿ ಉದ್ಯಾನವನದಲ್ಲಿ ಸ್ಕೇಟಿಂಗ್ರಿಂಕ್ ಬಳಕೆ/ನಿರ್ವಹಣೆಗೆ ಇ-ಪ್ರೋಕ್ಯೂರ್ಮೆಂಟ್ ಟೆಂಡರ್ ಮೂಲಕ ಅರ್ಜಿಆಹ್ವಾನಿಸಲಾಗಿದೆ. ಇ-ಪ್ರೋಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಸಲ್ಲಿಸಲು ಕೊನೆಯ ದಿನ ಜುಲೈ 17ರಂದು ಮಧ್ಯಾಹ್ನ 4ಗಂಟೆ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು, ರಾಜ್ಯ ವಲಯ ಹಿರಿಯ ತೋಟಗಾರಿಕೆ ನಿರ್ದೇಶಕ ಕಚೇರಿ, ಇ-ಮೇಲ್ ಹಾಗೂ ದೂರವಾಣಿ ಸಂಖ್ಯೆ 0824-2444298ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ರಾಜ್ಯ ವಲಯದ ಹಿರಿಯ ತೋಟಗಾರಿಕೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.