ಮಂಜನಾಡಿ(ವಿಶ್ವಕನ್ನಡಿಗ ನ್ಯೂಸ್): ನಾಟೇಕಲ್ ನಿಂದ ಮಂಜನಾಡಿ ವರೆಗಿನ ರಸ್ತೆ ಬದಿಯಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಬೇಕು ಮತ್ತು ಇಲ್ಲಿನ ಉರುಮನೆ ಪ್ರದೇಶದ ವ್ಯಾಪ್ತಿಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಡಿವೈಎಫ್ಐ ವತಿಯಿಂದ ಮನವಿ ಸಲ್ಲಿಸಲಾಯಿತು.
ನಾಟೇಕಲ್ ನಿಂದ ಮಂಜನಾಡಿ ವರೆಗೆ ರಸ್ತೆ ತಿರುವುಗಳಿಂದ ಕೂಡಿದ್ದು ಇಲ್ಲಿ ತ್ಯಾಜ್ಯಗಳ ರಾಶಿ ಸಂಗ್ರಹವಾಗಿರುವುದರಿಂದ ನಾಯಿಗಳೂ ತುಂಬಿವೆ. ರಸ್ತೆಗೆ ಅಡ್ಡ ಬರುವ ಇವುಗಳಿಂದಾಗಿ ಬಿದ್ದ ಬೈಕ್ ಸವಾರರಿಗೆ ಲೆಕ್ಕವೇ ಇಲ್ಲ. ಇನ್ನು ಈಗ ಡೆಂಗ್ಯೂ ಕಾಟ ಬೇರೆ. ಕೆಲ ದಿನಗಳ ಹಿಂದೆ ನಾವು ಮನವಿ ಕೊಟ್ಟಾಗ ಪಂಚಾಯತ್ ಅಧಿಕಾರಿಗಳು ಒಮ್ಮೆ ತ್ಯಾಜ್ಯ ತೆಗೆದು ಸುಮ್ಮನೇ ಕುಳಿತರು. ಕೂಡಲೇ ಇಲ್ಲಿನ ತ್ಯಾಜ್ಯವನ್ನು ಸಂಪೂರ್ಣ ತೆಗೆಯಬೇಕು ಮತ್ತು ಇಲ್ಲಿ ಕಸದ ತೊಟ್ಟಿಗಳನ್ನು ಸ್ಥಾಪಿಸಿ ಪ್ರತಿದಿನ ವಿಲೇವಾರಿ ಮಾಡಬೇಕು, ಮತ್ತೆ ಇಲ್ಲಿನ ಉರುಮನೆ ಪ್ರದೇಶಕ್ಕೆ 8 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಇದರ ಬಗ್ಗೆ ಗಮನ ಹರಿಸಿ ಈ ವ್ಯಾಪ್ತಿಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಉಪಾಧ್ಯಕ್ಷ ರಝಾಕ್ ಮೊಂಟೆಪದವು, ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಜ್ ಉರುಮಣೆ, ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ , ರಿಯಾಜ್ ಮದಕ, ಸಾಹಿತಿ ಮಹಮ್ಮದ್ ಉಳ್ಳಾಲ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.