ಸಮಸ್ತ ಸ್ಥಾಪಕ ದಿನಾಚರಣೆ ಅಂಗವಾಗಿ ವಿಶೇಷ ಲೇಖನ…
(www.vknews.com) : ಇಹ ಪರ ವಿಜಯಕ್ಕಾಗಿ ಅಲ್ಲಾಹನಿಂದ ಅವತೀರ್ಣಗೊಂಡ, ಆದಿ ಮನುಷ್ಯರೂ ಪ್ರಥಮ ಪ್ರವಾದಿಯು ಆದ ಹಝ್ರತ್ ಆದಂ [ಅ] ರಿಂದ ಪ್ರವಾದಿ ಶ್ರೇಷ್ಠರಾದ ಮುಹಮ್ಮದ್ ಮುಸ್ತಫಾ [ಸ] ರ ವರೆಗೆ ಸರ್ವ ಪ್ರವಾದಿಗಳು ಭೋದಿಸಿದ ಧರ್ಮವಾಗಿದೆ ಪವಿತ್ರ ಇಸ್ಲಾಂ ಪ್ರವಾದಿಯವರ ಕಾಲದಲ್ಲಿಯೇ ವಿಶಾಲವಾದ ಭಾರತದ ಕೇರಳ ಕರಾವಳಿಯು ಇಸ್ಲಾಂ ಧರ್ಮದ ಹೊಂಗಿರಣಗಳಿಂದ ಪ್ರಶೋಭಿತವಾಗಿತ್ತೆಂದು ಇತಿಹಾಸ ಗ್ರಂಥಗಳಿಂದ ತಿಳಿದು ಬರುತ್ತದೆ. ಪ್ರವಾದಿಯರಿಂದ ಈ ಧರ್ಮ ಪ್ರಭೋದನೆಯ ಉನ್ನತ ಹೊಣೆಗಾರಿಕೆಯನ್ನು ವಹಿಸಿದ ಧಾರ್ಮಿಕ ವಿಧ್ವಾಂಸರು ಈ ಸತ್ಯ ಸಂದೇಶದ ವಾಹಕರಾದರು.
ಮೊತ್ತ ಮೊದಲು ಅಂದರೆ 1925 ರಲ್ಲಿ ಮುಹಮ್ಮದ್ ಮೀರಾನ್ ಮುಸ್ಲಿಯಾರ್ ಅಧ್ಯಕ್ಷರಾಗಿಯೂ, ಪಾರೋಲ್ ಹುಸೈನ್ ಮುಸ್ಲಿಯಾರ್ ಕಾರ್ಯಧರ್ಶಿಯಾಗಿಯು ರೂಪಿಸಿದ ಉಲಮಾ ಸಂಘಟನೆಯು ಒಂದು ವರ್ಷ ಕಾಲ ಜನರಿಗೆ ಇದರ ಅನಿವಾರ್ಯತೆಯ ಕುರಿತು ಮಾಹಿತಿಯನ್ನು ನೀಡಿದರು. ನಂತರ 1926 ರಲ್ಲಿ ಕೇರಳದ ನಾನಾ ಭಾಗದ ವಿಧ್ವಾಂಸರನ್ನು ಸೇರಿಸಿ ಕಲ್ಲಿಕೋಟೆಯ ಪುರಭವನದಲ್ಲಿ ಸಯ್ಯಿದ್ ಶಿಹಾಬುದ್ದೀನ್ ಚೆರು ಕೋಯತಂಗಳ್ ರ ಅಧ್ಯಕ್ಷತೆಯಲ್ಲಿ ಸಭೆ ಸೇರಿ “ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ” ಎಂಬ ವಿಧ್ವಾಂಸ ಸಭೆಯನ್ನು ರೂಪಿಸಲಾಯಿತ್ತು. ಸಯ್ಯದ್ ಅಬ್ದುರ್ರಹ್ಮಾನ್ ಭಾಅಲವಿ ವರಕ್ಕಲ್ ಮುಲ್ಲಕೋಯ ತಂಗಲ್ ಅಧ್ಯಕ್ಷರಾಗಿಯೂ, ಪಾಂಘಿಲ್ ಅಹಮ್ಮದ್ ಕುಟ್ಟಿ ಮುಸ್ಲಿಯಾರ್ ಉಪಾಧ್ಯಕ್ಷರಾಗಿಯೂ, ಪಿ ವಿ ಮುಹಮ್ಮದ್ ಮುಸ್ಲಿಯಾರ್ ಮತ್ತು ಪಿ ಕೆ ಮುಹಮ್ಮದ್ ಕೋಯ ಮುಸ್ಲಿಯಾರ್ ಕೊಶಾಧಿಕಾರಿಯಾಗಿಯು ನೇಮಿಸಲಾಯಿತು, ಈ ಉಲಮಾ ನೆತಾರರೆಲ್ಲರು ಅಲ್ಲಾಹನಲ್ಲಿ ಭಯವುಳ್ಳ ತಖ್ವಾ ದಿಂದ ಆವೃತವಾದ ನಿಷ್ಖಲಂಕ ಸಾತ್ವಿಕ ಮಹಾ ಪುರುಷರಾಗಿದ್ದರು.
