ಬಂಟ್ವಾಳ (www.vknews.com) : ತಾಲೂಕಿನ ಸಜೀಪನಡು ಗ್ರಾಮಪಂಚಾಯತ್ ವ್ಯಾಪ್ತಿಯ ಬೈಲಗುತ್ತು ಪ್ರದೇಶವು ವಿಪರೀತ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ, ಕಳೆದ ಎರಡು ಮೂರು ವರ್ಷಗಳಿಂದಲೂ ಗ್ರಾಮಪಂಚಾಯತ್ ಆಡಳಿತದ ಗಮನಕ್ಕೆ ತಂದಿದ್ದರೂ ಕೂಡಾ ಗ್ರಾಮ ಪಂಚಾಯತ್ ಆಡಳಿತವು ಸೂಕ್ತ ಚರಂಡಿಯ ವ್ಯವಸ್ಥೆಯನ್ನು ಮಾಡದೇ ಇರುವಂತಹಾ ಚರಂಡಿಯ ಹೂಲೆತ್ತುವ ಕಾರ್ಯವನ್ನು ಮಾಡದೇ ನಿರ್ಲಕ್ಷ್ಯವನ್ನು ಮಾಡಿರುವುದರಿಂದ ನೀರು ಹರಿದು ಹೋಗಲು ಸಮರ್ಪಕ ಚರಂಡಿ ಇಲ್ಲದೇ ಇರುವುದರಿಂದ ಇಂದು ಹತ್ತಾರು ಮನೆಗಳಿಗೆ ನೀರು ನುಗ್ಗುವಂತಾಗಿದೆ.
ಎಸ್ಡಿಪಿಐ ಹಾಗೂ ಬಿಜೆಪಿ (ಅಧ್ಯಕ್ಷ ಎಸ್ಡಿಪಿಐ ಉಪಾಧ್ಯಕ್ಷೆ ಬಿಜೆಪಿ) ಯು ಕಲೆದ ಐದು ವರ್ಷಗಳಲ್ಲಿ ಸಜೀಪನಡು ಗ್ರಾಮ ಪಂಚಾಯತ್ ಆಡಳಿತವನ್ನು ನಡೆಸಿದ್ದು ಗ್ರಾಮದಲ್ಲಿ ಯಾವುದೇ ಜನಪರ ಕಾರ್ಯಗಳನ್ನು ಮಾಡದೇ ವ್ಯರ್ಥ ಕಾಲಹರಣ ಮಾಡಿದೆ, ಸಜೀಪನಡು ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಗ್ರಾಮಪಂಚಾಯತ್ ಕಚೇರಿಗಳಿಗೆ ತಮ್ಮ ಅಧಿಕಾರಾವಧಿಯ ಕೊನೇಯ ಕ್ಷಣಗಳಲ್ಲಿ ಬರೇ ಸುಣ್ಣ ಬಣ್ಣವನ್ನು ಬಳಿದು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿಯಬಿಟ್ಟು ಇದು ನಮ್ಮ ಮಾಹಾ ಸಾಧನೆ ಎಂಬಂತೆ ಬಿಂಬಿಸಿ ಪುಕ್ಕಟೆ ಪ್ರಚಾರ ಪಡೆಯುವ ವ್ಯರ್ಥ ಪ್ರಯತ್ನವನ್ನು ಮಾಡುವ ಮುಖಾಂತರ ಅಪಹಾಸ್ಯಕ್ಕೀಡಾಗುತ್ತಿದೆಯಲ್ಲದೇ ಗ್ರಾಮಸ್ಥರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ರಾಮಪಂಚಾಯತ್ ಏನಾದರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದರೆ ಇಂತಹಾ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಾಜಿ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.