ಕೊಪ್ಪಳ (www.vknews.com) : ಜಮೀನು ಅಳತೆಯ 11 ಇ ನಕ್ಷೆ ತಯಾರಿಸಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆಗಳ ಸರ್ವೆ ಇಲಾಖೆಯ ಸುಪರ್ ವೇಜರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗಂಗಾವತಿ ತಹಸೀಲ್ದಾರ್ ಕಚೇರಿಯ ಸರ್ವೆ ಇಲಾಖೆಯ ಮೇಲ್ವಿಚಾರಕ ಗಂಗಾಧರ ತೇಜಪ್ಪ ಅವರು ಗಂಗಾವತಿ ತಾಲೂಕಿನ ಹೆಬ್ಬಾಳ ಕ್ಯಾಂಪ್ನ ರಾಜು.ಪಿ. ಅವರ ಆಸ್ತಿಯ 11 ಇ ನಕ್ಷೆ ನೀಡಲು ನಾಲ್ಕು ಸಾವಿರ ಲಂಚ ಬೇಡಿಕೆ ಇಟ್ಟಿದ್ದರು. ರಾಜು ಪಿ. ಎಸಿಬಿಗೆ ದೂರು ನೀಡಿದ್ದು, ಸರ್ವೇ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಳ್ಳಾರಿಯ ಎಸಿಬಿ ಎಸ್ಪಿ ಗುರುನಾಥ ಮತ್ತೂರು ಮಾರ್ಗದರ್ಶನದಲ್ಲಿ ಕೊಪ್ಪಳ ಎಸಿಬಿ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಎಸಿಬಿ ಪೊಲೀಸ್ ಇನ್ಸಪೆಕ್ಟರ್ ಎಸ್.ಎಸ್.ಬೀಳಗಿ ಹಾಗೂ ಕೊಪ್ಪಳ ಎಸಿಬಿ ಕಚೇರಿ ಸಿಬ್ಬಂದಿ ಸಿದ್ದಯ್ಯ, ಶಿವಾನಂದ್ ಆನಂದ್ ಬಸ್ತಿ, ರಮೇಶ್, ಕಲ್ಲೇಶಗೌಡ್, ರಂಗನಾಥ್, ಬಸವರಾಜ್, ಯಮುನಾ ನಾಯಕ್ ದಾಳಿ ನಡೆಸಿದ್ದರು
ಲಂಚದ ಮೊತ್ತವನ್ನು ಎಜಿಬಿ ಗಂಗಾಧರ ಅವರಿಂದ ಪಡೆಯಲಾಗಿದ್ದು, ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಬಹುತೇಕ ಇಲಾಖೆಯಲ್ಲಿ ನಡೆಯುತ್ತವೆ ಇದಕ್ಕೆ ಸಾರ್ವಜನಿಕರು ದೂರು ನೀಡಲು ಮುಂದೆ ಬಂದ್ದಿದ್ದೆ ಆದ್ದಲ್ಲಿ ಅಂತಹ ಇಲಾಖೆಯಲ್ಲಿನ ಭ್ರಷ್ಟಾಚಾರ ಎಸಗುವ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡಿ ಕಾನೂನು ಕ್ರಮವನ್ನು ಜರಗಿಸುತ್ತಾರೆ
ವರದಿ: ಮರಿಗೌಡ ಬಾದರದಿನ್ನಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.