ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳು ದೇಶದ ಭವಿಷ್ಯ, ವಿದ್ಯಾರ್ಥಿಗಳು ದೇಶದ ಸೊತ್ತು, ವಿದ್ಯಾರ್ಥಿಗಳು ರಾಷ್ಪ್ರ ಕಟ್ಟುವವರು, ಇಂದಿನ ವಿದ್ಯಾರ್ಥಿಗಳೇ ಮುಂದಿನ ನಾಯಕರುಗಳು ಎಂದು ಮಾತನಾಡುತ್ತಾ ತನ್ನ ಆಂಗ್ಲ ಭಾಷೆಯ 52 ಸೆಕೆಂಡುಗಳ ವಿಡಿಯೊ ಸಂದೇಶದಲ್ಲಿ ದೇಶದ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯವರು ಹೆಚ್ಚಿಸಿದರು.
ಸಂದೇಶದಲ್ಲಿ, ಸಾಂಕ್ರಾಮಿಕ ಕೊರೊನಾ ಮಹಾಮಾರಿಯಿಂದ ಪರಿತಪಿಸುತ್ತಿರುವ ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳಿಗೆ ಯಾವುದೇ ಒತ್ತಡ ತರದೇ ಅವರ ಮಾನಸಿಕ ಆರೋಗ್ಯಕ್ಕೆ ಧಕ್ಕೆಯಾಗದಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರೀಕ್ಷೆಗಳನ್ನು ನಡೆಸಬಾರದು, ಈ ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕದ ಆಧಾರದ ಮೇಲೆ ಮುಂದಿನ ಸೆಮಿಸ್ಟರ್ ಗಳಿಗೆ ತೇರ್ಗಡೆಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು. ವಿದ್ಯಾರ್ಥಿಗಳ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಬಗೆ ಈಶ್ವರ್ ಖಂಡ್ರೆಯವರ ಇದು ಎರಡನೆ ವಿಡಿಯೋ ಸಂದೇಶವಾಗಿದ್ದು,
ಲಾಕ್ ಡೌನ್ ಪ್ರಾರಂಭಿಕ ಹಂತದಲ್ಲೂ ವಿಧ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ವಿಡೀಯೊ ಸಂದೇಶವನ್ನು ಹಂಚಿಕೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.