ಉಪ್ಪಿನಂಗಡಿ (www.vknews.com) : ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ವಲಯದ ನೂತನ ಸಮಿತಿ ರಚನೆ ಹಾಗು ಫಾರಂ ವಿತರಣೆ ದಿನಾಂಕ 11 ರಂದು ನೂರಾನಿಯ ಮದರಸ ಹಾಲ್ ಕುದ್ಲೂರ್ ಉಪ್ಪಿನಂಗಡಿಯಲ್ಲಿ ನಡೆಯಿತು. ವಲಯ ಅಧ್ಯಕ್ಷರಾದ ಅಶ್ರಫ್ ಫಾಝಿಲ್ ಬಾಖಾವಿ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದುಆಗೆ ಚಾಲನೆ ನೀಡಿದರು.
ವಲಯ ಕಾರ್ಯದರ್ಶಿ ಹಾರೀಶ್ ಕೌಸರಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತರಬೇತುಗಾರಾಗಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕೇಂದ್ರ ಸಮಿತಿಯ ವೈಸ್ ಚೇರ್ಮ್ಯಾನ್ ಬಸೀರ್ ಮಜಲು ಮತ್ತು ನಝಿರ್ ಆಗಮೀಸಿದರು.
ವೇದಿಕೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ಉಸ್ತುವಾರಿ ಸಿದ್ದೀಕ್ ನೀರಾಜೆ, ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ಚೇರ್ಮ್ಯಾನ್ ಸಿರಾಜ್ ಕೊಕ್ಕಡ ಮತ್ತು ಕನ್ವಿನರ್ ರಶೀದ್ ಕರಾಯ ಉಪಸ್ಥಿತರಿದ್ದರು. ಸಿದ್ದೀಕ್ ನೀರಾಜೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಉಪ್ಪಿನಂಗಡಿ ವಲಯ ಅಧ್ಯಕ್ಷರಾದ ಅಶ್ರಫ್ ಫಾಝಿಲ್ ಬಾಖಾವಿ ಮೆಂಬರ್ ಶಿಪ್ ಫಾರಂ ವಿತರಣೆ ಮಾಡಿದರು.
ನಂತರ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ವಲಯ 2020-22ನೇ ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು.
ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ಉಸ್ತುವಾರಿಯಗಿ ಸಿದ್ದೀಕ್ ನೀರಾಜೆ, ಚೇರ್ಮನ್ ಆಗಿ ಸಿರಾಜ್ ಕೊಕ್ಕಡ, ಕನ್ವೀನರ್ ರಾಗಿ ರಶೀದ್ ಕರಾಯ, ವೈಸ್ ಚೇರ್ಮನ್ ರಾಗಿ ಫಯಾಜ್ ಯು ಟಿ ಉಪ್ಪಿನಂಗಡಿ, ವೈಸ್ ಕನ್ವೀನರ್ ರಾಗಿ ಅಜಿಜ್ ಪಾಲ್ತಾಡಿ ಆತೂರು, ವರ್ಕಿಂಗ್ ಕನ್ವೀನರ್ ರಾಗಿ ಅಬೂಬಕ್ಕರ್ ಸಿದ್ದೀಕ್ ಮುನೀರ್ ಆತೂರು, ಕೋಶಾಧಿಕಾರಿಯಗಿ ರಝಕ್ ಬಿಳಿಯುರು ಪೆರ್ನೆ ಕಾರ್ಯಕಾರಿ ಸಮಿತಿ ಸದಸ್ಯರುರಾಗಿ ಇಲ್ಲ್ಯಾಸ್ ಕೋಲ್ಪೆ, ರಹಿಮಾನ್ ಅದೇಕಲ್ ಉಪ್ಪಿನಂಗಡಿ ಮತ್ತು ರಶೀದ್ ಮರಿವಲ ಕರಾಯ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.