ಸ್ಥಾಪಕ ನೇತಾರರ ನಂತರ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ, ಮ), ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್ (ನ, ಮ), ಕೆ ಕೆ ಅಬೂಬಕ್ಕರ್ ಹಜ್ಹ್ರತ್ (ನ, ಮ), ಕೋಟುಮಲ ಅಬೂಬಕ್ಕರ್ ಮುಸ್ಲಿಯಾರ್ (ನ, ಮ), ಉಲಮಾ ಲೋಕದ ಸೂರ್ಯ ತೇಜಸ್ವಿ ಎಂದೇ ಅರಬ್ ಲೋಕದಲ್ಲಿ ಪ್ರಕ್ಯಾತರಾದ ಮಹಾನ್ ಶಂಸುಲ್ ಉಲಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ (ನ, ಮ), ಕೆ.ವಿ ಮುಹಮ್ಮದ್ ಮುಸ್ಲಿಯಾರ್ (ನ, ಮ), ಮೊದಲಾದ ಉಲಮಾ ಕೇಸರಿಗಳು ಪವಿತ್ರ “ಸಮಸ್ತ”ಕ್ಕೆ ಸಾರಥ್ಯ ವಹಿಸಿದವರಲ್ಲಿ ಪ್ರಮುಖರಾಗಿದ್ದಾರೆ.
ಅಂದಿನಿಂದ “ಸಮಸ್ತ”ವು ಕೇರಳವನ್ನು ಆಸ್ತಾನವನ್ನಾಗಿರಿಸಿ ಸಮುದಾಯದ ಶಕ್ತಿಯಾಗಿ ಅಹ್ಲು ಸ್ಸುನ್ನತ್ ವಲ್ ಜಮಃ ಅತಿನ ಆಶಯ ಆಧರ್ಶಗಳ ಚಿಲುಮೆಯಾಗಿ ಸಮುದಾಯದ ಐಕ್ಯತೆಯನ್ನು ಸುಭಾದ್ರವಾಗಿರಿಸಿ ಇಂದು “ಸಮಸ್ತ”ವು ರಾಜ್ಯ ಮತ್ತು ರಾಷ್ಟ್ರದ ಗಡಿಗಳನ್ನು ದಾಟಿ ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ನಿಸ್ವಾರ್ಥ ಸೇವೆಯನ್ನು ನೀಡುತ್ತಿದೆ.
ಸ್ವಹಬತ್ [ರ] ಮತ್ತು ತಾಬಿಹ್ ತಾಬಿಉನ್ ಗಳ ಕಾಲದಿಂದ ಆಚರನೆಯಲ್ಲಿಧ ಸಂಪ್ರದಾಯಗಳಿಗೆ ವಿರುದ್ದವಾದಗಳೊಂದಿಗೆ ತಲೆಯೆತ್ತಿದ ನೂತನವಾದಿಗಳು ಖುರಾನ್ ಮತ್ತು ಹದೀಸ್ ಗಳನ್ನೂ ತಮಗೆ ತೋಚಿದಂತೆ ತಿರುಚಿ ಸ್ವ ಇಚ್ಚೆಯಂತೆ ತೀವ್ರವಾದಿ ವ್ಯಾಕ್ಯನಗಳನ್ನು ಬರೆದು ಕೋಮು ಸಾಮರಸ್ಯ ಮತ್ತು ಸಮುಧಾಯದ ಐಕ್ಯತೆಯನ್ನು ಚಿಧ್ರಗೊಳಿಸಲು ಮುಂದಾಗಿ ಐಕ್ಯ ಸಂಘ ಎಂಬ ಹೆಸರಲ್ಲಿ ಅನೈಕ್ಯ ಶ್ರಿಷ್ಟಿಸಲು ಸನ್ನದ್ಧರಾದಾಗ, ಈ ಅಪಾಯಕಾರಿ ಬೆಳವಣಿಗೆಯಿಂದ ಸಮುದಾಯದ ರಕ್ಷಣೆಯ ಅನಿವಾರ್ಯತೆಯನ್ನು ಮನಗಂಡು ಅಂದಿನ ಕಾಲದ ಕೆಲವು ಧೀರ್ಘವೀಕ್ಷನೆಯುಲ್ಲ ಸಾತ್ವಿಕರಾದ ಉಲಮಾಗಳು ಕರ್ತವ್ಯ ಪ್ರಜ್ಞೆಯೊಂದಿಗೆ ರಂಗ ಪ್ರವೇಶಿಸಿದರು. ಅವರೆಲ್ಲರೂ ಕಲ್ಲಿಕೋಟೆಯ ಹಿರಿಯ ಜುಮಃ ಮಸ್ಜಿದ್ಹ್ ನಲ್ಲಿ ಒಂದುಗೂಡಿ ಈ ಅನೈಕ್ಯ ವಾತಾವರಣವನ್ನು ಶ್ರಿಷ್ಟಿಸಲು ಪ್ರಯತ್ನಿಸುವ ದುಷ್ಟ ಶಕ್ತಿಗಳ ವಿಚಾರಧಾರೆಗಳನ್ನು ಮಹತ್ತರವಾಗಿ ಚರ್ಚಿಸಿದರು.
