(www.vknews.in)ಇಂದು ಮಧ್ಯಾಹ್ನ ಸುಮಾರು1:30ರ ವೇಳೆಗೆ ಉಪ್ಪಿನಂಗಡಿ ಸೇತುವೆ ಸಮೀಪದ ನೇತ್ರಾವತಿ ನದಿಯ ಬಳಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾಲುಜಾರಿ ನದಿಗೆ ಬಿದ್ದು ಮುಳುಗುವ ಸ್ಥಿತಿಯಲ್ಲಿದ್ದ ಬಗ್ಗೆ ಮಾಹಿತಿ ಪಡೆದ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ ಹಾಗೂ ಈಜುಗಾರರಾದ ಚೆನ್ನಪ್ಟರವರು ಕೊಡಲೇ ಸ್ಥಳಕ್ಕೆ ತೆರಳಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಸಾರ್ವಜನಿಕರ ಸಹಾಯದಿಂದ ರಕ್ಷಣೆಗಾಗಿ ಹಗ್ಗ ನೀಡಿ ನಂತರ , ಗೃಹರಕ್ಷಕದಳದ ದೋಣಿಯಲ್ಲಿ ಕೊಡಲೇ ಕಾರ್ಯಚರಣೆಗಿಳಿದು ದೋಣಿಯ ಸಹಾಯದಿಂದ ಆ ವ್ಯಕ್ತಿಯನ್ನು ರಕ್ಷಿಸಲಾಯಿತು .
ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡದ ಪ್ರಭಾರ ಘಟಕಾಧಿಕಾರಿ ದಿನೇಶ್, ಎ.ಎಸ್.ಎಲ್.ಜನಾರ್ದನ ಆಚಾರ್ಯ, ತಾಲೂಕು ಆಡಳಿತ ಈಜುಗಾರ ಚೆನ್ನಪ್ಪ ರವರು ಗೃಹರಕ್ಷಕದಳದ ಈ ತಂಡದಲ್ಲಿ ಇದ್ದರು.
ಅದೇ ರೀತಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಗಳು ಸಹಕರಿಸಿದರು.
ಈ ವ್ಯಕ್ತಿಯನ್ನು. ದೇವಸ್ಥಾನದ ಬಳಿ ಕರೆತಂದು ಪೋಲಿಸರ ಸಹಕಾರದಿಂದ ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.