(www.vknews.com) : ದಿನಾಂಕ 03 .07. 2020 ದಾರಿಮಿ ಉಲಮಾ ಒಕ್ಕೂಟ ಇದರ ವತಿಯಿಂದ ಅತ್ಯಂತ ಮಹತ್ವ ಪೂರ್ಣ ವಾದ ಎರಡು ಕಾರ್ಯಗಳನ್ನು ನಿರ್ವಹಿಸಲಾಯಿತು. ಪಿಯುಸಿ ವಿಜ್ಞಾನ ವಿಭಾಗದ ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ದಾರಿಮಿ ಮುಖಂಡರಾದ ಬಹು, ಕೆ ಎಲ್ ದಾರಿಮಿಯವರ ಮಗಳಾದ ಮರಿಯಮ್ಮ ಶಂಲ ಮತ್ತು ಕೆ ಬಿ ದಾರಿಮಿಯವರ ಮಗಳಾದ ಆಯಿಷತುಲ್ ಮಿಸ್ರಿಯಾ ಎಂಬಿಬ್ಬರು ವಿದ್ಯಾರ್ಥಿನಿಯರಿಗೆ ನಮ್ಮ ಒಕ್ಕೂಟದ ವತಿಯಿಂದ ಅವರ ಮನೆಗೆ ತೆರಳಿ ಗೌರವಧನ ವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಮಕ್ಕಳು ಇನ್ನಷ್ಟು ಸಾಧನೆಯನ್ನು ಮಾಡಲು ಸಾಧ್ಯವಾಗಲಿ ಎಂದು ದಾರಿಮಿ ಮುಖಂಡರು ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷರಾದ ಎಸ್ ಬಿ ಮುಹಮ್ಮದ್ ದಾರಿಮಿ ಉಸ್ತಾದ್ , ಮೌಲಾನ ಯು ಕೆ ಅಝೀಝ್ ದಾರಿಮಿ ಉಸ್ತಾದ್ ಚೊಕ್ಕಬೆಟ್ಟು, ತಬೂಕು ದಾರಿಮಿ ಉಸ್ತಾದ್, ಕಾಸಿಮ್ ದಾರಿಮಿ ಉಸ್ತಾದ್ ತೋಡಾರು,ಅಬ್ದುಲ್ ಖಾದರ್ ದಾರಿಮಿ ಉಸ್ತಾದ್ ವಳಚ್ಚಿಲ್ ಭಾಗವಹಿಸಿದರು.
ಒಕ್ಕೂಟ ದ ವತಿಯಿಂದ ಯತೀಮ್ ಹೆಣ್ಣುಮಗಳ ವಿವಾಹಕ್ಕೆ ದಾನಿಗಳಿಂದ ಸಂಗ್ರಹಿಸಿದ ಒಂದು ಲಕ್ಷದಷ್ಟು ಮೊತ್ತವನ್ನು ವಧುವಿನ ತಾಯಿಯ ಅಕೌಂಟ್ ಗೆ ಜಮೆ ಮಾಡುವ ಮೂಲಕ ಮಾದರಿ ಸೇವೆಯನ್ನು ಒದಗಿಸಿರುತ್ತದೆ.
ಅದೇ ರೀತಿಯಲ್ಲಿ ಕಳೆದ ಮೂರು ನಾಲ್ಕು ತಿಂಗಳು ಗಳಿಂದ ಕೆಲಸವಿಲ್ಲದೇ ಸಂಕಟದಲ್ಲಿರುವ ಸುಮಾರು ನೂರರಷ್ಟು ಉಸ್ತಾದರಿಗೆ ದಾನಿಗಳಿಂದ ಪಡೆದ ಎರಡು ಲಕ್ಷದಷ್ಟು ಧನ ಸಹಾಯವನ್ನೂವಿತರಿಸಲಾಗಿದೆ .ಈ ಎಲ್ಲಾ ಕಾರ್ಯಗಳನ್ನು ಅಲ್ಲಾಹನು ಸ್ವೀಕರಿಸಲಿ ಮತ್ತು ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲಾ ಸಹೃದಯ ಮಿತ್ರರಿಗೆ ಉನ್ನತ ಪ್ರತಿಫಲ ವನ್ನು ನೀಡಲಿ.
ಹಲವು ಸಂಘಟನೆಗಳು ಅವರರವರ ಕ್ಷೇತ್ರದಲ್ಲಿ ಇಂತಹ ಸೇವಾ ಕೈಂಕರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ವಾಗಿದ್ದು ಪ್ರತಿಯೊಂದು ಸಂಘ ಸಂಸ್ಥೆಗಳು ಇದೇ ರೀತಿ ತಮ್ಮಿಂದಾದ ಸೇವಾ ಕಾರ್ಯಗಳನ್ನು ಮಾಡಲು ಮುಂದೆ ಬರಬೇಕಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.