(www.vknews.com) : ಇಲ್ಲಿನ ಬಪ್ಪನಾಡು ದೇವಸ್ಥಾನದ ಮುಂದಿನ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ವೃದ್ದರೋರ್ವರನ್ನು ಸ್ಥಳೀಯರು ರಕ್ಷಿಸಿ ಆಪತ್ಭಾಂಧವ ಆಶ್ರಮಕ್ಕೆ ಸೇರಿಸಲಾದ ಘಟನೆ ಮುಲ್ಕಿ ಬಳಿ ನಡೆದಿದೆ.
ಬಸ್ಸು ನಿಲ್ದಾಣದ ಮೂಲೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ವಯೊ ವೃದ್ಧನನ್ನು ಕಂಡ ರಾಮ್ ಸಾಲ್ಯಾನ್ ಎಂಬುವವರು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಅವರ ಸಹಾಯದಿಂದ ಮುಲ್ಕಿಯ ಮೈಮುನಾ ಫೌಂಡೇಶನ್ ಇದರ ನಿರ್ದೇಶಕ ಆಪದ್ಬಾಂಧವ ಆಸಿಫ್ ರವರಿಗೆ ಕರೆಮಾಡಿ ಅವರ ಆಂಬುಲೆನ್ಸ್ ಮುಖಾಂತರ ಆಶ್ರಮಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ, ಶಾರೀರಿಕ ಸ್ವಚ್ಛ ಗೊಳಿಸಿ, ಹೊಸಬಟ್ಟೆಯನ್ನು ತೊಡಿಸಿ ಬಳಿಕ ಆಪತ್ಭಾಂಧವ ಆಶ್ರಮದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಯಿತು.
ವೃದ್ಧರ ಹೆಸರು ಮಾಧವ ಶೆಟ್ಟಿ'(62) ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪ ಊರು, ಅನಾಥರಾಗಿ ಹೋಟೆಲುಗಳಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸುತ್ತಿದ್ದ ಈತ ಲಾಕ್ ಡೌನ್ ನಂತರ ಕೆಲಸವಿಲ್ಲದೆ ಬೀದಿಗೆ ಬಂದು ತಿಂಗಳುಗಳಿಂದ ಹೆಜಮಾಡಿ ಬಳಿ ಅಂಗಡಿ ಜಗಲಿಯಲ್ಲಿ ಮಲಗುತ್ತಾ ಕೈಚಾಚಿ, ಭಿಕ್ಷೆ ಬೇಡಿ ಒಂದು ಹೊತ್ತು ಹೊಟ್ಟೆ ತುಂಬಿಸುತ್ತಿದ್ದರು, ಇವರಿಗೆ ರಾಜೇಂದ್ರ ಶೆಟ್ಟಿ, ಮಂಜುನಾಥ ಶೆಟ್ಟಿ ಹಾಗೂ ಶಂಕರ್ ಶೆಟ್ಟಿ ಎಂಬ ಮೂವರು ತಮ್ಮಂದಿರಿದ್ದು ಮುಂಬೈಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಇವರ ವಾರಿಸುದಾರರ ಬಗ್ಗೆ ಯಾರಿಗಾದರು ಮಾಹಿತಿ ಇದ್ದರೆ ದಯವಿಟ್ಟು ಸಂಪರ್ಕಿಸಿ ಎಂದು ಆಪತ್ಭಾಂಧವ ಆಸಿಫ್ ತಿಳಿಸಿರುತ್ತಾರೆ.
ಆಸಿಫ್ ಅವರ ಫೋನ್ ನಂಬರ್ :9591088643.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.