(www.vknews.com) : ಕಾಪು ತಾಲೂಕು ವ್ಯಾಪ್ತಿಯಲ್ಲಿ ಮುದರಂಗಡಿ ಎಂಬ ಊರಲ್ಲಿ ಸಯ್ಯದ್ ಫಾರೂಕ್ ರವರ ಕುಟುಂಬವಿದೆ. ಸಯ್ಯದ್ ಫಾರೂಕ್ ರವರಿಗೆ 8ಮತ್ತು 12 ವರ್ಷದ ಎರಡು ಗಂಡು ಹಾಗೂ 10 ಮತ್ತು 14 ವರ್ಷದ ಎರಡು ಹೆಣ್ಣು ಮಕ್ಕಳು.
ಚಿಕ್ಕ ಚಿಕ್ಕ ರೆಡಿಮೇಡ್ ಕಬಾಟು ಗಳನ್ನು ಮನೆ ಮನೆಗೆ ಕೊಂಡು ಹೋಗಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಫಾರೂಕ್ ರವರಿಗೆ ವರ್ಷಕ್ಕಿಂತ ಮುಂಚೆ ಪಡುಬಿದ್ರಿ ಪೇಟೆಯಲ್ಲಿ ಕಾರೊಂದು ಅಪಘಾತವೆಸಗುತ್ತದೆ. ಆಸ್ಪತ್ರೆಯ ಖರ್ಚನ್ನು ಭರಿಸುತ್ತೇನೆಂದ ಕಾರು ಮಾಲಕರು ಕೊನೆಗೆ ಕೈ ಕೊಡುತ್ತಾರೆ. ಆ ಸಮಯದಲ್ಲಿ ಸುಮಾರು 80000 ಸಾವಿರ ರೂಪಾಯಿಯಷ್ಟು ಆದ ಬಿಲ್ಲನ್ನು ಸಮಾಜ ಸೇವಕರ ನೆರವಿನಿಂದ ಭರಿಸಲಾಗಿ ಡಿಸ್ಚಾರ್ಜ್ ಮಾಡಿಸಿ ಮನೆಗೆ ತಂದು ಬಿಡಲಾಗುತ್ತದೆ.
ತದ ನಂತರ ಫಾರೂಕ್ ರವರಿಗೆ ಒಂದು ವರ್ಷಗಳಷ್ಟು ಕಾಲ ವಿಶ್ರಾಂತಿಯ ಅಗತ್ಯವಿದ್ದು, ಇವರ ಮದ್ದಿನ ಖರ್ಚು, ಹೆಂಡತಿ ಮಕ್ಕಳ ಪಾಲನೆ ಪೋಷಣೆಗೆ ಆರ್ಥಿಕ ಅಡಚಣೆ ಎದುರಾಗುತ್ತದೆ. ಹೆಂಡತಿ ಬೀಡಿ ಕಟ್ಟುತಿದ್ದರೂ ವಾರದಲ್ಲಿ ಎರಡು , ಮೂರು ದಿನಗಳಿಗೆ ಮಾತ್ರ ಕೆಲಸ ಸಿಗುತಿತ್ತು. ಕೊನೆಗೆ ಉಪಾಯವಿಲ್ಲದೆ ಈ ಕುಟುಂಬ ಫೈನಾನ್ಸ್ ನಲ್ಲಿ , ಇತರ ಸಂಘ ಗಳಲ್ಲಿ ಸಾಲ ಪಡೆದು , ಹಾಗೂ ತಮ್ಮಲ್ಲಿ ಇದ್ದ ಚೂರು , ಪಾರು ಆಭರಣವನ್ನು ಅನಿವಾರ್ಯವಾಗಿ ಗಿರವಿ ಇಟ್ಟು ಸುಮಾರು 40000 ರೂಪಾಯಿಯಷ್ಟು ಸಾಲದಲ್ಲಿ ಮುಳುಗಿರುತ್ತಾರೆ.
