(www.vknews.com) : ಇದು ಶತಮಾನದ ಅತ್ಯಂತ ಶ್ರೇಷ್ಠ ಕ್ರೀಡಾ ತಾರೆ, ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಅವರ ಗೋರಿಯ ಮೇಲೆ ಕಾಣುವ ಬರಹ. ದುನಿಯಾದಲ್ಲಿ ನಾವು ಬೇರೆಯವರ ಮನೆಯಲ್ಲಿ ಇರಬೇಕಾದರೆ ಬಾಡಿಗೆ ಕೊಡಬೇಕು. ಒಂದು ದಿನ ಲಾಡ್ಜ್ ನಲ್ಲಿ ಉಳಕೊಳ್ಳಬೇಕಾದರೆ ಬಾಡಿಗೆ ಕೊಡಬೇಕು.ಅದೇ ನಾಳೆ ಸಕಲ ಸುಖ ಭೋಗಗಳುಳ್ಳ ಸ್ವರ್ಗದಲ್ಲಿ ರೂಮಿಗೆ ಏನಾದರು ಬಾಡಿಗೆ ಇದೆಯಾ? ಈ ಒಂದು ಪ್ರಶ್ನೆ ನಮ್ಮಲ್ಲಿ ಹಾಕಿಕೊಂಡಿದ್ದೇವಾ?
ನಾವು ದುನಿಯಾದಲ್ಲಿ ಇತರರಿಗೆ ಮಾಡುವ ಸೇವೆಯೇ ಸ್ವರ್ಗದ ರೂಮಿಗೆ ಕೊಡುವ ಬಾಡಿಗೆ. ಪರೋಪಕಾರ ಮತ್ತು ಮಾನವೀಯ ಸೇವೆಗೆ ಇಸ್ಲಾಂ ಬಹಳಷ್ಟು ಮಹತ್ವವನ್ನು ಕೊಟ್ಟಿದೆ.
ಇದನ್ನು ನಾನು ಯಾಕೆ ಉಲ್ಲೇಖಿಸಿದೆನೆಂದರೆ ಮೊನ್ನೆ ಕಿನ್ಯಾದ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ನವರು ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಶಿಕ್ಷಣ ,ಆರೋಗ್ಯ, ಸಹಬಾಳ್ವೆ, ಸೌಹಾರ್ದತೆ, ವರದಕ್ಷಿಣೆ ವಿರೋಧಿ ಆಂದೋಲನ ಮೊದಲಾದ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅಲ್ ಅಮೀನ್ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ಸ್ಥಾನವನ್ನು ಪಡಕೊಂಡಿದೆ. ಟ್ಯಾಲೆಂಟ್ ನ ಮರಳಿ ಬಾ ಶಾಲೆಯನ್ನು ಕೂಡ ಸ್ಥಾಪಿಸಿ ಅನೇಕ ಮಕ್ಕಳಿಗೆ ಶಿಕ್ಷಣದ ಬೆಳಕನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ ಅಮೀನ್ ಗೆ ತನ್ನದೇ ಸ್ವಂತ ವಿಶಾಲವಾದ ಕಟ್ಟಡ ಇದೆ. ಕಟ್ಟಡ ನಿರ್ಮಿಸಲು ಮುಖ್ಯ ರಸ್ತೆಗೆ ತಾಗಿಕೊಂಡಿರುವ ಹತ್ತು ಸೆನ್ಸ್ ಜಾಗವನ್ನು ದಾನ ಮಾಡಿದವರು ಸ್ಥಳೀಯರಾದ ಅಬೂಬಕ್ಕರ್ ಹಾಜಿಯವರು. ಅಂದು ಅವರನ್ನು ನೋಡುವ ಸೌಭಾಗ್ಯ ನನಗೆ ದೊರೆಯಿತು. ಅವರ ಹೃದಯ ಶ್ರೀಮಂತಿಕೆಯನ್ನು ಮನಸಾರೆ ಅಭಿನಂದಿಸುವ ಅವಕಾಶ ಸಿಕ್ಕಿತ್ತು.
ಅಲ್ ಅಮೀನ್ ಗೆ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ವಿಶಾಲವಾದ ಕಟ್ಟಡ ಮತ್ತು ಹೊರಗಡೆ ಬೇಕಾದಷ್ಟು ಜಾಗ ಇದೆ. ಬಹುಶಃ ಅಬೂಬಕ್ಕರ್ ಹಾಜಿ ಅವರು ಸ್ವರ್ಗದಲ್ಲಿ ಸಿಗುವ ಮನೆಗೆ ದುನಿಯಾದಲ್ಲಿ ಬಾಡಿಗೆ ಕೊಡುವ ಪ್ರಯತ್ನ ಮಾಡಿದರು ಅಂತ ನನಗೆ ಅನ್ನಿಸಿತು. ಸರ್ವಶಕ್ತನಾದ ಅಲ್ಲಾಹನು ಅವರ ದಾನದ ಪ್ರತಿಫಲವಾಗಿ ಅವರಿಗೆ ಸ್ವರ್ಗದಲ್ಲಿ ಭವ್ಯವಾದ ಮನೆಯನ್ನು ನೀಡಲಿ ಎಂದು ಪ್ರಾರ್ಥಿಸಿದೆ. ನಮ್ಮೆಲ್ಲಾ ಮೊಹಲ್ಲಾಗಳಲ್ಲಿ ಜಮೀನು ಉಳ್ಳವರು, ಶ್ರೀಮಂತರು ಇಂತಹ ಕೊಡುವ ವಿಶಾಲ ಮನಸ್ಸನ್ನು ಮಾಡಿದರೆ ಬಹುಶಃ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ವಂತ ಜಾಗದಲ್ಲಿ ಕಚೇರಿಯನ್ನು ತೆರೆಯಬಹುದು. ಇನ್ಶಾ ಅಲ್ಲಾಹ್.
ಅಂತಹ ಸನ್ ಮನಸ್ಸನ್ನು ಸರ್ವಶಕ್ತನಾದ ಅಲ್ಲಾಹು ಎಲ್ಲರಿಗೂ ಕೊಡಲಿ ಎಂದು ಪ್ರಾರ್ಥಿಸುತ್ತಾ ನಾಡಿಗೆ ಅನುಗ್ರಹವಾಗಿರುವ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಗೆ ಮತ್ತು ಭೂದಾನಿ ಅಬೂಬಕ್ಕರ್ ಹಾಜಿ ಅವರಿಗೆ ಹೃದಯ ತುಂಬಿದ ಅಭಿನಂದನೆಗಳು.
ಮನದ ಮಾತು ರಫೀಕ್ ಮಾಸ್ಟರ್ ಸಮಾಜ ಸೇವಕ ಮಂಗಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.