(www.vknews.com) : ರಕ್ತದಾನ ಮಾಡಿ ಜೀವದಾನ ನೀಡಿ ಎಂಬ ಧ್ಯೇಯದೊಂದಿಗೆ ಆರಂಭಗೊಂಡ ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ಗೆ 3 ನೇ ವರ್ಷದ ಸಂಭ್ರಮ. ಮೂಡಬಿದ್ರೆಯಲ್ಲಿ ಯಾವುದೇ ಆಸ್ಪತ್ರೆಯಲ್ಲಿ ರಕ್ತ ನಿಧಿ ಇಲ್ಲದೆ ಇರುವಾಗ ಇಲ್ಲಿ ಎದುರಾಗುತ್ತಿದ್ದ ರಕ್ತದಾನಿಗಳ ಕೊರತೆಯನ್ನು ಮನಗಂಡು ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ತಂಡವು ರಕ್ತದಾನಿಗಳನ್ನು ಒಟ್ಟುಸೇರಿಸಿ ಒಂದು ತಂಡವನ್ನು ಮಾಡಿಕೊಂಡು ತುರ್ತು ಸಂಧರ್ಭಗಳಲ್ಲಿ ರಕ್ತದಾನ ಮಾಡುವ, ರಕ್ತದಾನಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂತು.
ಮೂಡಬಿದ್ರೆಯ ಯಾವುದೇ ಆಸ್ಪತ್ರೆಯಲ್ಲಿ ರಕ್ತದ ಅವಶ್ಯಕತೆ ಇದೆ ಎಂದ ತಕ್ಷಣ ನಮ್ಮ ತಂಡದ ಸದಸ್ಯರು ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ.
ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ತಂಡ ರಚನೆ ಆಗುವ ಮೊದಲು ರೋಗಿಯ ಕಡೆಯವರು ರಕ್ತವನ್ನು ಮಂಗಳೂರಿಗೆ ಹೋಗಿ ತರಬೇಕಾಗಿತ್ತು. ಇದನ್ನು ಮನಗಂಡ ನಮ್ಮ ತಂಡವು ದಿನಾಂಕ 25-07-2017 ರಂದು ಬ್ಲಡ್ ಬ್ಯಾಂಕ್ ಮೂಡಬಿದ್ರೆ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ರಕ್ತದ ಬೇಡಿಕೆ ಬಂದ ತಕ್ಷಣ ನಿರಂತರ ರಕ್ತದಾನಿಗಳನ್ನು ಆಸ್ಪತ್ರೆಗೆ ಕಳುಹಿಸಿ ರಕ್ತದಾನ ಮಾಡಿಸುತ್ತಾ ಬಂತು. ನಮ್ಮ ತಂಡ ರಚನೆಯಾದ ಮೊದಲ ವರ್ಷದಲ್ಲಿ ನಮ್ಮ ತಂಡದ ಹೆಸರನ್ನು ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ಎಂದು ಬದಲಾವಣೆ ಮಾಡಲಾಯಿತು.
ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ತಂಡದ ಸದಸ್ಯರು ಈವರೆಗೆ ಸುಮಾರು 1750ಕ್ಕೂ ಅಧಿಕ ರೋಗಿಗಳಿಗೆ ರಕ್ತದಾನ ಮಾಡಿರುತ್ತಾರೆ.ರಾಜ್ಯಾದ್ಯಂತ ಹಲವು ಕಡೆ ನಮ್ಮ ತಂಡದ ಸದಸ್ಯರು ಇದ್ದು ರಾಜ್ಯದ ವಿವಿಧ ಕಡೆಗಳಲ್ಲೂ ನಮ್ಮ ತಂಡದ ಸದಸ್ಯರು ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ.ಕೇವಲ ಕರ್ಣಾಟಕ ಮಾತ್ರವಲ್ಲದೆ ಮಹಾರಾಷ್ಟ್ರ,ಆಂದ್ರಪ್ರದೇಶ ಕೇರಳ,ಹಾಗೂ ಇತರೆ ಕೆಲವು ರಾಜ್ಯಗಳಿಂದಲೂ ನಮ್ಮ ತಂಡಕ್ಕೆ ರಕ್ತದ ಅವಶ್ಯಕತೆ ಇದೆ ಎಂದು ಬಂದ ಕರೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ರಕ್ತದಾನಿಗಳನ್ನು ಸಂಪರ್ಕ ಮಾಡಿರುತ್ತದೆ.
ಬ್ಲಡ್ ಡೋನರ್ಸ್ ಹೆಲ್ಪ್-ಲೈನ್ ಮೂಡಬಿದ್ರೆ ತಂಡವು ರಕ್ತದಾನ ಮಾತ್ರವಲ್ಲದೆ ಇತರ ಸಾಮಾಜಿಕ ಕೆಲಸದಲ್ಲೂ ತಮ್ಮನ್ನು ತಾವು ತೋಡಗಿಸಿಕೊಂಡಿದ್ದು ಬಡತನದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಸಾಧ್ಯವಾದವರಿಗೆ ಚಿಕಿತ್ಸೆ ಗೆ ನೆರವು ನೀಡುತ್ತಾ ಬಂದಿರುತ್ತದೆ.