ಪರಿಸ್ಥಿತಿ ಹೀಗಿರುವಾಗ ಇದೇ ಮಾರ್ಚ್ ತಿಂಗಳಲ್ಲಿ ಕೊರೋನಾ ಮಹಾ ವಿಪತ್ತಿನ ವತಿಯಿಂದ ಲಾಕ್ ಡೌನ್ ಆದಾಗ ಬೀಡಿ ಕಟ್ಟುವ ಕೆಲಸಕ್ಕೂ ಲಾಕ್ ಆಗುತ್ತದೆ. ಇದರಿಂದ ಕುಟುಂಬ ಮತ್ತಷ್ಟು ಕಂಗಾಲಾಗುತ್ತದೆ.
ಈ ಸಂದರ್ಭದಲ್ಲಿ ವಿಷಯ, ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಗಮನಕ್ಕೆ ಬಂದಾಗ ಅದರ ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಮತ್ತು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ರವರು ಫಾರೂಕ್ ರವರ ಮನೆಗೆ ಆಹಾರದ ಕಿಟ್ ನೊಂದಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವಾಗ, ಫಾರೂಕ್ ರವರ ಸ್ಥಿತಿ ಯನ್ನು ನೋಡಿ ಹಿಂದೆ ಬಾಡಿಗೆಗೆ ಕೊಟ್ಟಿದ್ದ ಮನೆಯ ಯಜಮಾನರು ಮನೆಯನ್ನು ತೆರವುಗೊಳಿಸಿ ಹೋಗಬೇಕೆಂದು ಹೇಳಿದ ಕಾರಣ, ಇವರು ಮತ್ತೊಂದು ಬಾಡಿಗೆ ಮನೆಯನ್ನು ನೋಡುತ್ತಾರೆ. ಆದರೆ ಈ ಮನೆಗೆ 10000 ರೂಪಾಯಿ ಠೇವಣಿ ಭರಿಸಬೇಕಾಗಿದ್ದು, ಮುಂಗಡ ಠೇವಣಿ ಭರಿಸಲು ಸದ್ಯಕ್ಕೆ ಅನಾನುಕೂಲ ಇದೆ ಎಂದ ಕಾರಣ ಒಂದು ತಿಂಗಳ ಅವಧಿ ಮನೆ ಮಾಲೀಕರು ನೀಡಿರುವ ಮತ್ತು ಸದ್ಯದ ಶೋಚನೀಯ ಸ್ಥಿತಿಯು ಅರಿವಿಗೆ ಬಂದು 20000 ರೂಪಾಯಿ ತುರ್ತು ನೆರವಿಗಾಗಿ ಕೊಟ್ಟು ಹೋಗಿರುತ್ತಾರೆ. ಅದರ ನಂತರ ಇವರ ಬಗ್ಗೆ ಗಮನ ಹರಿಸುತ್ತಾ ಇದ್ದು , ಇದೀಗ ಅವರು ಈ ಮುಂಚಿನ ಉದ್ಯೋಗವನ್ನು ಮುಂದುವರಿಸಲು ಸಮರ್ಥರಿದ್ದು, ಸಾಮಗ್ರಿ ಖರೀದಿಸಲು ಆರ್ಥಿಕ ಅಡಚಣೆ ಇದ್ದುದನ್ನು ಗಮನಿಸಿ ಪುನಃ ವೃತ್ತಿ ಮುಂದುವರಿಸಲು 20000 ರೂಪಾಯಿ ನೀಡುತ್ತಾರೆ.
ಇದರಿಂದಾಗಿ ಸಯ್ಯದ್ ಫಾರೂಕ್ ರವರು ಸ್ವಾಭಿಮಾನದ ಬದುಕು ಸಾಗಿಸಲು ನೆರವಾದ ಕಾಪು ಜಮಾಅತೆ ಇಸ್ಲಾಮೀ ಹಿಂದ್ ನ ಕಾರ್ಯಕರ್ತರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿರುವರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.