ತನ್ನ ಶ್ರಿಷ್ಟಿಕರ್ತನೊಂದಿಗಿರುವ ಅಚಂಚಲ ವಿಶ್ವಾಸವನ್ನು ಮಾತ್ರವೇ ಬಂಡವಾಳವಾಗಿರಿಸಿ, ಗೊರ್ಗರೆಯುವ ಅರಬಿ ಸಮುಧ್ರದ ಅಲೆಗಳನ್ನು ದಾಟಿ ಒಂದು ವಿಭಾಗ ಪುಣ್ಯಾತ್ಮರುಗಳು ಕೇರಳ ಕರಾವಳಿ ತಲುಪಿದರು. ಆ ಸಾತ್ವಿಕ ಪುರುಷರ ಧರ್ಮಭಕ್ತಿ, ಧರ್ಮನಿಷ್ಠೆ, ಸತ್ಯ ಸಂದತೆ, ಐಕ್ಯ ಪ್ರಜ್ಞೆ, ಸಾಹೋದರ್ಯತೆ ಹಾಗು ಸಮಾನತೆ, ವಿನಯ ಪೂರ್ಣವಾದ ಸಹವಾಸಗಳನ್ನು ಕಂಡು, ಜಾತಿಗಳ ಶೃಂಖಲೆಗಳಲ್ಲಿ ಬಂದಿತರಾಗಿ, ಶೋಷಣೆಯ ಕಹಿ ನೀರನ್ನು ಕುಡಿಯುತ್ತಾ ಚತುರ್ವರ್ಣಗಳ ಪ್ರಭಾವದಿಂದ ಚಿಧ್ರತೆಯಿಂದ ಉಸಿರಾಡುತ್ತಾ, ಕೆಲಧರ್ಜೆಯವರು ಉನ್ನತರ ಕಾಲ್ತುಳಿತಕ್ಕೊಳಗಾಗಿ, ಸ್ವಾತಂತ್ರ ರಹಿತರಾಗಿ ಜೀವಿಸುತ್ತಿದ್ದ ಅಂದಿನ ಭಾರತೀಯರು ಆ ಸಮಾನತೆಯ ತತ್ವಾದರ್ಷದೆಡೆಗೆ ಆಕರ್ಷಿತರಾಗಿ ಅಲ್ಲಿನ ಅನುಯಾಯಿಗಲಾದರು.
ಇಸ್ಲಾಮಿನ ಸತ್ಯ ಸಂಧೇಶದೊಂದಿಗೆ ಕೇರಳ ತೀರವನ್ನು ಸೇರಿದ ಆ ಸಾತ್ವಿಕ ಪುರುಷರು ಮುಸ್ಲಿಂ ಸಮೂಹದ ಕರ್ಮಾನುಷ್ಟಾನಗಳಿಗಾಗಿ ಇಲ್ಲಿ ಧಾರ್ಮಿಕ ಅರಾದನ ಕೇಂದ್ರಗಳನ್ನು ನಿರ್ಮಿಸಿದರು. ನಿರ್ಭಯರಾಗಿ ಅವರು ಜೀವಿಸಿ, ಇಸ್ಲಾಮಿನ ಸಂಧೇಶಗಳನ್ನು ಅಷ್ಠದಿಕ್ಕುಗಳಿಗೂ ಪ್ರಚುರಪಡಿಸಿದರು, ಹಾಗೆ ಕೇರಳದ ಗಡಿಗಳನ್ನು ದಾಟಿ ಭಾರತದಾದ್ಯಂತ ಇಸ್ಲಾಮಿನ ಹೊಂಗಿರಣಗಳು ಪ್ರಬಾವಬೀರತೊಡಗಿತು.
