ಸುಲ್ತಾನ್ ಮುರಾದ್ -V ಕಳೆದ ಚಾಪ್ಟರ್ ನಲ್ಲಿ ಅಧಿಕಾರ ಹಿಡಿದ ತನಕದ ಕಥೆಗೆ ವಿರಾಮ ವಿಟ್ವು. {Sign خليل سراج}
– ಮುಂದುವರಿಸುವ ಮೊದಲು, ಈ ತುರ್ಕರು ಯಾರು ?, ಅವರ ಮೂಲ ಜಾಲಾಡುವ, ಒಮ್ಮೆ ಫ್ಲಾಶ್ ಬ್ಯಾಕ್ಗೆ ಹೋಗೋಣ…
(www.vknews.com) : ಅಂದರೆ ಸುಮಾರು 6-7 ಸಾವಿರ ವರ್ಷ ಹಿಂದೆ, ಅದೊಂದು ಮಹಾ ಜಲ ಪ್ರಳಯ , ಹಜಾರತ್ ನೂಹ್ ಅಲೈಸ್ಸಲಾಮ್ ಕಾಲದಲ್ಲಿ ನಡೆದ , ಪವಿತ್ರ ಖುರಾನ್, ಬೈಬಲ್ ಮತ್ತು ತೌರಾತ್ ನಲ್ಲಿ ಉಲ್ಲೇಖ ವಿರುವ ಘಟನೆ , ಸೃಷ್ಟಿಕರ್ತ ಅಲ್ಲಾಹನಲ್ಲಿ ನಂಬಿಕೆ ಇರುವವರಿಗೆ ಒಂದು ದೈತ್ಯ ಹಡಗು ಪ್ರವಾದಿ ನೂಹು ಅಲೈಸ್ಸಲಾಮ್ ಅವರ ನೇತೃತ್ವದಲ್ಲಿ ಸಿದ್ಧವಾಗಿತ್ತು , ಪ್ರವಾದಿ ಯವರಿಗೆ 4 ಮಕ್ಕಳು , ಶಾಮ್, ಹ್ಯಾಮ್, ಖಿನಾನ್ ಮತ್ತು ಯಾಫೀಝ್, ,ಪ್ರವಾದಿ ತನ್ನ 3 ಮಕ್ಕಳು, ಮತ್ತು ಸಂಗಡಿಗರು (ಅಲ್ಲಾಹನ ದಾಸರು) , ಪ್ರಪಂಚದ ಎಲ್ಲಾ ಪ್ರಾಣಿ ಪಕ್ಷಿಗಳ ಜೋಡಿಗಳು, ಸಸ್ಯ ಜಾಲ, ಹಡಗಿನಲ್ಲಿ ತುಂಬಿಸಿ ಸಜ್ಜಾದವು, ಮಹಾ ಪ್ರಳಯ ದಲ್ಲಿಯೂ ಹಡಗು ಸುಂದರ ಹೂವಿನಂತೆ ತೇಲಿ ಸೂಚಿಸಿದ ದಡ ದತ್ತ ಹೋಯ್ತು, ಅದರಲ್ಲಿ ಖೀನಾನ್ ಎಂಬ ಮಗ ಮತ್ತು ನೂಹ ಅಲೈಸ್ಸಲಾಂ ಅವರ ಪತ್ನಿ, ಏಕ ದೇವ ಸಂದೇಶ ದಿಕ್ಕರಿಸಿ ಮಹಾ ಪ್ರಳಯಕ್ಕೆ ಕೊಚ್ಚಿ ಹೋದರು.
ಈಗ ಇರುವ ಪ್ರಪಂಚದ 90% ಜನಾಂಗ ನೂಹ ಅಲೈಹಿಸ್ಸಲಾಂ ಅವರ ಸಂತಾನ ಅಂತ ಪಂಡಿತರ ಅಭಿಪ್ರಾಯ, ಪ್ರವಾದಿಯ ಮಗ ಯಾಫೀಜ್ ಇಬ್ನ್ ನೂಹ್ 9 ಮಕ್ಕಳಲ್ಲಿ ತುರ್ಕ್ ಕೂಡ ಒಬ್ಬರು, ಅವರ 6 ನೆಯ ತಲೆಮಾರಿನಲ್ಲಿ ಅವಳಿ ಜವಳಿ ಗಳಾಗಿ ಹುಟ್ಟುತ್ತಾರೆ ಮೊಗುಲ್ ಮತ್ತು ತಾತಾರ್ ಎಂಬ ಎರಡು ಗಂಡು ಮಕ್ಕಳು.
