ಅಮ್ಮೆಂಬಳ(ವಿಶ್ವಕನ್ನಡಿಗ ನ್ಯೂಸ್): ದೇಶ ಪ್ರೇಮವು ಈಮಾನಿನ ಒಂದು ಭಾಗವಾಗಿದೆ ಎಂಬ ನೆಲೆಯಲ್ಲಿ 74ನೇ ಸ್ವಾತಂತ್ರ್ಯೋವದ ಪ್ರಯುಕ್ತ ಇಂದು ಬೆಳಗ್ಗೆ 8ಗಂಟೆಗೆ ಊರಿನ ಭರವಸೆಯಾ ಬೆಳಕು ಹೆಲ್ಪ್ ಲೈನ್ ಅಮ್ಮೆಂಬದ ವತಿಯಿಂದ ಸಂಸ್ಥೆಯಾ ಅಧ್ಯಕ್ಷರಾದ ಉಬೈದ್ BH ರವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನಡೆಯಿತು.
ನಸ್ವೀರ್ ಮುಸ್ಲಿಯಾರ್ ರವರು ದುಆ ಮಾಡಿ ನೇತೃತ್ವ ವಹಿಸಿದರು. ಕಾರ್ಯಕ್ರಮವನ್ನು ಇಕ್ಬಾಲ್ ಕೋಟೆ ಕೇಂದ್ರ ಜುಮಾ ಮಸೀದಿ ಅಮ್ಮೆಂಬಳದ ಉಪಾಧ್ಯಕ್ಷರಾದ ಕೆರೀಂ ಜೀ ಮಾಜಿ ಅಧ್ಯಕ್ಷರಾದ ಹನೀಫ್ ಎಸ್,ಸಿದ್ದೀಕ್ ಜೀ,ಹೆಲ್ಪ್ ಉಪಾಧ್ಯಕ್ಷ ಪುತ್ತ ರವರು ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇಶ ಎಂಬುವುದು ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ ಈ ದೇಶಕ್ಕೋಸ್ಕರ ಎಲ್ಲಾ ಧರ್ಮದವರು ಹೊರಡಿದ್ದಾರೆ ಎಂದು ಈ ದೇಶಕ್ಕೋಸ್ಕರ ಹೊರಡಿದ ಮುಸ್ಲಿಂ ನಾಯಕರನ್ನು ಸ್ಮರಿಸುತ್ತಾ ಹೆಲ್ಪ್ ಪ್ರ ಕಾರ್ಯದರ್ಶಿ ಸಿರಾಜುದ್ದೀನ್ ಅಮ್ಮೆಂಬಳ ಸಂದೇಶ ಸಾರಿದರು .
ನಂತರ ನಮ್ಮೂರಿನ ಕೀರ್ತಿಯನ್ನು ಬೆಳಿಗಿಸಿದ sslc,PUC ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವು ಸಂಭ್ರಮಕ್ಕೆ ಇನ್ನೂ ಹುರುಪು ನೀಡಿತು. ನಂತರ ಹಾಡಿನ ಮೂಲಕ RK ಮದನಿ ಅಮ್ಮೆಂಬಳ ಉಸ್ತಾದರು ದೇಶ ಪ್ರೇಮವನ್ನು ಬಾನೆತ್ತರಕ್ಕೆ ಏರಿಸಿ ದೇಶಕ್ಕೋಸ್ಕರ ಹೋರಾಡಿದ ನಾಯಕರನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿ ಅಮ್ಮೆಂಬಳದ ಪ್ರ ಕಾರ್ಯದರ್ಶಿ ಸೆಬೀರ್ ಕೋಟೆ ಜೊತೆ ಕಾರ್ಯದರ್ಶಿ ಅಬ್ಬಾಸ್ ಕೋಟೆ ಹೆಲ್ಪ್ ಲೈನ್ ಸಂಚಾಲಕರಾದ ಆರಿಫ್ ಕೋಟೆ,ನಿಝಾಂ ಕೋಟೆ,ಮಂಸೂರು ಪೇಟೆ,ಅಶ್ರಫ್ ಪೇಟೆ,ಲತ್ವೀಫ್ ಪೇಟೆ ದಾನಿಗಳಾದ ನಿಸಾರ್ ಕೋಟೆ,ಫಾರೂಕು ಕೋಟೆ,ಸಿರಾಜ್ ಕೋಟೆ ಹಿರಿಯ ವ್ಯಕ್ತಿ ಅಬ್ದುಲ್ ಖಾದರ್ ಸೇರಿ ಹಲವಾರು ವ್ಯಕ್ತಿಗಳು ಮಕ್ಕಳು,ಯುವಕರು ಭಾಗವಹಿಸಿದರು.ಕೊನೆಗೆ ಸಿಹಿ ತಿಂಡಿ ಹಂಚುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಿದರು.
✍ತಂಜೀದ್ ಅಮ್ಮೆಂಬಳ (ಮೀಡಿಯಾ ಹೆಲ್ಪ್ ಲೈನ್)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.