ಅಂದಿನ ಕೇರಳ ಜನತೆಯು ಅವರಿಗೆ ಬೇಕಾದ ಎಲ್ಲಾ ಸಹಾಯ ಸಹಕಾರಗಳನ್ನು ನೀಡುತ ಐಕ್ಯತೆ ಮತ್ತು ಶಿಸ್ತುಭದ್ದತೆಯಿಂದ ಕೂಡಿದ ಒಂದು ಸಮೂಹವು ಇಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಾ ವಿಶ್ವ ಪ್ರಸಿದ್ದ ವಿದ್ವಾಂಸರ ಮುಖಾಂತರ ಇಸ್ಲಾಮಿನ ನೈಜ ರೂಪವು ಇಲ್ಲಿ ನೆಲೆಗೊಂಡಿತು. ವಿಶ್ವಾಸಪರ ಕಾರ್ಯಗಳಲ್ಲೋ ಕರ್ಮಪರ ಕಾರ್ಯಗಳಲ್ಲೋ ಯಾರಿಗೂ ಯಾವುದೇ ಬಿನ್ನಾಭಿಪ್ರಾಯಗಲಿರಲಿಲ್ಲ
ಸ್ವಹಬತ್ ಮತ್ತು ತಾಬಿಉಗಳು ಕಲಿಸಿದ ಇಸ್ಲಾಮಿನ ಆಚಾರ ವಿಚಾರಗಳನ್ನು ಅದರ ಮೂಲ ರೂಪದಲ್ಲೇ ಅರಿತು ಅವುಗಳನ್ನು ಪಾಲಿಸುತ್ತಿದ್ದರು. ಧರ್ಮದಲ್ಲಿರುವ ಅವರ ವಿಶ್ವಾಸವು ಧ್ರುಡವಾಗಿತ್ತು. ಅಲ್ಲಾಹನಲ್ಲಿ ಅಚಂಚಲ ಭರವಸೆಯನ್ನಿಟ್ಟ ಅವರ ಜೀವನವು ನಿಷ್ಕಲಂಕವಾಗಿತ್ತು. ಧರ್ಮ ವಿಧ್ವಾಂಸರೊಂದಿಗೆ ಅವರ ಅನುಕರಣೆಯೂ ಪ್ರಶಂಸನೀಯವಾಗಿತ್ತು. ಯಾವುದೇ ಚಿಧ್ರತೆಯ ವಿಷಗಾಳಿಯು ಸೊಂಕದೆ ಅಂದಿನ ಮುಸ್ಲಿಂ ಸಮೂಹವು ಪರಸ್ಪರ ಸ್ನೇಹದಿಂದಲೂ ಸೌಹರ್ದತೆಯಿಂದಲೂ ಇಸ್ಲಾಮಿನ ನೈಜ ರೂಪವಾದ ಅಹ್ಲು ಸ್ಸುನ್ನತ್ ವಲ್ ಜಮಅತ್ತಿನ ಆದರ್ಶ ಆಶಯಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಸ್ವೀಕರಿಸಿ ಬಂದರು.
ಪರಿಶುದ್ದ ಇಸ್ಲಾಮಿನ ಆರಂಬ ಕಾಲದ ಪ್ರಚಾರಕರಾದ ಸ್ವಹಾಬತ್ ಮತ್ತು ತಾಬಿಉ ತಾಬಿಉನ್ ಗಳು ತೋರಿಸಿಕೊಟ್ಟ ಅಹ್ಳುಸುನ್ನತ್ ವಲ್ ಜಮಅತ್ ನ ಆಶಯಾದರ್ಶಗಳನ್ನು ಅಕ್ಷರಶಃ ಪಾಲಿಸುತ್ತಾ ದಾರ್ಮಿಕ ಸೂಕ್ಷ್ಮತೆ, ಐಕ್ಯತೆ ಮತ್ತು ಸಾಹೋದರ್ಯತೆಯಿಂದ ಜೀವಿಸುತ್ತಿದ್ದ ಆ ಮಾದರಿಯೋಗ್ಯ ಸಮೂಹದ ಮದ್ಯೆ ಇಸ್ಲಾಮಿಗೆ ಅನ್ಯವೆನಿಸಿದ ಅಪಾಯಕಾರಿ ಸಿದ್ಧಾಂತಗಳೊಂದಿಗೆ ಕೆಲವು ನೂತನವಾದಿ ಪಂಗಡಗಳು ತಲೆ ಎತ್ತಲಾರಂಬಿಸಿದವು. ಜಪ ಮಾಲೆಯ ಜಪಮಣಿಗಳಂತೆ ಐಕ್ಯತೆ ಒಕ್ಕೊರಲಿನಿಂದ ಜೀವಿಸುತ್ತಿದ್ದ ಅಂದಿನ ಮುಸ್ಲಿಂ ಸಮುದಾಯದಲ್ಲಿ ಬಿನ್ನತೆಯ ವಿಷ ಬೀಜಗಳು ಮೊಳಕೆಯೊಡೆಯಿತು.
