(www.vknews.com) : ದಿನಾಂಕ 03/07/2020ನೇ ಶುಕ್ರವಾರದಂದು ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್ನಲ್ಲಿ ಇರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯದ 24ನೇ ವಾರ್ಷಿಕೋತ್ಸವದ ಅಂಗವಾಗಿ ವನಮಹೋತ್ಸವ ಜರುಗಿತು.
ಕಳೆದ ಐದು ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಪ್ರತಿ ವರ್ಷ ಜುಲೈ ತಿಂಗಳಲ್ಲಿ ವನಮಹೋತ್ಸವ ಜರುಗಿಸಿ ಗಿಡ ವಿತರಣೆ ನಡೆಸಿ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 1000 ಗಿಡಗಳನ್ನು ವಿತರಿಸಲಾಗಿದ್ದು, ಪ್ರಸ್ತುತ್ತ ಜಾಗತಿಕವಾಗಿ ಕಾಡುತ್ತಿರುವ ಕೋವೀಡ್ 19 ರೋಗ ಕೂಡ ಪರಿಸರದ ನಾಶದಿಂದಾಗಿ ಉಂಟಾಗಿರುವ ನಿಟ್ಟಿನಲ್ಲಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಈ ವನಮಹೋತ್ಸವ ಕಾರ್ಯಕ್ರಮ ಜರುಗಿಸಲಾಗಿದೆ ಎಂದು ದಂತ ಚಿಕಿತ್ಸಾಲಯದ ಮುಖ್ಯ ವೈದ್ಯರಾದ ಡಾ| ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.
ಶುದ್ಧಗಾಳಿ, ಪರಿಶುದ್ಧ ನೀರು ಮತ್ತು ಸಮತೋಲನ ಉಳ್ಳ ಆಹಾರದಿಂದ ಎಲ್ಲ ರೋಗಗಳನ್ನು ತಡೆಯಬಹುದಾಗಿದ್ದು, ಪರಿಸರ ರಕ್ಷಣೆಯಿಂದ ಮಾತ್ರ ಈ ಕಾರ್ಯ ಸಾಧ್ಯ ಎಂದು ಡಾ| ಚೂಂತಾರು ತಿಳಿಸಿದರು. ಸಾಂಕೇತಿಕವಾಗಿ ಶ್ರೀಮತಿ ದೇವಕಿ ಇವರಿಗೆ ಗಿಡ ನೀಡುವ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಜುಲೈ ತಿಂಗಳಿಡೀ ಸುರಕ್ಷಾ ದಂತ ಚಿಕಿತ್ಸಾಲಕ್ಕೆ ಭೇಟಿ ನೀಡುವ ರೋಗಿಗಳಿಗೆ ಉಚಿತ ಗಿಡ ನೀಡುವ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಲು ಕೋರಲಾಗಿದೆ. ಈ ಸಂದರ್ಭದಲ್ಲಿ ದಂತ ಚಿಕಿತ್ಸಾಲಯ ವೈದ್ಯರಾದ ಡಾ| ಆದರ್ಶ್, ಸಹಾಯಕಿರಾದ ರಮ್ಯ, ಶ್ವೇತಾ, ಚೈತ್ರಾ, ಸುಶ್ಮಿತಾ ಉಪಸ್ಥಿತರಿದ್ದರು. ಜುಲೈ 3 1997ರಂದು ಹೊಸಂಗಡಿಯ ಹಿಲ್ಸೈಡ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಯಾಗಿತ್ತು.
ಪ್ರತಿ ವರ್ಷ ಜುಲೈ 3ರಂದು ಈ ದಿನದ ನೆನಪಿಗಾಗಿ ಗಿಡ ವಿತರಣೆ, ರಕ್ತದಾನ ಶಿಬಿರ ಮತ್ತು ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಮುಂತಾದ ಸಮಾಜಮುಖಿ ಕಾರ್ಯ ನಡೆಸಿ ಸುರಕ್ಷಾ ದಂತ ಚಿಕಿತ್ಸಾಲಯ ಬರೀ ದಮತ ಚಿಕಿತ್ಸೆಗೆ ಮಾತ್ರ ಸೀಮಿತವಾಗದೇ, ಜನರಲ್ಲಿ ಆರೊಗ್ಯದ ಬಗ್ಗೆ ಕಾಳಜಿ, ಪರಿಸರ ಪ್ರಜ್ಞೆ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ದಂತ ಚಿಕಿತ್ಸಾಲಯದ ಇನೋರ್ವ ದಂತ ವೈದ್ಯರಾದ ಡಾ| ರಾಜಶ್ರೀ ಮೋಹನ್ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.