ಮಂಗಳೂರು (www.vknews.com) : ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ವತಿಯಿಂದಜೂನು 21 ರಂದು 6ನೇ ಅಂತರಾಷ್ಷ್ರೀಯಯೋಗ ದಿನಾಚರಣೆಯನ್ನುಆನ್ಲೈನ್ ಮೂಲಕ ಇ-ಯೋಗ ದಿನಾಚರಣೆಯಾಗಿಆಚರಿಸಲಾಯಿತು.
ಬೆಂಗಳೂರಿನ ರಾಷ್ಷ್ರೋತ್ಥಾನ ವಿದ್ಯಾಕೇಂದ್ರದಯೋಗಚಿಕಿತ್ಸಕ ಹಾಗೂ ಯೋಗ ಭೋಧಕಯೋಗರತ್ನ ಪ್ರವೀಣಎಸ್ಇ-ಯೋಗವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿ, ಅಧ್ಯಾಪಕರು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರನ್ನು ಉದ್ದೇಶಿಸಿ ಮಾತನಾಡಿದ ಪ್ರವೀಣ್ಎಸ್. ಇವರುಯೋಗವು 99% ಅಭ್ಯಾಸ ಮತ್ತು 1% ಸಿದ್ದಾಂತವಾಗಿದೆ ಎಂದುಅಭಿಪ್ರಾಯಪಟ್ಟರು. ಭಗವದ್ಗೀತೆಯಲ್ಲಿ ಉಲ್ಲೇಖಿಸಿದಂತೆ ಯೋಗವು ಸ್ವಯಂಅನುಶಾಸನವೆಂದರು. ಯೋಗವು ಮನುಷ್ಯನದೇಹ, ಮನಸ್ಸು ಮತ್ತುಆತ್ಮಕ್ಕೆ ಶಕ್ತಿ ಮತ್ತು ಸೌಂದರ್ಯವನ್ನುಕೊಡುತ್ತದೆ. ದೇಹವು ಚಲನೆಯಿಂದ ಹಾಗೂ ಸ್ಥಿರತೆಯಿಂದಿರಲು ಪ್ರಯೋಜನವಾಗುತ್ತದೆ.
ಭಾರತ ಸರ್ಕಾರದಆಯುಷ್ ಸಚಿವಾಲಯ ಬಿಡುಗಡೆ ಮಾಡಿದಯೋಗ ದಿನದ ಮಾರ್ಗಸೂಚಿಯ ಪ್ರಕಾರ ವಿವಿಧ ಸ್ಥರದ ಆಸನಗಳು, ಪ್ರಾಣಯಾಮ ಮತ್ತುಧ್ಯಾನವನ್ನು ಅಭ್ಯಾಸಿಸುವ ಮೂಲಕ ಆಚರಿಸಲಾಯಿತು. ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯಾದರ್ಶಿ ಶ್ರೀ ಸಂಜೀತ್ ನಾೈಕ್ ಮಾತನಾಡಿಯೋಗಎಂದರೆದೈನಂದಿನ ಚಟುವಟಿಕೆಯಾಗ ಬೇಕು. ಯೋಗವನ್ನು ದಿನನಿತ್ಯಅಭ್ಯಾಸ ಮಾಡುವುದರಿಂದ ಮನಸ್ಸು ಮತ್ತುದೇಹವನ್ನು ನಿಯಂತ್ರಣದಲ್ಲಿಇಡಬಹುದು. ಇದರ ಪರಿಣಾಮಉತ್ತಮಆರೋಗ್ಯ ಮತ್ತು ಹೆಚ್ಚಿನ ಕೆಲಸ ಮಾಡುವ ಸಾಮಥ್ರ್ಯ ಲಭಿಸುತ್ತದೆಎಂದು ಶುಭ ಹಾರೈಸಿದರು.
ಈ ಆನ್ಲೈನ್ಇ-ಯೋಗದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಧಾನ ಸಲಹೆಗಾರರಮೇಶ್ ಕೆ,ಅಭಿವೃದ್ಧಿಅಧಿಕಾರಿ ಪ್ರಖ್ಯಾತ್ರೈ, ಶಕ್ತಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮಾತ್ ಹಾಗೂ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಆಯೋಜನೆಯನ್ನುಕ್ರೀಡಾ ಶಿಕ್ಷಕರಾದ ಶ್ರೀನಿವಾಸ, ತಾಂತ್ರಿಕ ಸಲಹೆಗಾರರಾಗಿ ವಿನೋದ್ ಡಿ. ಸೋಜ, ಮತ್ತು ನಿಶಾ ಆಚಾರ್ಯ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.