ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ):ಸೈಕಲ್ ಸವಾರನಿಗೆ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ದೂಪದಕಟ್ಟೆ ಬಳಿ ನಡೆದಿದೆ.ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಬೈಕಾಡಿ ನಿವಾಸಿ ಮಹಾಬಲ ( 50 ) ಎಂದು ಗುರುತಿಸಲಾಗಿದೆ.ಕಾರು ಬ್ರಹ್ಮಾವರದಿಂದ ಉಡುಪಿಗೆ ಸಾಗುತ್ತಿದ್ದರು. ಈ ವೇಳೆಗೆ ದೂಪದಕಟ್ಟೆ ಪೆಟ್ರೋಲ್ ಪಂಪ್ ಬಳಿ ಅಪಘಾತ ನಡೆದಿದೆ. ತೀವ್ರ ಗಾಯಗೊಂಡು ಹೆದ್ದಾರಿ ನಡುವಿನಲ್ಲಿ ಬಿದ್ದಿದ್ದ ಮಹಾಬಲ ಅವರನ್ನು ಕೂಡಲೇ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ಬ್ರಹ್ಮಾವರ ಪೊಲೀಸ್ ರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ,
