(www.vknews.com) : ಕರ್ಣಾಟಕ ರಾಜ್ಯವು ಕೊರೋನದಿಂದಾಗಿ ಶ್ಮಶಾನದತ್ತ ಸಾಗುತ್ತಿದೆ.ಕೊರೋನದಿಂದ ಸಾವಿನಲ್ಲಿ ರಾಜ್ಯವು 5ನೇ ಸ್ಥಾನಕ್ಕೇರಿದೆ.ಮಂತ್ರಿಗಳು ಮೀಟಿಂಗ್ ನಡೆಸುವುದು ಹೇಳಿಕೆ ಕೊಡುವುದು ಇಷ್ಟಕ್ಕೇ ಸೀಮಿತವಾಗಿದ್ದಾರೆ.ಯಾವುದೂ ಕಾರ್ಯ ರೂಪಕ್ಕೆ ಬರ್ತಾ ಇಲ್ಲ.ಮಾತ್ರವಲ್ಲ ಮಂತ್ರಿಗಳ ಮಾತಿಗೂ ಇಲ್ಲಿ ನಡೆಯುವ ಕಾರ್ಯಗಳಿಗೂ ತಾಳೆಯೇ ಇಲ್ಲ.ಕೊರೋನ ನಿಯಂತ್ರಣಕ್ಕೆ ಸರಕಾರವು ಕೈಗೊಂಡ ಎಲ್ಲವೂ ನಿರಾಶಾದಾಯಕ.ಆರ್ಥಿಕವಾಗಿ ದೇಶವು ಪಾತಾಳಕ್ಕೆ ತಲುಪಿದೆ.ಉದ್ಯೋಗವಿಲ್ಲದೆ ಯುವಕರು ಬೀದಿ ಪಾಲಾಗುತ್ತಿದ್ದಾರೆ.ಲಾಕ್ ಡೌನ್ ಒಂದನ್ನು ಬಿಟ್ಟರೆ ಸರಕಾರದ ಬಳಿ ರೋಗ ನಿಯಂತ್ರಣಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗಗಳಿಲ್ಲ.
ಈಗ ರಾಜ್ಯದಲ್ಲಿ ನಡೆಯುತ್ತಿರುವ ವಿಚಿತ್ರ ರೀತಿಯೆಂದರೆ ನೆಗಡಿ ಶೀತ ಕೆಮ್ಮು ಬಂದುಬಿಟ್ಟರೆ ಅವನನ್ನು ಭಯೋತ್ಪಾದಕರ ತರಹ ಎತ್ತಿಕೊಂಡು ಹೋಗಿ ಸರಕಾರಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ಸೇರಿಸುವುದು.ಗಂಟಲು ದ್ರವದ ವರದಿ ಬರುವವರೆಗೆ ಯಾವುದೇ ಔಷದಿಗಳು ನೀಡುವುದಿಲ್ಲ.ರೋಗಿಯು ಮದು ಮೇಹದವನಿರಲಿ,ರಕ್ತದೊತ್ತಡದವನಿರಲಿ ಹಾರ್ಟ್ ಸಂಬಂದಿತ ರೋಗದವನಿರಲಿ ಅಥವಾ ಅಪಘಾತದಿಂದ ಎಲುಬು ತುಂಡಾದವನಿರಲಿ ಯಾವುದಕ್ಕೂ ಮದ್ದು ನೀಡಲಾಗುವುದಿಲ್ಲ. ಇದರಿಂದಾಗಿ ಮೊದಲೇ ಇದ್ದ ರೋಗಗಳು ಉಲ್ಬಣಗೊಳ್ಳವುದಲ್ಲದೆ ಇನ್ನೇನಾಗಬೇಕು.ಈ ರೀತಿಯು ಸಿಸ್ಟಮ್ ಬದಲಾಗಬೇಕು.
