(www.vknews.com) : ಮಹತ್ವಾಕಾಂಕ್ಷೆಯ ಕಾರ್ಯ ಯೋಜನೆಯನ್ನು ಹಾಕಿ ತಣ್ಣೀರು ಬಾವಿ ಮುಹ್ಯುದ್ದೀನ್ ಜುಮ್ಮಾ ಮಸೀದಿ ಯ ಆಡಳಿತ ಮಂಡಳಿಯು ಕೆಲವು ವರ್ಷಗಳ ಹಿಂದೆ ಮಹಿಳಾ ಪಿ ಯು ಕಾಲೇಜು ಶಿಕ್ಷಣ ವನ್ನು ಆರಂಭಿಸಿತು.
ಊರಿನ ಹುಡುಗಿಯರು ವಾಕ್ ಡಿಸ್ಟೆಂಸ್ ನಲ್ಲಿ ಸುರಕ್ಷತಾ ವ್ಯವಸ್ಥೆ ಯೊಂದಿಗೆ ಸುಲಭವಾಗಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಉತ್ಕಟ ವಾದ ಉದ್ದೇಶದಿಂದ ಈ ಮಹತ್ತರವಾದ ಕಾರ್ಯ ಕ್ಕೆ ಚಾಲನೆ ನೀಡಲಾಗಿತ್ತು. ಹುಡುಗಿಯರಿಗೆ ಬೇಕಾಗುವ ಎಲ್ಲಾ ರೀತಿಯ ಸುವ್ಯವಸ್ಥೆ ಯೊಂದಿಗೆ ಉತ್ತಮ ಗುಣಮಟ್ಟದ ಕಾಲೇಜು ಕಟ್ಟಡ ವನ್ನು ನಿರ್ಮಿಸಲಾಗಿತ್ತು. ಇದೀಗ ಆ ಮಹತ್ತರವಾದ ಕನಸು ನನಸಾಗುತ್ತಿದೆ.ನಮ್ಮ ಹೆಣ್ಮಕ್ಕಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿರುವುದು ಹೆಮ್ಮೆಯ ವಿಚಾರ.ಈ ವರ್ಷ ಶೇಕಡಾ ನೂರರಷ್ಟು ಫಲಿತಾಂಶ ವನ್ನು ಕಾಲೇಜಿಗೆ ವಿದ್ಯಾರ್ಥಿನಿಯರು ತಂದು ಕೊಟ್ಟಿದ್ದಾರೆ.
ಈ ಮಧ್ಯೆ ಸಮೀರ ಮರಿಯಮ್ ಮತ್ತು ಅಬ್ದುಲ್ ಖಾದರ್ ದಂಪತಿಗಳ ಸುಪುತ್ರಿ ಸಪಿಯ್ಯತ್ ಸಭಾ ಎಂಬ ಹುಡುಗಿ ಶೇಕಡಾ 95.5 ಅಂಕಗಳೊಂದಿಗೆ ಜಾಮಿಯಾ ಕಾಲೇಜಿಗೆ ಮತ್ತು ಜಮಾತಿಗೆ ಹಾಗೂ ಮುಸ್ಲಿಂ ಸಮುದಾಯ ಕ್ಕೆ ಕೀರ್ತಿ ಯನ್ನು ತಂದಿದ್ದಾರೆ. ಇದರೊಂದಿಗೆ ಪ್ರಸಿದ್ಧ ಅತ್ಯುನ್ನತ ಕಾಲೇಜುಗಳೊಂದಿಗೆ ಪೈಪೋಟಿ ನಡೆಸುವ ತಾಕತ್ತು ತೋರಿಕೊಟ್ಟಿರುವುದು ಅಭಿನಂದನೀಯ ಸಂಗತಿ. ಲಾಕ್ ಡೌನ್ ಮತ್ತು ಕೊರೋನ ಭೀತಿಯ ನಡುವೆಯೂ ನಿರಾತಂಕ ವಾಗಿ ನಮ್ಮ ವಿದ್ಯಾರ್ಥಿನಿಯರು ಮಾಡಿದ ಸಾಧನೆಯನ್ನು ಮುಕ್ತವಾಗಿ ಪ್ರಶಂಸೆ ಮಾಡೋಣ.ಜೊತೆಗೆ ಕಾಲೇಜಿನ ಆಡಳಿತ ಮಂಡಳಿ, ಜಮಾತ್ ಕಮಿಟಿ,ಪ್ರಾಂಶುಪಾಲರು,ಅಧ್ಯಾಪಕ ವೃಂದ ಹಾಗೂ ಶಿಕ್ಷಕ ರಕ್ಷಕ ಸಮಿತಿ,ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸೋಣ.
ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ಇಮಾಮ್ ಎಮ್ ಜೆ ಎಮ್ ಚೊಕ್ಕಬೆಟ್ಟು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.