ಕುಪ್ಪೆ ಪದವು(www.vknewszin);:ಮಾನವ ಕುಲಕ್ಕೆ ಕರುಣೆಯ ಪ್ರತೀಕರಾದ ವಿಶ್ವ ಪ್ರವಾದಿ(ಸ.ಅ) ರವರ ಸಂದೇಶದಂತೆ ಮುಸ್ಲಿಮರು ಪರಸ್ಪರ ಒಳಿತಿಗೆ ಕೈ ಜೋಡಿಸುವ ಮೂಲಕ, ಪರಸ್ಪರ ಬಾದ್ಯತೆಗಳನ್ನು ನೆರವೇರಿಸಬೇಕೆಂದು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ರವರು ಜುಮಾ ನಮಾಝಿನ ನಂತರದ ಸಂದೇಶದಲ್ಲಿ ತಿಳಿಸಿದರು. ಪವಿತ್ರ ಖುತುಬಾದ ಸಾರಾಂಶವನ್ನು ವಿವರಿಸುತ್ತಾ ಪರಸ್ಪರ ಅಭಿಮುಖವಾದರೇ ಸಲಾಂ,ಆಹ್ವಾನದ ಸ್ವೀಕಾರ, ರೋಗಿಯ ಸಂದರ್ಶನ, ಮಯ್ಯಿತ್ ಪರಿಪಾಲನೆ,ಸೀನಿದವನಿಗೆ ಪ್ರತಿಕ್ರಿಯ ಈ ಮೇಲಿನ 5 ಕಾರ್ಯಗಳು ಒಂದು ಮುಸ್ಲಿಂ ಇನ್ನೊಂದು ಮುಸ್ಲಿಮನಿಗಿರುವ ಬಾದ್ಯತೆಯಾಗಿದ್ದು ಇವುಗಳನ್ನು ಸಂಧರ್ಭೋಚಿತವಾಗಿ ನೆರವೇರಿಸುವ ಮೂಲಕ ಸರ್ವರೂ ಮುಸ್ಲಿಂ ಸಮುದಾಯದ ರಕ್ಷಕರಾಗಬೇಕಾಗಿದೆ ಎಂದು ಹೇಳಿದರು.. ಪ್ರಚಲಿತ ಸನ್ನಿವೇಶದಲ್ಲಿ ಕಣ್ಣ ಮುಂದೆ ಕಾಣುತ್ತಿರುವ ಮರಣದ ಬಗ್ಗೆ ಪ್ರಸ್ತಾಪಿಸಿದ ಅವರು ಫಲ ನೀಡುವ ಮರದ ಒಂದೊಂದು ಅಂಶವು ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದರು. ಹ್ರದಯದಲ್ಲಿ ತಕ್ವಾ ಉಳ್ಳವರಾಗಿ ಜೀವಿಸಬೇಕೆಂದು 5 ವಕ್ತ್ ನಮಾಝ್,ಕುಟುಂಬ ಸಂಭಂಧ, ಮರಣದ ಚಿಂತನೆ ಸ್ನೇಹ ಪ್ರೀತಿ ವಿಶ್ವಾಸದಲ್ಲಿ ಜೀವಿಸಿ ಸರ್ವ ಸಮುದಾಯಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು.
ವರದಿ:ಕರ್ಬಲಾ ಮೀಡಿಯಾ ಕೈಕಂಬ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.