(www.vknews.com) : ದ.ಕ ಜಿಲ್ಲೆಯಲ್ಲಿ ಕೋರೋನಾ ವ್ಯಾಪಕವಾಗುತ್ತಿದ್ದು ವಿಟ್ಲ ಪರಿಸರದಲ್ಲೂ ಹಲವು ಕೊರೋನಾ ಪಾಸಿಟಿವ್ ವರದಿಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸಾಲೆತ್ತೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 6 ಸೋಮವಾರದಿಂದ ಸಾಲೆತ್ತೂರಿನಾದ್ಯಂತ ಮುಂದಿನ ತೀರ್ಮಾನದವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ದರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಸಾಲೆತ್ತೂರು ಪರಿಸರದ ನಾಗರಿಕರೇ , ತಮ್ಮಲ್ಲಿ ಕಳಕಳಿಯ ವಿನಂತಿ
ನಮ್ಮ ನೆರೆಯ ಪ್ರದೇಶಗಳಲ್ಲಿ ಹಲವು ಕೋರೋನಾ ಪಾಸಿಟಿವ್ ವರದಿಗಳು ಕಂಡು ಬಂದಿರುವುದು ತಮಗೆಲ್ಲಾ ತಿಳಿದಿರುವ ವಿಚಾರ, ಹೀಗಿರುವಾಗ ನಮಗೆ ಬೇಕಾದ ಬಹುತೇಕ ಎಲ್ಲಾ ದಿನಬಳಕೆಯ ವಸ್ತುಗಳು ಸಾಲೆತ್ತೂರಿನಲ್ಲಿಯೇ ದೊರೆಯುವುದರಿಂದ ಯಾವುದೇ ಕಾರಣಕ್ಕೂ ಸಾಲೆತ್ತೂರು ವ್ಯಾಪ್ತಿ ಬಿಟ್ಟು ಇತರ ಪ್ರದೇಶಗಳಿಗೆ ತೆರಳದಿರಿ.
ಸದ್ಯ ನಮ್ಮ ಊರು ಸುರಕ್ಷಿತವಾಗಿದೆ. ನಾನು ಕಾರಣ ನನ್ನ ಕುಟುಂಬ, ನನ್ನ ಊರು ಸಂಕ್ಷಟ್ಟಕ್ಕೀಡಾಗದಿರಲಿ ಎಂಬ ದಿಟ್ಟ ತೀರ್ಮಾನವನ್ನು ಕೈಗೊಂಡು, ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸೋಣ. ಅತೀ ಅವಶ್ಯಕವೆಂದಾದರೆ ಮಾತ್ರ ಮನೆಯಿಂದ ಹೊರಬನ್ನಿ.
ಹೀಗಾಗಲೇ ದ.ಕ ಜಿಲ್ಲೆಯಲ್ಲಿ ಕೋರೋನಾ ಭಾದಿತರಾಗಿರುವವರ ಸಂಖ್ಯೆ ಸಾವಿರದ ಗಡಿ ದಾಟಿದೆ. ಹಲವು ಮರಣಗಳೂ ಸಂಭವಿಸಿದೆ. ಮೃತರ ಕುಟುಂಬಸ್ಥರಿಗೂ ಮೃತದೇಹದ ಅಂತಿಮ ದರ್ಶನವನ್ನು ಪಡೆಯಲು ಸಾದ್ಯವಾಗುತಿಲ್ಲ. ಸುಗಮವಾಗಿ ಅಂತಿಮ ಕ್ರಿಯೆಯನ್ನು ನಡೆಸಲೂ ಸಾದ್ಯವಾಗುತಿಲ್ಲ.
ಕೊರೋನಾ ವಾರಿಯರ್ಸ್ ಗಳಾದ ಹಲವು ವೈದ್ಯರು, ಲ್ಯಾಬ್ ಟೆಕ್ನೀಶಿಯನ್ಗಳು, ಪೋಲೀಸ್ ಅಧಿಕಾರಿಗಳು, ಶಾಸಕರು, ಸ್ತಳೀಯಾಡಳಿತ ಸಂಸ್ಥೆಗಳ ಸದಸ್ಯರೂ ಕೂಡಾ ಕೋವಿಡ್ 19 ಗೆ ತುತ್ತಾಗಿದ್ದಾರೆ.
ಹಲವರ ಕೋವಿಡ್ ಸಂಪರ್ಕ ಮೂಲಗಳೇ ಇನ್ನೂ ಕೂಡಾ ನಿಗೂಡವಾಗಿದೆ. ಐಸೋಲೇಶನ್ ವಾರ್ಡ್ ಗಳು ಈಗಾಗಲೇ ತುಂಬಿದೆ. ಇನ್ನು ಕೊರೋನಾ ಅಟ್ಟಹಾಸ ಹೀಗೆಯೇ ಮುಂದುವರಿದರೆ ನಮ್ಮ ಜಿಲ್ಲೆಯ ಪರಿಸ್ಥಿತಿಯನ್ನು ಊಹಿಸಲು ಅಸಾದ್ಯ. ಸೃಷ್ಟಿಕರ್ತನು ನಮೆಲ್ಲರನ್ನು ಕಾಪಾಡಲಿ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.