(www.vknews.com) : ನಿಮಗೆಲ್ಲಾ ಗೊತ್ತಿರಬಹುದು ದುಬೈ ಪೋಲೀಸರ ಸಜ್ಜನಿಕೆ, ಒಳ್ಳೆಯ ಗುಣಗಳು , ಮಾನವೀಯತೆ , ಮತ್ತು ದುಬೈಯ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮಸೀದಿಗಳಲ್ಲಿ ನಿದ್ರೆ ಮಾಡುದನ್ನು ನಿಷೇದಿಸಲಾಗಿದೆ. ಆದರೂ ಕೆಲವು ದಿನಗಳು ಸಾರ್ವಜನಿಕ ಸ್ಥಳಗಳಲ್ಲಿ ದಿನದೂಡಿದ ಅನಿವಾಸಿಗಳ ಕಣ್ಣೀರ ಕಥೆ ಇದು.
ಹೌದು ಕೆಲವೇ ಘಂಟೆಗಳ ಹಿಂದೆ ನನಗೆ ಒಂದು ಕರೆ ಬಂತು, ನಾವು ಕೆಲವು ಮಂದಿ ಕಳೆದ 6 ದಿನಗಳಿಂದ ಸರಿಯಾದ ಊಟವಿಲ್ಲದೆ ಸಮುದ್ರ ದಡದಲ್ಲಿ ನಿದ್ರೆ ಮಾಡಿ ಸಮಯ ದೂಡುತ್ತಿದ್ದೇವೆ ಎಂದು , ಅದು ಸಹ ನಾನು ಇರುವ ರೂಮಿನ ಸಮೀಪದಲ್ಲಿ ಇರುವ ಅಬ್ರಾ ಸಮುದ್ರ ಕಿನಾರೆಯ ಭಾಗದಲ್ಲಿ ಇದ್ದಾರೆ ಎಂದು ಕೇಳಿದಾಗ ನನಗೆ ಒಂದು ಕ್ಷಣ ವಿಚಲಿತನಾದೆ ಕಾರಣ ಆ ಅಬ್ರಾ ಸ್ಥಳದಲ್ಲಿನ ಈಗಿನ ಬಿಸಿಲಿನ ತಾಪ ಸರಿಯಾಗಿ ಅನುಭವಿಸಿದವರು ನಮ್ಮಲ್ಲಿ ಹಲವರು. ನಾನು ತಕ್ಷಣವೇ ಅವರ ಬಳಿಗೆ ಹೋಗಿ ವಿಚಾರಿಸದಾಗ ಲಾಕ್ ಡೌನ್ ಪ್ರಾಂಭವಾದ್ದಗಿಂದ ಇರುವ ರೆಸ್ಟುರೆಂಟ್ ಕೆಲಸ ಕಳೆದು ಕೊಂಡು ಕೆಲವು ದಿನಗಳ ಹಿಂದೆ ಹೋಟೆಲ್ ಮಾಲಿಕರು ಹೋಟೆಲ್ ಮುಚ್ಚಿಕೊಂಡು ಹೋಗಿದ್ದಲ್ಲದೆ ಕೆಲಸದವರು ವಾಸಿಸುತ್ತಿದ್ದ ರೂಮ್ ಬಾಡಿಗೆ ಪಾವತಿಸದೆ ಇದ್ದರಿಂದ ಕನ್ನಡಿಗ, ಕೇರಳದ, ಪಾಕಿಸ್ತಾನದ ಜನರು ಸೇರಿ ಹಲವರು ದಾರಿ ಮದ್ಯಕ್ಕೆ ಬರುವಂತಾಯಿತ್ತು , ಜೊತೆಗಿದ್ದ 3 ಪಾಕಿಸ್ತಾನದವರು ಪರಿಚಯಸ್ಥರ ರೂಮಿಗೆ ತೆರಳಿದರು ಪಾಪ ಕನ್ನಡಿಗ ಮತ್ತು ಕೇರಳಿಗ ಕಳೆದ 6 ದಿನಗಳು ಬಿಸಿಲಿನ ತಾಪದಲ್ಲಿ ಸಮುದ್ರ ಕಿನಾರೆಯಲ್ಲಿ ಇದ್ದದ್ದನ್ನು ಹೇಳಿದಾಗ ಮನಸ್ಸಿಗೆ ಒಂದಿಷ್ಟು ಬೇಸರ ಆಯಿತ್ತು ಮತ್ತು ನಮ್ಮಲ್ಲಿ ಹಲವರು ದೇವರ ಕೃಪೆಯಿಂದ ಮತ್ತು ತಂದೆ ತಾಯಿಯ ಆಶೀರ್ವಾದ ಹಾಗೆ ಅಣ್ಣಂದಿಯರ ಪರಿಶ್ರಮದಿಂದ ಸ್ವಲ್ಪವಾದರೂ ಉನ್ನತ ಸ್ಥಿತಿಯಲ್ಲಿ ಇದ್ದೇವೆ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದೆ.
