ಬಂಟ್ವಾಳ (www.vknews.com) : ಗೂಡಿನ ಬಳಿ SKSSF ಶಾಖಾ ಅಧ್ಯಕ್ಷರು ಲತೀಫ್ ಖಾನ್ 45 ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಸಮಸ್ತದ ಸಕ್ರೀಯ ಕಾರ್ಯಕರ್ತರು,SKSSF ಗೂಡಿನಬಳಿ ಶಾಖೆಯ ಅಧ್ಯಕ್ಷರು,ಪಾಣೆಮಂಗಳೂರು ಕ್ಲಸ್ಟರ್ ಇದರ ಸಹಚಾರಿ ಕಾರ್ಯದರ್ಶಿ ಯೂ,ಬಂಟ್ವಾಳ ವಲಯ ಕೌನ್ಸಿಲರ್ SKSSF ದ.ಕ ಜಿಲ್ಲಾ ಕೌನ್ಸಿಲರಾಗಿದ್ದು,ರಾಜಕೀಯ ಕ್ಷೇತ್ರದಲ್ಲಿ ಸ್ಥಳಿಯ ಪ್ರಭಾವಿ ನಾಯಕರಾಗಿ ,ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ ( ಬುಡಾ) ಇದರ ಸದಸ್ಯರಾಗಿದ್ದರು. ಅದೇ ರೀತಿ ಸಾಮಾಜಿಕ ಕ್ಷೇತ್ರದಲ್ಲಿ ಸಮಾಜ ಸೇವಕರಾಗಿ, ಗೂಡಿನಬಳಿ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾಗಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು ,ಓರ್ವ ಪುತ್ರಿ, ಇಬ್ಬರು ಸಹೋದರರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ : ಲತೀಫ್ ಖಾನ್ ನಿಧನಕ್ಕೆ SKSSF ಬಂಟ್ವಾಳ ವಲಯ ಅಧ್ಯಕ್ಷರು ಇರ್ಷಾದ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್ ತಾಳಿಪಡ್ಪು,ಕೋಶಾಧಿಕಾರಿ ಟಿ ಪಿ ಜಬ್ಬಾರ್ ಬೋಳಿಯಾರ್,ಸಂಘಟನಾ ಕಾರ್ಯದರ್ಶಿ ಸವಾದ್ ಗೂಡಿನಬಳಿ ವಿಖಾಯ ಕೇಂದ್ರ ಸಮಿತಿಯ ವೈಸ್ ಚಯರ್ಮ್ಯಾನ್ ಬಶೀರ್ ಮಜಲು ಜಿಲ್ಲಾ ಉಪಾಧ್ಯಕ್ಷ ಅಬುಸ್ವಾಲಿ ಫೈಝೀ ,ಸಿದ್ದಿಕ್ ಅಬ್ದುಲ್ ಖಾದರ್ ಬಂಟ್ವಾಳ, ವಿಖಾಯ ಜಿಲ್ಲಾ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ವಿಖಾಯ ವಲಯ ಚಯರ್ಮ್ಯಾನ್ ಖಾದರ್ ಮುಸ್ಲಿಯಾರ್, ಕನ್ವೀನರ್ ಖಾಲಿದ್, ಸಹಚಾರಿ ಕನ್ವೀನರ್ ನಾಸೀರ್ ಜಿ.ಕೆ, ವಿಖಾಯ ಬ್ಲಡ್ ಹೆಲ್ಪ್ ಲೈನ್ ವಲಯ ಉಸ್ತುವಾರಿ ಶಾಕೀರ್ ಮಿತ್ತಬೈಲು ಅಲ್ತಾಫ್ ತುಂಬೆ ಅಮೀರ್ ತುಂಬೆ ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.