ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಆಗಸ್ಟ್ 15 ಕಲ್ಲೇರಿ ತಣ್ಣೀರುಪಂತ ಗ್ರಾಮದ ಅಳಕೆ ರಹ್ಮಾನಿ ಜುಮಾ ಮಸೀದಿ ವಠಾರ 74 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜಮಾಅತ್ ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರ್* ರವರ ಪ್ರಾರ್ಥನೆಯೊಂದಿಗೆ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ಧ್ವಜರೋಹಣದ ಮೂಲಕ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಕಾರ್ಯಕ್ರಮವನ್ನು ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಪರಪ್ಪು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SBS ಪ್ರಧಾನ ಕಾರ್ಯದರ್ಶಿ ಶಮೀರ್, ಹಾಗೂ ಉಕ್ಕುಡ ಮುಹಿಸ್ಸುನ್ನ ದಅ್ವಾ ವಿದ್ಯಾರ್ಥಿ ಟಿಪ್ಪುಸುಲ್ತಾನ್ ಅಳಕೆ ದಿಕ್ಸೂಚಿ ಭಾಷಣ ಮಾಡಿದರು. ಮಸ್ಊದ್ ,ಶಿಫಾನ್ ಹಾಡು ಹಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ರಫೀಖ್, ಕೊಶಾಧಿಕಾರಿ ಹುಸೈನ್ ಹಾಜಿ, SSF ಅಧ್ಯಕ್ಷರಾದ ಗಫೂರ್, ಪ್ರಧಾನ ಕಾರ್ಯದರ್ಶಿ ಶಮೀರ್, ಮದ್ರಸ ಅಧ್ಯಾಪಕರಾದ ಅಬ್ದುರ್ರಝಾಖ್ ಸಖಾಫಿ, ಅಬ್ದುರ್ರಝಾಖ್ ಮದನಿ,SBS ಅಧ್ಯಕ್ಷ ಇಸ್ಮಾಯಿಲ್ ಕೆ ಹಾಗೂ SYS SSF, SBS ಕಾರ್ಯಕರ್ತರು ಹಾಗೂ ಜಮಾಅತ್ ಸದಸ್ಯರು ಭಾಗವಹಿಸಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪುಂಡಿಕ್ಕು ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.