ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): ಪೇರಡ್ಕ ಮಸೀದಿ ಖತೀಬರಾಗಿ ಸೇವೆಗೈದು ಮೃದು ಸ್ವಭಾವ ಮತ್ತು ನಗು ಮುಖದೊಂದಿಗೆ ಸರ್ವರೊಂದಿಗೆ ಬೆರತು ಪ್ರೀತಿ ಗಳಿಸಿ,ಇತ್ತೀಚಗೆ ನಮ್ಮನ್ನಗಲಿದ ಅಶ್ರಫ್ ಫೈಝಿ ಕಂಬಿಭಾಣೆ ಹಾಗೂ ಆತ್ಮೀಯರಾದ ಮಹಮೂದ್ ದೊಡ್ಡಡ್ಕ ರವರ ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮ ಗೂನಡ್ಕ ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ಬಿ ಎಸ್ ವತಿಯಿಂದ ಆನ್ ಲೈನ್ ಮುಖಾಂತರ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ ಅಧ್ಯಕ್ಷತೆ ವಹಿಸಿ,ಮುಅಲ್ಲಿಂ ಹಬೀಬ್ ಹಿಮಮಿ ಖಿರಾಅತ್ ಪಠಿಸಿದರು. ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಮುಹರ್ರಂ ಸಂದೇಶ ಭಾಷಣ ಮಾಡಿದರು.
ಜಮಾಅತ್ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕೊಪ್ಪತ್ತಕಜೆ, ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ ಗೂನಡ್ಕ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ಅನಿಸಿಕೆ ವ್ಯಕ್ತಪಡಿಸಿ,ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅನುಸ್ಮರಣಾ ಭಾಷಣಗೈದರು.ಎಸ್ ಎಸ್ ಎಫ್ ಪ್ರತಿನಿಧಿ ಇಸ್ಹಾಖ್ ಸ್ವಾಗತಿಸಿ ವಂದಿಸಿದರು.
ಬಳಿಕ ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ರವರ ನೇತೃತ್ವದಲ್ಲಿ ಭಕ್ತಿಪೂರ್ವಕ ಪ್ರಾರ್ಥನಾ ಸಂಗಮ ನಡೆಯಿತು.ನೂರಾರು ಹಿತೈಶಿಗಳು ಪಾಲ್ಗೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.