ವಿಟ್ಲ((www.vknews.in):ಕೊಡಂಗಾಯಿ ಜುಮಾ ಮಸ್ಜಿದ್ ಅಧೀನದಲ್ಲಿರುವ ಎಲ್ಲಾ ಮದರಸ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಇತ್ತೀಚೆಗೆ ಸಾಮಾಜಿಕ ಸಂಘಟನೆಯಾದ ಅಲ್-ಅಮೀನ್ ಯೂತ್ ಫೆಡರೇಶನ್(ರಿ)AYF ಕೊಡಂಗಾಯಿ ಹಾಗೂ ಊರಿನ ಕೆಲ ದಾನಿಗಳ ಸಹಕಾರದಿಂದ ಮದರಸ ವಿದ್ಯಾರ್ಥಿಗಳಿಗೆ ಪುಸ್ತಕವು ವಿತರಿಸಲಾಯಿತು.
ಕಳೆದ 19-20 ವರುಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಎಲ್ಲಾ ವಿಧ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ನಾಡಿನ ಏಳಿಗೆಗಾಗಿ ಕಾರ್ಯಾಚರಿಸುತ್ತಿರುವ ಪ್ರತಿಯೊಬ್ಬರ ಮನೆ ಮಾತಾಗಿರುವ ನಾಡಿನ ಹೆಮ್ಮೆಯ ಸಂಘಟನೆಯಾದ AYF®️ ಕೊಡಂಗಾಯಿ ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಲೌಕಿಕ-ಧಾರ್ಮಿಕ ಕಲಿಕೆಯಲ್ಲೂ ಪ್ರೋತ್ಸಾಹದ ಅಂಗವಾಗಿ ಕೊಡಂಗಾಯಿ ಮದರಸ ಒಂದನೇ ಮತ್ತು ಎರಡನೇಯ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಹಲವು ವರುಷಗಳಿಂದ ನಡೆಸುತ್ತಾ ಬಂದಿವೆ, ಅದರ ಭಾಗವಾಗಿ ಈ ವರುಷ ಊರಿನ ಕೆಲ ದಾನಿಗಳ ಸಹಕಾರದಿಂದ ಕೊಡಂಗಾಯಿ ಮದ್ರಸದ ಒಂದರಿಂದ ಎಂಟನೇ ತರಗತಿಯ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಗಳಿಗೆ ಪುಸ್ತಕ ವಿತರಣೆಯೂ ಸಂಘಟನಾ ಗೌರವಾಧ್ಯಕ್ಷ ಇಬ್ರಾಹಿಂ ಝೈನಿ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವು ಕೊಡಂಗಾಯಿ ಜುಮಾ ಮಸ್ಜಿದ್ ಖತೀಬ್ ಹಾಗೂ ಮುಖ್ಯಾಧ್ಯಾಪಕರಾದ ಉಸ್ತಾದ್ ಅಬೂಬಕ್ಕರ್ ಸಿದ್ದೀಖ್ ಅರ್ಷದಿ ಇವರ ದುಃವಾಶೀರ್ವಚನದೊಂದಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಯಿತು, ಪ್ರತಿ ವರ್ಷದಂತೆ ಈ ವರುಷವು ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಕೊಡಂಗಾಯಿ ಜಮಾಹತ್ ಮಾಜಿ ಕಾರ್ಯದರ್ಶಿ ಎ.ಎಮ್ ಮಹಮ್ಮದ್ ಕುಂಞ ಇವರು ಪುಸ್ತಕವನ್ನು ನೀಡಿ ಸಹಕರಿಸಿದರು, ಅದೇ ರೀತಿ ಎರಡರಿಂದ ಎಂಟನೇ ತರಗತಿವರೆಗೆ *AYF ಸಂಘಟನೆ* ಹಾಗೂ ಊರ ಇಬ್ಬರು ಉದಾರ ದಾನಿಗಳ ವತಿಯಿಂದ ಪುಸ್ತಕವನ್ನು ನೀಡಿ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಹಾರೈಸಿ ಪ್ರೋತ್ಸಾಹಿಸಲಾಯಿತು…_
ಕಾರ್ಯಕ್ರಮದಲ್ಲಿ ಮದರಸ ಅಧ್ಯಾಪಕರಾದ ಮಹಮೂದ್ ಮುಸ್ಲಿಯಾರ್, ಜಮಾಹತ್ ಕೋಶಾಧಿಕಾರಿ ಹಕೀಮ್ ಟಿಂಬರ್, ಜಮಾಹತ್ ಕಾರ್ಯದರ್ಶಿ ಮಹಮೂದ್ ಮುಸ್ಲಿಯಾರ್ ಸಿ.ಹೆಚ್, ಸಂಘಟನಾ ಜೊತೆ ಕಾರ್ಯದರ್ಶಿ ಮಜೀದ್ ಟಿ.ಎಮ್, ಉಪಾಧ್ಯಕ್ಷ ರಫೀಕ್ ಆರ್.ಎಮ್, ಹಾಗೂ ಅಬೂಬಕ್ಕರ್ ಮೇಲಂಗಡಿ, ಸುಲೈಮಾನ್ ದರ್ಕಾಸ್, ಕೆ.ಎಸ್ ಮಹಮ್ಮದ್ ಟಿಪ್ಪುನಗರ, ಆದಂ ಕುಂಞ ನೆಡ್ಯಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎ.ವೈ.ಎಫ್ ಕಾರ್ಯದರ್ಶಿ ಮಹಮ್ಮದ್ ರಫೀಕ್ ಎಸ್.ಎಸ್ ಸ್ವಾಗತಿಸಿ, ಕೊನೆಯದಾಗಿ ಗಫೂರ್ ಹನೀಫಿಯವರು ವಂದಿಸಿದರು.
ವರದಿ:ಶರೀಫ್ ಮೇಲಂಗಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.