ನಿಸ್ವಾರ್ಥಿ ಹಾಗು ಸಾತ್ವಿಕರು ಆದ “ಸಮಸ್ತ” ದ ಉಲಮಾ ನೆತಾರರೆಲ್ಲರು ಊರ್ಜಿತವಾದ ತಮ್ಮ ಚಟುವಟಿಕೆಗಳೊಂದಿಗೆ ಮುನ್ನಡೆದರು, ನ್ಯೂನತೆಯಿಂದ ಕೂಡಿದ ಅಪಾಯಕಾರಿ ನೂತನವಾದಗಳು ಎಲ್ಲೆಲ್ಲಾ ತಲೆಯೆತ್ತಿ ಅಹ್ಲು ಸುನ್ನತ್ ವಲ್ ಜಮಅತ್ ನ ಸುಂದರ ಪ್ರಶಾಂತ ವಾತಾವರಣವನ್ನು ಕೆಡಿಸಲೆತ್ನಿಸಿತೋ, ಅಲ್ಲೆಲ್ಲಾ ಈ ಉಲಮಾ ಶಿರೋಮನಿಗಳು ಸಂಘಟಿತರಾಗಿ ಪವಿತ್ರ ಇಸ್ಲಾಮಿನ ಶುದ್ಧ ಗಾಳಿಯನ್ನು ಉಸಿರಾಡುವಂತೆ ಮಾಡಿದರು.
ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವ ಸಲ್ಲಂ) ರು ಹಾಗು ಅವರ ಅನುಚರರಾದ ಸ್ವಹಬತ್ ಗಳ ಮಾರ್ಗ ಚರ್ಯೆಯನ್ನು ಅನುಸರಿಸಿ ಜೀವಿಸುವ ಸುನ್ನತ್ ಜಮಾಅತ್ ನ ಅನುಯಾಯಿಗಳ ವಿಸ್ವಾಸ,ಆಚಾರ, ಕರ್ಮಗಳ ಬಗ್ಗೆ ಭೋದನೆ ಹಾಗು ಸಮುದಾಯದ ಒಗ್ಗಟ್ಟು ಮತ್ತು ಧಾರ್ಮಿಕ ನೇತೃತ್ವ ದ ಪರಮ ಗುರಿಯಾಗಿರಿಸಿದ “ಸಮಸ್ತ”ವು, ತನ್ನ ಗುರಿಯ ಸಾಕ್ಷಾತ್ಕಾರಕ್ಕಾಗಿ ಕಾರ್ಯೋನ್ಮುಖವಾಗಿ ಶ್ರಮಿಸುತ್ತಿದೆ.
ಈ ಧೀರ್ಘ ಪ್ರಯಾಣದಲ್ಲಿ “ಸಮಸ್ತ” ದ ಹಾದಿಯು ಸುಗಮವಾಗಿರಲಿಲ್ಲ. ಸ್ವಾರ್ಥ ಲಾಭಕ್ಕಾಗಿ ಸಮುದಾಯವನ್ನು ಒಡೆದು ಚಿದ್ರತೆಗಳನ್ನು ಸೃಸ್ಟಿಸಿ ಜೀವಿಸಲಿಚ್ಚಿಸುವ ಕೆಲವೊಂದು ದುಷ್ಟ ಶಕ್ತಿಗಳ ಸಂಘಟನಾ ಚಟುವಟಿಕೆಗಳು, ಭೌತಿಕವಾದಿಗಳ ಒಳ ನುಸುಳುವಿಕೆ, ಸಮುದಾಯದ ಅಸ್ತಿತ್ವದ ವಿರುದ್ದ ಮೊಳಕೆಯೊಡೆಯುತ್ತಿದ್ದ ನೀಚ ಸಿದ್ದಾಂತಗಳು, ಶಾಂತಿಯುತ ಜೀವನಕ್ಕೆ ಕೊಡಲಿಯೇಟು ಹಾಕುವ ಫ್ಯಾಸಿಸ್ಟ್ ಶಕ್ತಿಗಳ ಹೀನಾಯ ಶ್ರಮಗಳು, ಹಾಗು ಪವಿತ್ರವಾದ “ಸಮಸ್ತ” ದ ಮೇಲೆ ತಮ್ಮ ಆಧಿಪತ್ಯವನ್ನು ಸ್ಥಾಪಿಸಲೆತ್ನಿಸುವ ಸ್ವಾರ್ಥ ಮನೋಭಾವಿಗಳ ಕುತಂತ್ರಗಳು, ಇವೆಲ್ಲವೂ “ಸಮಸ್ತ” ಸಹಿಸಬೇಕಾಗಿ ಬಂದ ಸಂಕಟಗಲಾಗಿದ್ದವು, ಆದರೆ ಪರಮ ಕಾರುಣ್ಯನು ಸರ್ವ ಶಕ್ತನು ಆದ ಅಲ್ಲಾಹನ ಅನುಗ್ರಹದಿಂದ ತಖ್ವಾ (ದೈವ ಭಕ್ತಿ) ಅಡಿಪಾಯದಲ್ಲಿ ನೆಲೆಯೂರಿದ ನಿಷ್ಕಳಂಕ, ಸಾತ್ವಿಕ ವಿದ್ವಾಂಸ ಉಲಮಾ ನೇತೃತ್ವವನ್ನೊಳಗೊಂಡ “ಸಮಸ್ತ”ವು ನಿಶ್ಚಯ ದಾರ್ಡ್ಯತೆ ಮತ್ತು ಆದರ್ಶ ಧೀರತೆಯೊಂದಿಗೆ ಎಲ್ಲ ತೊಡಕುಗಳನ್ನು ಹಿಮ್ಮೆಟ್ಟಿಸಿ “ಸಮಸ್ತ”ವು ಅಜೇಯ ಶಕ್ತಿಯಾಗಿ ನೆಲೆಗೊಂಡಿತು.
ಸಮುದಾಯದಲ್ಲಿ ಧಾರ್ಮಿಕ್ಲ ಅಸಹಿಶ್ನುತೆಯನ್ನು ಸೃಷ್ಟಿಸಿ ಸಾಮಾಜಿಕ ಸಂತುಲನೆಗೆ ಧಕ್ಕೆ ತರುವ ಕೋಮುವಾದಿ ಆತಂಕಕಾರಿ ಸಿದ್ಧಾಂತಗಳ ಸದ್ದಡಗಿಸಲು ಉನ್ನತರಾದ ಆ ಮಹಾನ್ ಉಲಮಾ ಶಿರೋಮನಿಗಳು “ಸಮಸ್ತ”ವೆಂಬ ಆದರ್ಶ ಪ್ರಸ್ತಾನಕ್ಕೆ ಜನ್ಮ ಕೊಡದಿರುತ್ತಿದ್ದರೆ. ಇಂದಿನ ಮುಸ್ಲಿಂ ಸಮುದಾಯದ ಗತಿಯು ಸೋಚನೀಯವಾಗಿರುತಿತ್ತು .
ಈ ಉಲಮಾ ಶಿರೋಮಣಿಗಳ, ನಿಷ್ಖಲಂಕತೆ, ಅಲ್ಲಾಹನಲ್ಲಿರುವ ಅಚಂಚಲ ವಿಸ್ವಾಸ ಹಾಗು ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ಪ್ರತಿಫಲವೆಂಬಂತೆ ಕೇರಳ ಮಣ್ಣಿನಲ್ಲಿ ಬೇರೂರಿದ “ಸಮಸ್ತ” ಎಂಬ ಮಹಾನ್ ಸಂಘಟನೆಯು ಪ್ರಪಂಚದ ನಾನ ಬಾಗಗಳಲ್ಲಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ಭಾರತ ದ ನಾನ ಮೂಲೆಗಳಲ್ಲೂ ಎಂದಲ್ಲ ಏಷ್ಯಾ, ಯುರೋಪ್ ಹಾಗು ಅರೇಬಿಯಾದ ರಾಷ್ಟ್ರ ರಾಷ್ಟ್ರಗಳಲ್ಲೂ ಧಾರ್ಮಿಕ, ಸಾಮಾಜಿಕ, ಹಾಗು ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದೆ. ಧಾರ್ಮಿಕ ಮತ್ತು ಭೌತಿಕ ಶಿಕ್ಷಣದ ಸಮನ್ವಯವಾದ ಅತ್ಯಾದುನಿಕವಾದ ಸೌಕರ್ಯಗಳನ್ನೋಳಗೊಂಡ “ದಾರುಲ್ ಹುದ ಇಸ್ಲಾಮಿಕ್ ಯುನಿವೆರ್ಸಿಟಿ”, “ನಹ್ಜು ರಶಾದ್ ಅರೇಬಿಕ್ ಕಾಲೇಜು”, “ಜಾಮಿಯಃ ನೂರಿಯಃ ಅರೇಬಿಯ ಕಾಲೇಜು”, ಇಂಗ್ಲಿಶ್ ಮೀಡಿಯಂ ಬೋರ್ಡಿಂಗ್ ಸ್ಕೂಲ್, “MEA ಇಂಜಿನೀಯರಿಂಗ್ ಕಾಲೇಜು”, “ಮಹಿಳಾ ಕಾಲೇಜು”, ಸೇರಿದಂತೆ ದೇಶ ವಿದೇಶಗಳಲ್ಲಿ ಹತ್ತು ಸಾವಿರಕ್ಕೂ ಮಿಗಿಲಾದ ವಿಧ್ಯಾ ಸಂಸ್ಥೆಗಳು ಹಾಗು ಲಕ್ಷಕ್ಕೂ ಮಿಗಿಲಾದ ವಿಧ್ಯಾರ್ಥಿವೃಂದವು “ಸಮಸ್ತ”ದ ಅಭಿಮಾನವಾಗಿದೆ,
ಮುಸ್ಲಿಂ ಸಹೋದರರಿಗೆ ಆತ್ಮೀಯ ತಳಹದಿಯನ್ನು ಹಾಕಿ ಧಾರ್ಮೀಕ ಪ್ರಜ್ನೆಯುಲ್ಲವರಾಗಿಸಲು SYS ಎಂಬ ಯುವಜನ ಸಂಘವು ,SEA , SKSBV , SMF , SKJM , ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಸಂಘಗಳು ಕೋಮುವಾದ ಮತ್ತು ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಹಗಲು ರಾತ್ರಿಯೆನ್ನದೆ ತ್ಯಾಗ ಮನೋಬಾವದಿಂದ ಸೇವೆ ಸಲ್ಲಿಸುತ್ತಿರುವ “ಸಮಸ್ತ”ದ ಶ್ವೇತದಾರಿ ವಿಧ್ಯಾರ್ಥಿ ಸೈನ್ಯ SKSSF ನ ಕಾರ್ಯವೈಕರಿಯು ಪ್ರಶಮ್ಸಾರ್ಹನೀಯವಾಗಿದೆ. ಮುಸ್ಲಿಂ ಸಮೂಹದ ಧಾರ್ಮಿಕ ಮತ್ತು ಭೌತಿಕ ಉನ್ನತಿಗಾಗಿ ಕ್ರಿಯಾತ್ಮಕವಾದ ಹಲವಾರು ಪದ್ಧತಿಗಳನ್ನು ಆವಿಷ್ಕರಿಸಿ ಕಾರ್ಯೋನ್ಮುಕವಾದ “ಸಮಸ್ತ”ವು ಸರ್ವ ರಂಗದಲ್ಲೂ ವಿಜಯ ಪಾತಾಕೆಯನ್ನು ಹಾರಿಸಿದ ಏಕೈಕ ಧಾರ್ಮಿಕ ಉಲಮಾ ಸಭೆಯಾಗಿದೆ, ಆತ್ಮೀಯ ಶೋಶಕರಿಗೂ, ಅಲ್ಪಸಂಕ್ಯಾತರ ರಕ್ಷಣೆ ಎಂಬ ಹೆಸರಲ್ಲಿ ದೇಶದ ಸರ್ವ ಧರ್ಮ ಸಮರಸ್ಯೆಯನ್ನು ಕಳುಶಿತಗೊಲಿಸಲೆತ್ನಿಸುತ್ತಿರುವ ತೀವ್ರವಾದಿಗಳಿಗೂ “ಸಮಸ್ತ”ವು ತಾಕೀತಾಗಿ ನೆಲೆಗೊಂಡಿದೆ. ಸರ್ವ ಧರ್ಮ ಸಹೋದರತೆಯ ಪ್ರತೀಕವಾದ ಇಸ್ಲಾಮಿನ ನೈಜ ಸಂದೇಶದ ಪರಿಮಳವನ್ನು ನವ ಯುವ ಜನ ಸಮೂಹಕ್ಕೆ ನೀಡಿ ಶಾಂತಿ ಮತ್ತು ಸಮಾದಾನದ ಉತ್ತಮ ವಾತಾವರಣವನ್ನು ನಿರ್ಮಿಸುವತ್ತ “ಸಮಸ್ತ”ವು ಹಗಲಿರುಳೆನ್ನದೆ ಶ್ರಮಿಸುತ್ತ ಬಂದಿದೆ.