ಕೊರೋನಾ ಮಹಾಮಾರಿ ಕಾರಣ ದೇಶದಾದ್ಯಂತ ಲಾಕ್-ಡೌನ್ ಜಾರಿಯಾದ ತಕ್ಷಣ ಈ ಲಾಕ್-ಡೌನ್ ನಿಂದ ರೋಗಿಗಳು ಕಷ್ಟ ಪಡಬಾರದು ಎಂಬ ಉದ್ದೇಶದಿಂದ ರೋಗಿಗಳಿಗೆ ಸೂಕ್ತ ಸಹಾಯ ಮಾಡುವುದೆಂದು ತೀರ್ಮಾನಿಸಿ ತುರ್ತು ಔಷದಿಗಳ ಅಗತ್ಯ ಇರುವವರಿಗೆ ಔಷದಿ ಪೂರೈಸಲು ನಮ್ಮ ಒಂದು ತುರ್ತು ಸಹಾಯವಾಣಿ ರಚಿಸಿತು.ಇದರೊಂದಿಗೆ ದಾನಿಗಳ ಸಹಾಯದಿಂದ ಸುಮಾರು 1300 ಕ್ಕೂ ಅಧಿಕ ಅಶಕ್ತ ಬಡ ಕುಟುಂಬಕ್ಕೆ ಅಗತ್ಯ ಆಹಾರ ಸಾಮಗ್ರಿಗಳು ಮತ್ತು ತರಕಾರಿಗಳನ್ನು ದಾನ ಮಾಡಲಾಯಿತು.
ಲಾಕ್-ಡೌನ್ ಸಂಧರ್ಭದಲ್ಲಿ ಸುಮಾರು 340 ರೋಗಿಗಳಿಗೆ ನಮ್ಮ ತಂಡವು ಔಷಧಿಗಳನ್ನು ಅವರ ಮನೆಗೆ ತಲುಪಿಸಿದೆ. ಹಲವು ಬಡ ಕುಟುಂಬದ ರೋಗಿಗಳಿಗೆ ನಮ್ಮ ತಂಡವು ಉಚಿತವಾಗಿ ಔಷಧಿ ಪೂರೈಕೆ ಮಾಡಿರುತ್ತದೆ.ಮೂಡಬಿದ್ರೆಯಲ್ಲಿ ಸಿಗದ ಔಷಧಿಗಳನ್ನು ಮಂಗಳೂರಿನಿಂದ ಮತ್ತು ಉಡುಪಿಯಿಂದ ನಮ್ಮ ತಂಡವು ತಂದು ಕೊಟ್ಟಿರುತ್ತದೆ. ಮೂಡಬಿದ್ರೆಯ 3 ಮಾನಸಿಕ ರೋಗಿಗಳಿಗೆ ಅಗತ್ಯವಾಗಿ ಬೇಕಾಗಿದ್ದ ಔಷಧಿಯನ್ನು ಶಿವಮೊಗ್ಗದ ಮಾನಸ ನರ್ಸಿಂಗ್ ಹೋಂ ನಿಂದ ತಂದು ಕೊಟ್ಟಿರುತ್ತದೆ.
ಬಡ ಕುಟುಂಬದ ಕ್ಯಾನ್ಸರ್ ರೋಗಿಯೊಬ್ಬರಿಗೆ ದಾನಿಗಳ ಸಹಾಯದಿಂದ ರುಪಾಯಿ ₹22,000/- ಮೌಲ್ಯದ ಇಂಜೆಕ್ಷನ್ ಅನ್ನು ನಮ್ಮ ತಂಡವು ಕೊಡಿಸಿರುತ್ತೇವೆ.
ಹೀಗೆ ನಮ್ಮ ತಂಡವು ಯಾವುದೇ ಪ್ರತಫಲದ ಅಪೇಕ್ಷೆ ಇಲ್ಲದೆ ಬಡವರಿಗೆ ಸೇವೆ, ರೋಗಿಗಳಿಗೆ ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿದೆ. ಮುಂದೆಯೂ ನಮ್ಮ ತಂಡದ ಸಮಾಜ ಸೇವಾಕಾರ್ಯ ಮುಂದುವರೆಯಲಿದೆ. ನಮ್ಮ ತಂಡಕ್ಕೆ ಇಲ್ಲಿಯವರೆಗೂ ತಾವುಗಳು ಕೊಟ್ಟ ಸಹಕಾರವನ್ನು ಮುಂದುವರೆಸಿ ಎಂದು ಎಲ್ಲರಲ್ಲೂ ಕೇಳಿಕೊಳ್ಳುತ್ತೇವೆ.
ನಮ್ಮ ತಂಡಕ್ಕೆ 3 ವರ್ಷ ತುಂಬಿದ ಈ ಸಂಧರ್ಭದಲ್ಲಿ ನಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.