(www.vknews.com) : SKSSF ವಳಚ್ಚಿಲ್ ಶಾಖೆ ವತಿಯಿಂದ ಶಂಸುಲ್ ಉಲಮಾ ಕ್ರಿಯಾ ಸಮಿತಿ ವಳಚ್ಚಿಲ್ ಕಛೇರಿಯಲ್ಲಿ ಕಾರ್ಮಿಕ ಕಾರ್ಡ್ ಮತ್ತು ಆಯುಷ್ಮಾನ್ ಆರೋಗ್ಯ ಕಾರ್ಡ್ ಶಿಬಿರವು ಊರ ನಾಗರಿಕರ ಸಹಾಯ ಸಹಕಾರದಿಂದ ನಿರೀಕ್ಷೆಗೂ ಮೀರಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಬಹು! ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಉಸ್ತಾದರು ದುಃಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಾತಿ ಮತ ಭೇದವಿಲ್ಲದೆ ಸರ್ವ ಧರ್ಮಿಯ ಕಾರ್ಮಿಕರು ಮತ್ತು ಊರಿನ ಮತ್ತು ಆಸು ಪಾಸಿನ ಹೆಚ್ಚಿನ ಜನರು ಶಿಬಿರದಲ್ಲಿ ಭಾಗವಹಿಸುವ ಮೂಲಕ ಅದರ ಸದುಪಯೋಗ ಪಡೆಯುವುದರೊಂದಿಗೆ SKSSF ವಳಚ್ಚಿಲ್ ಶಾಖೆ ಗೆ ಪ್ರಶಂಸೆ ಹಾಗೂ ಇನ್ನೂ ಮುಂದೆ ಕೂಡಾ ಇಂತಹ ಸಮಾಜ ಸೇವೆ ಕೆಲಸಗಳನ್ನು ಮಾಡಲು ನಾವೂ ಕೈಜೋಡಿಸತ್ತೇವೆ ಎಂಬ ಭರವಸೆಯನ್ನು ಊರಿನ ನಾಗರಿಕರು ಭರವಸೆ ನೀಡಿದರು .
ಕಾರ್ಯಕ್ರಮದಲ್ಲಿ ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷರಾದ ನಝೀರ್ ವಳಚ್ಚಿಲ್ಪದವು, SKSSF ವಳಚ್ಚಿಲ್ ಶಾಖಾ ಅಧ್ಯಕ್ಷರಾದ ದಾವೂದ್ ಐಫಾ,SKSSF ಮಂಗಳೂರು ವಲಯ ಪ್ರ.ಕಾರ್ಯದರ್ಶಿ ಇರ್ಫಾನ್ ಕಣ್ಣೂರ್, ಪ್ರ.ಕಾರ್ಯದರ್ಶಿ ಹಾರಿಸ್ N M, ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಹಾಗೂ SKSSF ವಳಚ್ಚಿಲ್ ಶಾಖಾ ವಿಖಾಯ ಕನ್ವೀನರ್ ಸಮೀರ್ ಶಾನ್, ಸೈಬರ್ ವಿಂಗ್ ಮುಖ್ಯಸ್ಥ ನಸೀಬ್ CH,ವರ್ಕಿಂಗ್ ಕಾರ್ಯದರ್ಶಿ ಫೈಝಲ್, SUKS ಪ್ರ.ಕಾರ್ಯದರ್ಶಿ ಮಾಲಿಕ್ MSK, ಜೊತೆ ಕಾರ್ಯದರ್ಶಿ ಇಮ್ರಾನ್, ಸದಸ್ಯರಾದ ಸಮದ್, ಇರ್ಷಾನ್, ನೌಫಲ್, ಝವಾಲ್, ಹಾಗೂ ಇನ್ನಿತರ ಸದಸ್ಯರು ಮೊದಲಾದ ನಾಗರಿಕ ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಸಹಕರಿಸಿದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.