ದಿನ ಬೆಳಗಾದರೆ ದೃಶ್ಯ ಮಾದ್ಯಮಗಳು ಬಾಗಿಲು ತೆರೆಯುವುದೇ ಕೊರೋನಾ ಕುರಿತ ಸ್ಪೋಟ ವಿಸ್ಪೋಟಕ ಎಂಬ ಗಾಳಿ ಸುದ್ದಿಯೊಂದಿಗೆಯೇ ಆಗಿದೆ. ಕೆಲವು ಮಾದ್ಯಮಗಳು ದಾಖಲೆಗಳಿಲ್ಲದೆ ಕೊರೋನ ಕುರಿತು ಜನರ ತಲೆ ಕೊರೆಯುವುದರಿಂದ ಲಾಕ್ ಡೌನ್ ಸಮಯದಲ್ಲೂ ಮನೆಯಲ್ಲಿ ಕೂರಲಾಗದಂತಹ ವಾತಾವರಣ ನಿರ್ಮಾಣ ಮಾಡಿರುತ್ತದೆ.ಇತ್ತ ಜನಗಳು ಜೀವನ್ಮರಣ ಹೋರಾಟದ ಲ್ಲಿದ್ದರೂ ಸರಕಾರ ಮಾತ್ರ ರೋಗಿಗಳ ಜೀವವುಳಿಸುವ ವೆಂಟಿಲೇಟರ್ ಖರೀದಿಯಲ್ಲಿ ಕೂಡ ಅವ್ಯವಹಾರ ಮಾಡಿ ಜೇಬು ತುಂಬುವುದರಲ್ಲಿ ನಿರತವಾಗಿದೆ.ಅವದಿಗೂ ಮೊದಲೇ ಮಾರಲ್ಪಟ್ ಕೆಲವು ಮಾದ್ಯಮಗಳಿಗೆ ಕುರುಡು ಆವರಿಸಿದೆ.ಎಲ್ಲಾ ದಿಕ್ಕಿನಲ್ಲೂ ವಿಪಲವಾದ ಸರ್ಕಾರದ ನಡೆಯನ್ನು ನೋಡುವಾಗ ಜನರ ದಿಕ್ಕು ತಪ್ಪಿಸಲು ಮಾನವುಳಿಸಿಕೊಳ್ಳಲು ಸರಕಾರಕ್ಕೆ ಇಂತಹದೊಂದು ಸಾಂಕ್ರಾಮಿಕ ರೋಗದ ಅಗತ್ಯವಿದ್ದಂತೆ ಕಾಣುತ್ತಿದೆ.
ಅಲ್ಲದೆ ರಾಷ್ಟ್ರ ಮಟ್ಟದಲ್ಲಿದ್ದ ಕೊರೋನ ರಾಜ್ಯಕ್ಕೂ ರಾಜ್ಯದಿಂದ ತಾಲೂಕಿಗೂ ತಾಲೂಕಿನಿಂದ ಗ್ರಾಮಮಟ್ಟಕ್ಕೂ ಗಲ್ಲಿ ಗಲ್ಲಿಗೂ ಸರಕಾರದ ಬೇಜವಾಬ್ದಾರಿತನದಿಂದ ನುಸುಳಿಯಾಯಿತು ಅಂದು ಸರಕಾರವು ಮದ್ಯಕ್ಕಾಗಿ ಸರದಿ ಸಾಲಿನಲ್ಲಿ ನಿಂತವರಿಗೆ ಹೂ ಹಾರ ಹಾಕಿ ಸ್ವಾಗತಿಸಿತ್ತು ಅಂದಿನಿಂದ ರೋಗ ಹರಡುವಿಕೆಗೆ ಕಡಿವಾಣವಿಲ್ಲದಾಯಿತು.ಇದರಿಂದ ಬಹಳ ಸ್ವಚ್ಛವಾಗಿ ಕಂಡು ಬರುತ್ತಿದೆ ಸರಕಾರ ಬಯಸುತ್ತಿರುವುದು ಪ್ರಜ್ಞಾವಂತಹ ನಾಗರಿಕರನ್ನಲ್ಲ ಬದಲು ಮದ್ಯದ ಅಮಲಿನಲ್ಲಿ ಸರಕಾರದಕೆ ವಿವೇಕ ಇಲ್ಲದಂತಾಗಿದೆ
ಇನ್ನು ಕೋವಿಡ್ ನಿಂದ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸರಕಾರವೇ ಅಣಿಗೊಳ್ಳುವುದು ಸರಿಯಾದ ರೀತಿಯಲ್ಲ.