(www.vknews.com) : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಸುರತ್ಕಲ್ ಘಟಕದ ಸಹಾಯದೊಂದಿಗೆ ದಿನಾಂಕ: 24-06-2020 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಧ್ಯ ಇದರ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ಮತ್ತು ಆಯುಷ್ ಇಲಾಖೆಯು ನೀಡಿದ ಔಷಧಿ ವಿತರಣೆ ಹಾಗೂ ಎಂಸಿಎಫ್ ರವರು ನೀಡಿದ ಸ್ಯಾನಿಟೈಸರ್ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಸಮಾಜವನ್ನು ರಕ್ಷಿಸುವಾಗ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗುವ ಸಲುವಾಗಿ ಆಯುಷ್ ಇಲಾಖೆಯು ನೀಡಿದ ಔಷಧಿಗಳನ್ನು ನೀಡಲಾಗುತ್ತಿದೆ ಎಲ್ಲಾ ಗೃಹರಕ್ಷಕರು ಕೆಲಸ ಮಾಡುವಾಗ ಸ್ಯಾನಿಟೈಸರ್ ಬಳಸಬೇಕು ಹಾಗೂ ದೇಹದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಅದೇ ರೀತಿ ದಕ್ಷಿಣ ಕನ್ನq ಜಿಲ್ಲಾ ಗೃಹರಕ್ಷಕರು ಮನೆಗೊಂದು ಮರ ಎನ್ನುವಂತೆ ಪ್ರತಿಯೊಂದು ಗೃಹರಕ್ಷಕರು ಒಂದೊಂದು ಗಿಡ ನೆಡಬೇಕು ಎಂಬ ವಿಶೇಷ ಅಭಿಯಾ£ವನ್ನು ಕಳೆದ 5 ವರ್ಷದಿಂದ ಮಾಡುತ್ತಿದ್ದು ಪ್ರತಿಯೊಬ್ಬ ಗೃಹರಕ್ಷಕರು ಒಂದು ಗಿಡದಂತೆ ನೆಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಕೊರೋನಾ 19 ವಿರುದ್ದ ಹೋರಾಡುವ ಪೊಲೀಸರೊಂದಿಗೆ ಜೊತೆಯಾಗಿ ಕೆಲಸ ಮಾಡುವ ಗೃಹರಕ್ಷಕರಿಗೆ ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಭಗವಾನ್ ಶ್ಲಾಘಿಸಿದರು. ಹಾಗೂ ಅದರ ಜೊತೆಗೆ ವನಮಹೋತ್ಸವ ಕಾಯಕ್ರಮದಲ್ಲಿ ನೆಟ್ಟ ಗಿಡವನ್ನು ಮುಂದಿನ ದಿನದಲ್ಲಿ ಬೆಳೆಸಿ ಪೋಷಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಭಟ್ (ಸ್ಥಳ ದಾನಿಗಳು), ಮಾಜಿ ಪಂಚಾಯಿತಿ ಅಧ್ಯಕ್ಷರಾದ ಪುಷ್ಪರಾಜ್ ರೆಡ್ಡಿ, ಶಾಲಾ ಶಿಕ್ಷಕರಾದ ಹರೀಶ್, ಟ್ರಸ್ ಮೆಂಬರ್ ವಿಠಲ್ ಶೆಟ್ಟಿ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್ ಮತ್ತು ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.