(www.vknews.in) ಆನ್ಲೈನ್ ಶಿಕ್ಷಣ ಹಾಗೂ ಸರಕಾರಿಶಾಲೆಗಳು ಎನ್ನುವ ವಿಷಯದಲ್ಲಿ ರಾಜ್ಯ ಮಟ್ಟದ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಮತ್ತು ಎಸ್ ಡಿ ಎಂ ಸಿ ಸದಸ್ಯರೊಂದಿಗೆ ಖ್ಯಾತ ಶಿಕ್ಷಣ ತಜ್ಞರು, ಮಗು ಮತ್ತು ಕಾನೂನು ಕೇಂದ್ರದ ಸೀನಿಯರ್ ಫೆಲೋ ಹಾಗೂ ಎಸ್ ಡಿ ಎಂ ಸಿ ಸಮ ನ್ವಯ ವೇದಿಕೆಯ ಮಹಾ ಪೋಷಕರು ಆಗಿರುವಂತಹ ಡಾ. ನಿರಂಜನಾರಾಧ್ಯ. ವಿ. ಪಿ . ಯವರೊಂದಿಗೆ ವೇಬಿನಾರ್ ಮೂಲಕ ಸಂವಾದ ಕಾರ್ಯ ಕ್ರಮವು ಇಂದು 12/7/2020 ಮಧ್ಯಾಹ್ನ 12 ಘಂಟೆಗೆ ಜರಗಲಿರುವುದು.
ರಾಜ್ಯದ ಬಹುತೇಕ ಜಿಲ್ಲೆಗಳ ಸಮನ್ವಯ ವೇದಿಕೆ ಗೆಳೆಯರು ಭಾಗವಹಿಸಲಿದ್ದು ,ಎಲ್ಲರ ಅಭಿಪ್ರಾಯವನ್ನು ಮಂಡಿಸಲು ಅವಕಾಶವನ್ನು ಕೊಡಲಾಗುವುದು.
ಮಾಧ್ಯಮದಲ್ಲಿ ಹರಿದಾಡುತ್ತಿರುವ ಆನ್ಲೈನ್ ಶಿಕ್ಷಣದ ಬಗೆಗಿನ ವಿಷಯದ ಬಗ್ಗೆ ಇರುವ ಎಸ್ ಡಿ ಎಂ ಸಿ ಯವರ ಆತಂಕಗಳು ಹಾಗೂ ಅದಕ್ಕೆ ಪರಿಹಾರ ಮಾರ್ಗಗಳ ಬಗ್ಗೆ ಚರ್ಚಿಸಲಾಗುವುದು ಎಂದು ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷರಾದ ಮೊಯಿದಿನ್ ಕುಟ್ಟಿ ಯವರು ಪತ್ರಿಕಾ ಹೇಳಿಕೆ ಯನ್ನು ನೀಡಿರುತ್ತಾರೆ.
ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಯ ಮೊಬೈಲ್ ಗೆ ತಮ್ಮ ಹೆಸರನ್ನು ವಾಟ್ಸಪ್ ಮಾಡಬೇಕಾಗಿ ವಿನಂತಿಸಿದ್ದಾರೆ. 7090004020
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.