ಜೀವನದುದ್ದಕ್ಕೂ ಬದುಕಿ ಬಂದ ಆ ಜೀವ ಕೊನೆಗೆ ಕಣ್ಣಿಗೂ ಕಾಣಿಸದೆ ಆಸ್ಪತ್ರೆ ಅಧಿಕಾರಿಗಳು ತರಾತುರಿಯಲ್ಲಿ ಪ್ಯಾಕಿಂಗ್ ಗಳನ್ನು ನೋಡಿದರೆ ಸಂಶಯಕ್ಕೆ ಎಡೆ ಮಾಡುತ್ತಿದೆ ಅಲ್ಲದೆ ಇಂಥ ಅಂತ್ಯಸಂಸ್ಕಾರವು ಮಾನವೀಯತೆಯಿಲ್ಲದ ಭಯಾನಕತೆಯಲ್ಲವೇ? ಅದಕ್ಕಾಗಿ ಸರಕಾರವು ಶವದ ಪ್ಯಾಕಿಂಗ್ ಮಾಡುವಾಗ ಕಿಟ್ ದರಿಸಿದ ಶವದ ವಾರೀಸುದಾರನೊಬ್ಬನ ಸಮ್ಮುಖದಲ್ಲಿಯೇ ನಡೆಯಬೇಕು ಅಲ್ಲಿ ಏನು ನಡೆಯುತ್ತಿದೆ ಎಂಬುದು ವಾರೀಸುದಾರರಿಗೆ ಗೊತ್ತಾಗಬೇಕು.ಇನ್ನೊಂದು ವಿಶಯವೆಂದರೆ ಸರಕಾರವು ದೃಶ್ಯ ದಾಖಲೆಗಳನ್ನು ಕೂಡಾ ಮಾಡಿಡಬೇಕು.ಕಾರಣವೆಂದರೆ ನಮ್ಮ ದೇಶದಲ್ಲಿ ವೈಟ್ ಕಾಲರ್ ಜನರಿಂದ ಮನುಷ್ಯನ ಅಂಗಾಂಗಳ ಮಾರಾಟ ಜಾಲವು ಮೊದಲಿನಿಂದಲೇ ನಡೆಯುತ್ತಾ ಬರುವುದರಿಂದ ವೀಡಿಯೋ ರಿಕಾರ್ಡಿಂಗ್ ಅತೀ ಅಗತ್ಯವಾಗಿದೆ.ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಯಾವುದೇ ರೋಗಗಳಿಲ್ಲದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ತಂದು ಅವನ ಕಿಡ್ನಿ ಲಿವರ್ ಗಳೆಲ್ಲವನ್ನೂ ಕತ್ತರಿಸಿ ಕೋವಿಡ್ನ ಹೆಸರಲ್ಲಿ ಅದಿಕಾರಿಗಳು ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅಣಿಗೊಂಡಾಗ ಊರ ನಾಗರಿಕರು ಮತ್ತು ಆತನ ಕುಟುಂಬಸ್ಥರು ಸಂಶಯಗೊಂಡು ಶವವನ್ನು ಬಿಚ್ಚಿನೋಡಿದರು.ಆಗಲೇ ತಿಳಿದಿರುವುದು ಶವದ ಒಳಗಿನ ಎಲ್ಲಾ ಅಂಗಾಂಗಳನ್ನು ಕದ್ದು ತೆಗೆಯಲಾಗಿದೆ ಎಂದು.
ದೆಹಲಿಯಲ್ಲಿ ಆಸ್ಪತ್ರೆಯೊಂದರಲ್ಲಿ ಹಿಂದು ಸ್ತ್ರೀ ಯೊಬ್ಬಳ ಮೃತದೇಹವನ್ನು ಮುಸ್ಲಿಮರಿಗೂ ಮುಸ್ಲಿಂ ಸ್ತ್ರೀಯ ಶವವನ್ನು ಹಿಂದೂಗಳಿಗೂ ನೀಡಿ ಕೈತೊಳೆದುಕೊಂಡರು. ಆದರೆ ಮುಸ್ಲಿಂ ಹುಡುಗಿಯ ಸಹೋದರಿಯು ಶವದ ಮುಖ ನೋಡಲು ಪಟ್ಟು ಹಿಡಿದಿರುವುದರಿಂದಾಗಿದೆ.ಅದಿಕಾರಿಗಳ ಬೇಜವಾಬ್ದಾರಿತನದಿಂದ ಇಂತಹ ಅಚಾತುರ್ಯಗಳು ಸಂಭವಿಸಿದಾಗ ಆ ಕುಟುಂಬ ಗಳ ಮಾನಸಿಕಾವಸ್ಥೆಯು ಹೇಗಿರಬಹುದು ಎಂಬುದನ್ನು ಊಹಿಸಿ ನೋಡೋಣ.