ಇಷ್ಟರ ಹೊತ್ತಿಗೆ ಅಲ್ಲಾಹನ ದೀನ್ ಮರೆತು ಹೋಗುತ್ತದೆ ಜನಾಂಗ, ನಾನ ಸೃಷ್ಠಿ ಗಳಲ್ನು ಪೂಜಿಸುತ್ತಾರೆ, ಅಲ್ಲಿ ಶುರುವಾಗುತ್ತದೆ ಮಂಗೋಲ್ ವಂಶ, ತಾತಾರ್ ಎಂದರೆ ನಾವು ಇವತ್ತು ನೋಡುವ ರಷ್ಯನ್ ಜನರು, ನೋಡೋಕೆ ಈಗಲೂ ಸ್ವಲ್ಪ ಸಾಮ್ಯತೆ ಇದೆ ಈ ಏರಡು ಜನಾಂಗ ದಲ್ಲೂ, ಕೆಲವು ಮತ ಪಂಡಿತರ ಅಭಿಪ್ರಾಯ ಪ್ರಕಾರ ಹಜ್ರತ್ ನೋಹ್ ಅಲೈಸಲಾಂ ರವರ ಪುತ್ರ ಶಾಮ್ ರವರು ಸಿಂಧ್ ನದಿಯ ಭಾಗದಲ್ಲಿ ಬಂದು ನೆಲೆಸಿದರು, ಈ ಇಂಡಸ್ civilization ಸಿಂಧೂ ನದಿಯ ನಾಗರಿಕತೆ ಶುರು ವಾದದ್ದೆ ಶಾಮ್ ಇಬ್ನು ನೂಹ ಅವರಿಂದ ಎನ್ನೋ ಅಭಿಪ್ರಾಯ ಇದೆ.
ಮೋಗುಲ್ ಗೆ “ಖಾರ ಖಾನ್” ಎಂಬ ಮಗ ಇದ್ದ , ತಂದೆ ಕಾಲಾ ನಂತರ ಅವನೇ ಉತ್ತರಾಧಿಕಾರಿಯಾಗಿ ಆಳ್ವಿಕೆ ಶುರು ಮಾಡಿದ, ಮಹಾ ಕ್ರೂರಿ , ಇಸ್ಲಾಮಿನ ಬೋಧನೆ ಸುತಾರಾಂ ಇಷ್ಟವಿಲ್ಲ, ಯಾರಾದರೂ ಮಾತಾಡಿದರೆ, ಅಲ್ಲೇ ಕೊಲ್ಲುತಿದ್ದ, ಜನರೆಲ್ಲ ಭಯ ಪಡುತ್ತಿದ್ದರು, ಅವನ ಪತ್ನಿ ಗರ್ಭಿಣಿಯಾಗಿರುವಾಗ ಅವಳಿಗೆ ಹೊಟ್ಟೆಯಲ್ಲಿರುವ ಮಗು ಪ್ರತಿ ದಿನ ಕನಸಿನಲ್ಲಿ ಬಂದು ಹೇಳುತ್ತೆ, “ನೀವು ಮುಸ್ಲಿಂ ಆದರೆ ಮಾತ್ರ ನಾನು ಹುಟ್ಟು ತ್ತೇನೆ” ಅವರು ಖಾರ ಖಾನ್ ಗೆ ಹೆದರಿ ಕನಸನ್ನು ಯಾರಲ್ಲೂ ಹೇಳಿಲ್ಲ, ದಿನ ಹೋದಂತೆ ಹೆಚ್ಚು ಕನಸು, ಕೊನೆಗೂ ಗೌಪ್ಯವಾಗಿ ಅಲ್ಲಾಹನ ದೀನ್ ಸ್ವೀಕರಿಸಿದರು.
ಓಗುಜ್ ಖಾನ್ ಎಂಬ ಸುಂದರ ಮಗುವಿಗೆ ಜನ್ಮ ನೀಡಿದರು ಆ ಮಹಾತಾಯಿ, ಈ ಹೆಸರು ನೆನಪಿನಲ್ಲಿ ಇಟ್ಟುಕೊಳ್ಳಿ , ಕಥನದ ಉದ್ದಕ್ಕೂ ಮುಂದಿನ chapter ಗಳಲ್ಲಿ ಓಗುಸ್ ಖಾನ್ ಪದೇ ಪದೇ ಬರುತ್ತದೆ, ಇವರು ಹುಟ್ಟಿ ಕೇವಲ ಒಂದೇ ದಿನ ತಾಯಿ ಹಾಲು ಕುಡಿಯುತ್ತಾರೆ, 3 ದಿನದಲ್ಲಿ ಮಾತು ಬರುತ್ತದೆ, ಕೆಲವು ಪಂಡಿತರ ಅಭಿಪ್ರಾಯ ಪ್ರಕಾರ ಪವಿತ್ರ ಖುರಾನ್ ನಲ್ಲಿ ಹೇಳಿದ ದುಲ್ ಖರ್ನೈನ್ ಈ ಒಗೂಸ್ ಖಾನ್ ಇರಲೂ ಬಹುದು ಅಂತ, ಅಲ್ಲಾಹು ನಿಗೆ ಮಾತ್ರ ಗೊತ್ತು ಸತ್ಯ, ವರ್ಷಗಳು ಕಳೆದು ಹೋದವು , ತನ್ನ ಸೋದರ ಸಂಬಂಧಿ ಜೊತೆ ವಿವಾಹ ಆಗುತೆ, ಅವಳು ಇಸ್ಲಾಮ್ ಧರ್ಮ ಸ್ವೀಕರಿಸಲು ಸಿದ್ಧರಿಲ್ಲದ ಕಾರಣ, ಅವಳನ್ನು ಬಿಟ್ಟು, ಇನ್ನೊಂದು ಸೋದರ ಮಾವನ ಮಗಳ ಜೊತೆ ವಿವಾಹ ಮಾಡುತ್ತಾರೆ, ಇಬ್ಬರೂ ಇಸ್ಲಾಮ್ ಧರ್ಮ ಪಾಲನೆ ಮಾಡುವ ಬಗ್ಗೆ ಖಾರ ಖಾನ್ ಗೆ ತಿಳಿವುತ್ತದೆ, ಇಬ್ಬರನ್ನು ಕೊಳ್ಳಲು ಮನೆಗೆ ಬರ್ತಾನೆ ಖಾರ ಖಾನ್, ಓಘುಸ್ ಖಾನ್, ತನ್ನ ಮೊದಲ ಧರ್ಮ ಯುದ್ದ ತಂದೆ ಖಾರ ಖಾನ್ ವಿರುದ್ಧ ಹೋರಾಡಿ, ಅವನನ್ನು ಕೊಲ್ಲುತ್ತಾರೆ.
