ಕುಪ್ಪೆ ಪದವು(www.vknews.in):ಕೊಲೆ, ದರೋಡೆ, ಅತ್ಯಾಚಾರ, ಅನಾಚಾರ, ಮಧ್ಯಪಾನ, ಬಡ್ಡಿ ವ್ಯವಹಾರ,, ವಂಚನೆ, ಅನ್ಯಾಯ ಇವುಗಳೆಲ್ಲವೂ ಅಕ್ರಮ ಗಳಾಗಿದ್ದು ಇವುಗಳಿಂದ ದೂರವಿದ್ದು ಸತ್ಕರ್ಮಗಳ ಹಾದಿಯಲ್ಲಿ ನಡೆಯಬೇಕೆಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆ ಪದವು ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯರವರು ಜುಮಾ ನಮಾಝಿನ ನಂತರದ ಸಂದೇಶದಲ್ಲಿ ತಿಳಿಸಿದರು. ಪವಿತ್ರ ಖುತುಬಾದ ಸಾರಾಂಶವನ್ನು ವಿವರಿಸುತ್ತಾ ಅಕ್ರಮಿಸಲ್ಪಟ್ಟವನ ಪ್ರಾರ್ಥನೆ ಅಲ್ಲಾಹನು ಸ್ವೀಕರಿಸುವ ಮೂಲಕ ಅಕ್ರಮಿಯು ಶಿಕ್ಷೆಗೆ ಗುರಿಯಾಗಲಿದ್ದು ವೈಯಕ್ತಿಕ ಹಗೆ, ದ್ವೇಷ, ನಿಂದನೆ, ಪರದೂಷಣೆ ಇವುಗಳಿಂದ ಮುಕ್ತವಾಗಿ ಹ್ರದಯ ಶುದ್ಧೀಕರಣಗೊಳಿಸಬೇಕಾಗಿದೆ ಎಂದು ಹೇಳುತ್ತಾ ಪ್ರಚಲಿತ ಸನ್ನಿವೇಶದಲ್ಲಿ ಕಣ್ಣ ಮುಂದೆ ಕಾಣುತ್ತಿರುವ ಅಕ್ರಮದ ಬಗ್ಗೆ ಅರ್ಥ ಗಂಭೀರವಾಗಿ ತಿಳಿಸಿದ ಅವರು ಯುವ ಸಮುದಾಯ ಮಧ್ಯಪಾನ, ಗಾಂಜ, ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿದ್ದು ಇದರ ಬಗ್ಗೆ ಪ್ರತಿಯೊಬ್ಬರೂ ಶಬ್ಧವೆತ್ತಬೇಕಾಗಿದೆ ಎಂದು ತಿಳಿಸಿದರು. ಸರ್ವ ಸಮುದಾಯದೊಂದಿಗೆ ಪ್ರೀತಿ ತೋರಿಸುವ ಮೂಲಕ ಅಕ್ರಮ, ಅನ್ಯಾಯ ದ ವಿರುದ್ಧ ಸರ್ವರೂ ಧ್ವನಿಯಾಗಬೇಕೆಂದು ಹೇಳಿದರು
ವರದಿ:ಕರ್ಬಲಾ ಮೀಡಿಯಾ ಕೈಕಂಬ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.