ಇನ್ನು ಶವ ಸಂಸ್ಕಾರಕ್ಕೆ ರುದ್ರ ಭೂಮಿಯನ್ನು ತಡೆಯುವುದು ಕೂಡಾ ಸಭ್ಯ ನಾಗರಿಕತೆಯಲ್ಲ.ಭೂಮಿಯು ಯಾರೊಬ್ಬನ ಸೊತ್ತೂ ಅಲ್ಲ.ಯಾರೂ ಇಲ್ಲಿ ಕಾಲ ಕಾಲಕ್ಕೂ ನೆಲೆ ನಿಲ್ಲುವವರಿಲ್ಲ. ತಡೆಯುವವರಿಗೂ ಯಾವ ದುರ್ಗತಿ ಬರಲಿದೆಯಂದು ಯಾರು ತಾನೇ ಬಲ್ಲರು? ಮನುಷ್ಯತ್ವವು ನಶಿಸಿ ಹೋಗುವುದಕ್ಕೆ ಸರಕಾರವು ಆಸ್ಪದ ನೀಡಲೇ ಕೂಡದು.
ಕೆಲವು ಕಡೆ ಖಾಸಗಿ ಆಸ್ಪತ್ರೆಗಳು ಜನರನ್ನು ದೋಚುತ್ತಿರುವುದಕ್ಕೆ ಕಡಿವಾಣ ಹಾಕಬೇಕಾಗಿದೆ. ಖಾಸಗಿಯವರಲ್ಲಿ ದೊರಕುವ ಸೌಲಭ್ಯಗಳಾದ ಸ್ಕ್ಯಾನಿಂಗ್ ಮಿಷನ್ಗಳು ಹಾಗೂ ಇನ್ನಿತರ ವೈದ್ಯಕೀಯ ಸಲಕರಣೆಗಳು ಸರಕಾರೀ ಆಸ್ಪತ್ರೆಗಳಲ್ಲೂ ಲಭ್ಯವಾದರೆ ಖಂಡಿತವಾಗಿಯೂ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಬೀಳಬಹುದು.ಆದ ಕಾರಣ ಜನರು ಅನುಭವಿಸುತ್ತಾ ಇರುವ ನೋವಿಗೆ ಸಣ್ಣ ಮಟ್ಟದ ಸಾಂತ್ವನ ವಾದರೂ ಆಗಲಿ ಎಂದು ಈ ಕೆಳಗೆ ಕಾಣಿಸಿದ ನಾಲ್ಕು ಬೇಡಿಕೆಗಳನ್ನು ಮಾನ್ಯ ಮುಖ್ಯ ಮಂತ್ರಿಗಳಿಗೆ ಮತ್ತು ಜಿಲ್ಲಾ ಅಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದರು.
1) ಶವವನ್ನು ಪ್ಯಾಕ್ ಮಾಡುವಾಗ ವೀಡಿಯೋ ರಿಕಾರ್ಡಿಂಗ್ ಮಾಡುವುದು 2)ವಾರೀಸುದಾರರೊಬ್ಬರಿಗೆ ಕಿಟ್ ನೀಡಿ ಅವರ ಸಮ್ಮುಖದಲ್ಲೇ ಪ್ಯಾಕ್ ಮಾಡುವುದು 3)ಶವ ಸಂಸ್ಕಾರಕ್ಕೆ ಅಡ್ಡಿಪಡಿಸದಂತೆ ಭದ್ರತೆ ನೀಡುವುದು 4) ಖಾಸಗಿ ಆಸ್ಪತ್ರೆಗಳಲ್ಲಿರುವಂತೆ ಸರಕಾರೀ ಆಸ್ಪತ್ರೆಗಳಿಗೆ ಉಪಕರಣಗಳನ್ನು ಒದಗಿಸುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.