“ಸಮಸ್ತ”ದ ಇಂದು ಕಾಣುವ ಈ ವಿಜಯೋಲ್ಲಾಸದ ಹಿಂದೆ ವಿಧ್ವತ್ ಪ್ರಭೆಯಾದ ಶೈಕುನ ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್ (ರ.ಅ) ಹಾಗು ಶೈಕುನ ಶಂಸುಲ್ ಉಲಮಾ (ರ.ಅ) ಉಸ್ತಾದರವರ ತ್ಯಾಗವು ಅವಿಸ್ಮರಣೀಯವಾಗಿದೆ. ಆ ಗುರು-ಶಿಷ್ಯಧ್ವಯರ ಕಾರ್ಯ ವೈಕರಿಯು “ಸಮಸ್ತ”ವನ್ನು ಸಮಸ್ತ ಮಂಡಲಗಳಲ್ಲೂ ಪ್ರಜ್ವಲಿಸುವಂತೆ ಮಾಡಿತು.
ಕೋಮು ಗಲಬೆಯಂತ ಪ್ರಕ್ಷುಬ್ದ ಘಟ್ಟಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋದು ಪ್ರತಿಯೊಂದು ಮುಸಲ್ಮಾನನ ಕರ್ತವ್ಯ ವೆಂದು ಬೋದಿಸುತ್ತ ಮಾನವತೆಯ ಲಾಲಿಹಾಡನು ನಾಡಿನ ಜನತೆಗೆ ಸಾರಿದರು. ದೇಶದ್ರೋಹಿ ಫ್ಯಾಸಿಸ್ಟ್ ಶಕ್ತಿಗಳಿಂದ ಭಾಬರಿ ಮಸ್ಜಿದ್ ದ್ವಂಸಗೊಂಡಾಗ ನಾಡಿನಾದ್ಯಂತ ಉಳ್ಬವಿಸಿದ ಕೋಮು ಸಂಘರ್ಷ, ಕಾಡ್ಗಿಚ್ಚಿನಂತೆ ಹೊತ್ತಿ ಉರಿಯುವಾಗ ಮಹಾನಾದ ಶಂಸುಲ್ ಉಲಮಾ ಉಸ್ತಾದರು ತೆಗೆದು ಕೊಂಡ ನಿರ್ಣಯ ಅದು ದೇಶಕ್ಕೆ ಮಾದರಿಯಾಗಿತ್ತು. ಮಾನವ ಕುಲದ ಉನ್ನತಿಗಾಗಿ ಮತ್ತು ಕೋಮು ಸೌಹಾರ್ದತೆಗಾಗಿ ಹಗಲಿರುಳು ಎನ್ನದೆ ಕಾರ್ಯ ಪ್ರವ್ರುತ್ತವಾಗಿರುವ ಪ್ರಪಂಚದ ಏಕೈಕ ಧಾರ್ಮಿಕ ನೇತೃತ್ವ ಅದು “ಸಮಸ್ತ” ಮಾತ್ರವಾಗಿದೆ. ಇಂದು ಪ್ರಪಂಚದಲ್ಲೇ “ಸಮಸ್ತ”ಕ್ಕೆ ಬದಲಾಗಿ “ಸಮಸ್ತ” ಮಾತ್ರವೇ ಸಾಟಿ.
ಇಂತಹ ಒಂದು ಉನ್ನತ ಪರಂಪರೆಯಿಂದ ಸಾಗಿ ಬಂದ “ಸಮಸ್ತ” ಎಂಬ ಮಹಾ ಪ್ರಸ್ತಾನದ ಇಂದು ಅಧ್ಯಕ್ಷ ಸ್ಥಾನದಲ್ಲಿ ಭಾಹುಮಾನ್ಯರಾದ, ಜೀವನ ಶಂಶುದ್ದತೆಯನ್ನು ಕಾಪಾಡಿಕೊಂಡು, ಲಲಿತ ಜೀವನದ ಪ್ರತಿರೂಪವಾದ ಮಹಾನರಾದ ಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತುಕೊಯ ತಂಞ್ಞಳ್ ಹಾಗು ಪ್ರೊಫೆಸರ್ ಶೈಖುನಾ ಕೆ. ಅಲಿ ಕುಟ್ಟಿ ಮುಸ್ಲಿಯಾರ್ ಉಸ್ತಾದರ ಕಾರ್ಯದರ್ಶಿತ್ವದಲ್ಲಿ ಮುನ್ನೆರುತ್ತಿದೆ.
ಅಲ್ಲಾಹು ನಮ್ಮೆಲ್ಲರನ್ನೂ ಕೊನೆ ಉಸಿರಿನ ವರೆಗೂ ಈ ಸತ್ಯ ಸನ್ಮಾರ್ಗದಲ್ಲಿ ಸದೃಡವಾಗಿಸಲಿ. (ಆಮೀನ್…)
✍️.ಬಶೀರ್.ಚೇರಂಭಾಣೆ…
ವಿಶ್ವ ಕನ್ನಡಿಗ ನ್ಯೂಸ್
Last sentence confused kalambadi usthad and Zainudeen usthad is dead many years ago. Can you please confirm
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.