ಒಗ್ಗುಸ್ ಖಾನ್ ನ ಹೊಸ ಶಕೆ ಪ್ರಾರಂಭ ಆಗುತ್ತೆ, ತನ್ನ ರಾಜ್ಯದ ಎಲ್ಲ ಕುಲ ಗೋತ್ರ ಮೇಧಾವಿ ಗಳನ್ನು ಕರೆದು ಒಂದು ಪಂಚಾಯ್ತಿ ಮಾಡ್ತಾರೆ, ಪ್ರತಿ ಮನೆಯಿಂದ ಒಂದೊಂದು ಮಗನನ್ನು ತನಗೆ ನೀಡಿ ಎಂದು ಆಜ್ಞೆ ನೀಡುತ್ತಾರೆ, ಓಗೋಜ್ ಖಾನ್ ತನ್ನ ಮೊದಲ ಸೈನ್ಯ ತಯ್ಯಾರು ಮಾಡಿದರು, ಪ್ರಪಂಚದ ನಾನಾ ಭಾಗಗಳಿಗೆ ಕಳುಹಿಸಿದರು, ಕೆಲವು ಖಿತಾಬ್ ಪ್ರಕಾರ ಓಘುಜ ಖಾನ್ ಹಜ್ರತ್ ಇಬ್ರಾಹಿಮ್ ಅಲೈಸಾಲಂ ರವರ ಕಾಲದವರು ಅಂತ, ಅಲ್ಲಾಹು ಆಲಂ.
ಕಾಲಗಳು ಕಳೆಯುತ್ತದೆ, ಓಗ್ಗುಸ್ ಖಾನ್ ತಲೆಮಾರು 24 ವಿಭಾಗ ವಾಗಿ, ನಾನಾ ಭಾಗದಲ್ಲಿ ವಾಸವಾಗಿ ಇರುತ್ತದೆ, ಈ ಕಾರಣಕ್ಕಾಗಿಯೇ ತುರ್ಕರಿಗೆ ಒಗ್ಹುಸ್ ಖಾನ್ ಎಂದರೆ ಒಂದು ಮುತ್ತಜ್ಜ ಇದ್ದ ಹಾಗೆ ; ಇನ್ನೊಂದು ವಿಷಯ ಗೊತ್ತಾ ನಿಮಗೆ ? ನಮ್ಮಲ್ಲಿ ಕೆಲವು DNA ಜಲಾಡಿದರೆ ತೂರ್ಕ್ ಪರಂಪರೆಗೆ ಹೋಗಿ ಸೇರ ಬಹುದು,ಯಾಕಂದರೆ ಭಾರತ ದೇಶವನ್ನು ಆಳಿದ ಸುಮಾರು 14 ರಾಜ ಮನೆತನದ ಮೂಲ ತುರ್ಕಿ ಗಳು, ಮೊಗಲರು, ಗಜನಿ, ತುಘಲಕ್, ಆದಿಲ್ ಷಾ, ಬೀದರ್ ಸುಲ್ತಾನ್, ಬಿಜಾಪುರ ಸುಲ್ತಾನರು, ಖಿಲ್ಜಿ ಇವರೆಲ್ಲರೂ ತುರ್ಕಿಗಳೆe, 🏇 ಈ ಫ್ಲ್ಯಾಶ್ ಬ್ಯಾಕ್ ಇಲ್ಲಿಗೆ ನಿಲ್ಲಿಸಿ, ಸುಲ್ತಾನ್ ಅಬ್ದುಲ್ ಹಮೀದ್ ರವರ ಕಡೆ ಹೋಗೋಣ……
ಮುಂದಿನ ಚಾಪ್ಟರ್ ಅತೀ ಶೀಘ್ರದಲ್ಲಿ !
– ಖಲೀಲ್ ಸೇರಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.