ಕೆಲವು ಸಮಯದ ಹಿಂದೆ ಕನ್ನಡಿಗ ಮತ್ತು ಕೇರಳಿಗನನ್ನು ನನ್ನ ರೂಮಿಗೆ ಕರೆದುಕೊಂಡು ಬಂದೆ , ಅವರಿಗೆ ಬೇಕಾದ ವ್ಯವಸ್ಥೆ ನಾಳೆ ಆಗುತ್ತೆ ಎಂಬ ವಿಶ್ವಾಸ ಇದೆ ಕಾರಣ ಇಂತಹ ಹಲವು ಪ್ರಕರಣ ನಡೆದು ಎಲ್ಲರಿಗೂ ಸಹೃದಹಿ ಕನ್ನಡಿಗರಿಂದ ಸಹಾಯ ಸಿಕ್ಕಿದೆ. ನಮ್ಮ ಗ್ರೂಪ್ ಮೆಂಬರ್ ಸಿರಾಜ್ ಅವರು ನನ್ನ ನಂಬರ್ ಸಂಕಷ್ಟದಲ್ಲಿದ್ದವರಿಗೆ ನೀಡಿದ್ದರಿಂದ ಅವರನ್ನು ಭೇಟಿಯಾಗಲು ಸಾದ್ಯವಾಯಿತ್ತು .
ಕಳೆದ ಕೆಲವು ದಿನಗಳ ಹಿಂದೆ ರೂಮ್ ಇಲ್ಲದೆ ಸಂಕಷ್ಟದಲ್ಲಿದ್ದ ಜಾಸ್ಮಿನ್ ಹಬೀಬ್ ದಂಪತಿಗಳಿಗೆ ಮತ್ತು ಅರ್ಜುನ್ ದಂಪತಿಗಳಿಗೆ ತಮ್ಮ ಮನೆಯನ್ನು ಬಿಟ್ಟುಕೊಟ್ಟ ಪ್ರವೀಣ್ ಕನ್ನಡಿಗ ಅವರ ದೊಡ್ಡ ಮನಸ್ಸು , ಏರ್ಪೋರ್ಟಿನಲ್ಲಿ ದಿಕ್ಕು ತೋಚದೆ ಕುಳಿತಿದ್ದ ಅಣ್ಣನಿಗೆ ರೂಮ್ ವ್ಯವಸ್ಥೆ ಮಾಡಿದ ಸಂದೀಪ್ ಕನ್ನಡಿಗ ಹಾಗೆ ತಂಗಿಗೆ ರೂಮ್ ವ್ಯವಸ್ಥೆ ನೀಡಿದ ಸಲ್ಮಾ ಕನ್ನಡತಿ, ಅಜ್ಮಾನಿನಲ್ಲಿ ಊಟ ರೂಮಿಲ್ಲದೆ ದಾರಿಯಲ್ಲಿದ್ದ ಕನ್ನಡಿಗನಿಗೆ ರೂಮ್ ಆಹಾರ ವ್ಯವಸ್ಥೆ ನೀಡಿದ ನಮ್ಮ ಹೆಮ್ಮೆಯ ಕನ್ನಡಿಗರು ಉಪ ತಂಡದ ಅಬ್ದುಲ್ ಹಾದಿ ಅವರಂತ ಹಲವು ಸಹೃದಯಿ ಮನಸ್ಸುಗಳನ್ನು ನಿಮಗೆ ಪರಿಚಯಿಸುತ್ತಿದ್ದೇನೆ.
ಏನೇ ಆಗಲಿ ಕೊರೋನ ಸಮಯದಲ್ಲಿ ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಯುಎಇ ಕನ್ನಡಿಗರು ನೀಡಿದ ಸೇವೆ ಸಹಾಯ ಬಣ್ಣಿಸಲಾದಷ್ಟು.
ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು,
ಜೈ ಹಿಂದ್ ಜೈ ಕರ್ನಾಟಕ, ಜೈ ಎಮರಾತ್
✍ರಫೀಕಲಿ, ಹೆಮ್ಮೆಯ ದುಬೈ ಕನ್ನಡಿಗ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.