ಸಕಲೇಶಪುರ (www.vknews.com) : ದಲಿತರ ಮೇಲೆ ಹಲ್ಲೆ ನಡೆಸಿ ಅನೈತಿಕ ಪೋಲಿಸರಿಗೆ ನಡೆಸಿದ ಪ್ರಕರಣ ಕ್ಕೆ ಸಂಬಂದಿಸಿದಂತೆ ಬಜರಂಗ ದಳದ 7 ಮತ್ತು ಇತರೆ ಸಹಚರರ ಮೇಲೆ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಹಲಸುಲಿಗೆ ಗ್ರಾಮದ ನಾಗೇಶ ಎಂಬವರಿಂದ. ಕಳೆದ 8 ರಂದು ಮದ್ಯಾಹ್ನನ 2 ಗಂಟೆಯ ಸಮಯದಲ್ಲಿ ದಲಿತರಿಬ್ಬರು ದನ ತಗೆದು ಕೊಂಡು ಇಸ್ಮಾಯಿಲ್ ರವರ ಮನೆಗೆ ತೆಗೆದು ಹೋಗವಾಗ ದಾರಿಯಲ್ಲಿ ಅಡ್ಡಗಟ್ಟಿದ ಬಜರಂಗದಳದ ಸಹಚರರು ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿದು ಬಂದಿದೆ. ಜಯರಾಜ್ (43) ಮತ್ತು ನಿಂಗರಾಜ್ (40) ಹಲ್ಲೆ ಗೊಳಗಾದ ವ್ಯಕ್ತಿಗಳಾಗಿದ್ದಾರೆ. ಘಟನೆ ಸ್ಥಳದ ಸಮೀಪದ ಹೆಬ್ಬನಳ್ಳಿ ಗ್ರಾಮ ದವರಾಗಿದ್ದಾರೆ. ತಾಲ್ಲೂಕು ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಗೆ ಸಂಬಂದಿಸಿದಂತೆ ಬಜರಂಗ ದಳ ರಾಜ್ಯ ಸಂಚಾಲಕ ರಘು, ಶೇಕರ್ ಪೂಚಾರಿ,ಕೌಶಿಕ್, ರಘು, ಯೋಗೇಶ್,ಮನೋಹರ, ಗಿರೀಶ್, ಹಾಗೂ ಇತರರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ವ್ಯಕ್ತಿ ಗಳ ವಿರುದ್ದ ಮತ್ತಿಬ್ಬರು ಯುವಕರ ಹಲ್ಲೆ ಒಳಗಾದ ಬಗ್ಗೆ ದೂರು ನೀಡಿದ್ದಾರೆ. ಅಬ್ದುಲ್ ಮುತ್ತಲಿಬ್ ಮತ್ತು ಅಜ್ನ್ಯಾನ್ ಹಲ್ಲೆಗೋಳಗಾದವರಾಗಿದ್ದು. 10 ಬಜರಂಗ ದಳದ ಸಹಚರರ ವಿರುದ್ದ ಪೋಲಿಸರಿಗೆ ದೂರು ನೀಡಿ ಹಾಸನದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿದೂರು: ಪ್ರಕರಣಕ್ಕೆ ಸಂಬಂದಿಸಿದಂತೆ ತಮ್ಮ ಮೇಲೆ ಹಲಸುಲಿಗೆ ಗ್ರಾಮದ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದರೆಂದು ಬಜರಂಗ ದಳದ ಸಹಚರರು ಪೋಲಿಸರಿಗೆ ದೂರು ನೀಡಿದ್ದಾರೆ. ಪ್ರಕರಣ ಕ್ಕೆ ಸಂಬಂದಿಸಿದಂತೆ ಅಬ್ದುಲ್ ಖಾದರ್,ಹಸೈನಾರ್, ರಿಜ್ವಾನ್, ಮುತಲಿಬ್,ಅಫ್ರೀದ್, ಅಶ್ವಕ್, ಆಸೀಫ್, ಖಲಂದರ್, ಮತ್ತು ಹೈದರ್ ವಿರುದ್ದ ಹಲ್ಲೆ ಮತ್ತು ಬಜರಂಗ ದಳದ ದಲಿತ ಸಹಜರನ ದೂರಿನ ಅನ್ವಯ ಅಟ್ರಾಸಿಟಿ. ಸೇರಿದಂತೆ 307 ಕಲಂ ದಾಖಲಾಗಿದೆ.
ಪ್ರಕರಣದ ವಿವರ: ಹೆಬ್ಬನ ಹಳ್ಳಿ ಗ್ರಾಮದ ನಾಗೇಶ್ ರವರಿಂದ ಖರೀದಿಸಿದ ದನವನ್ನು ಇಸ್ಮಾಯಿಲ್ ರವರ ಮನೆಗೆ ತೆಗೆದು ಕೊಂಡು ಹೋಗುವಾಗ ಹಲಸುಲಿಗೆ ಸಮೀಪ ದಾರಿ ಮದ್ಯೆ ನೀಲಿ ಆಲ್ಫೋ ಕಾರು ಹಾಗೂ ಬೈಕಿನಲ್ಲಿ ಬಂದು ಅಡ್ಡ ಗಟ್ಟಿದ ಬಜರಂಗದಳದ ತಂಡ ಯವಕರು ದನಗಳ ಸಾಗಿಸುವ ತ್ತಿದ್ದ ವ್ಯಕ್ತಿ ಗಳನ್ನು ಗಳಿಸಿದ್ದಾರೆ. ಪಕ್ಕದ ಊರಿನ ಅಮಾಯಕರನ್ನು ಅಪರಿಚಿತರು ಥಳಿಸುತ್ತಿರುವುದನ್ನು ಕಂಡ ಸ್ಥಳಿಯರು ಹಲ್ಲೆಯನ್ನು ತಡೆಯಲು ಮುಂದಾಗಿದ್ದಾರೆ. ಹಲ್ಲೆ ತಡೆಯಲು ಬಂದವರನ್ನು ಥಳಿಸಲು ಬಜರಂಗ ದಳದ ತಂಡ ಥಳಿಸಲು ಮುಂದಾದಾಗ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.
ಸಚಿವ ಸಿ ಟಿ ರವಿ ಕುಮ್ಮಕ್ಕು; ಕಾಂಗ್ರೆಸ್ ಆರೋಪ:
ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು, ಇದಕ್ಕೆ ಪೋಲಿಸ್ ಬಿಲಾಕೆ ಇದೆ , ತಪ್ಪು ಸರಿ ತೀರ್ಪು ನೀಡಲು ನ್ಯಾಯಾಲಯವಿದೆ ಇವರುಗಳೆ ಪೋಲಿಸ್ ಕೆಲಸ ಮಾಡುವುದು ಸರಿಯಲ್ಲ.
ತಾಲ್ಲೂಕಿನಲ್ಲಿ ನಿರಂತರವಾಗಿ ಕೋಮುವಾದಿಗಳು ತಾಲ್ಲೂಕು ಆಡಳಿತವನ್ನು ಹಾಗೂ ಇಲ್ಲಿಯ ಜನರನ್ನು ಗೋಳು ಹೊಯ್ದು ಕೋಳ್ಳಲು ಪ್ರವಾಸೋದ್ಯಮ ಮಂತ್ರಿ ಸಿ ಟಿ ರವಿ ಕುಮ್ಮಕ್ಕು ಎಂದು ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಹಾನುಬಾಳ್ ಬಾಸ್ಕರ್ ಆರೋಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.