ಕಾವು(ವಿಶ್ವಕನ್ನಡಿಗ ನ್ಯೂಸ್): ಟಿ.ಡಿ.ಸಿ. ಎಸ್.ವೈ.ಎಸ್.ಎಸ್ಸೆಸ್ಸೆಫ್ ಹಾಗೂ ಬದ್ರಿಯಾ ಮಜ್ಲಿಸ್ ಕಾವು ಇದರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಕಾರ್ಡ್” ಶಿಬಿರವು ದಿನಾಂಕ 29 ಆಗಸ್ಟ್ 2020 ರಂದು ಕಾವು ಜಂಕ್ಷನ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿ. ಡಿ.ಸಿ. ಅಧ್ಯಕ್ಷರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ದುಆದೊಂದಿಗೆ ಚಾಲನೆ ನಡೆಸಿ ಅಬ್ದುಲ್ ಕಾದರ್ ಮುಸ್ಲಿಯಾರ್ ಉದ್ಘಾಟಿಸಿದರು. ಎಸ್.ವೈ.ಎಸ್. ನಾಯಕರಾದ ಅಬ್ದುಲ್ಲ ಅಹ್ಸನಿ ಮಾಡನ್ನೂರು, ಅಬ್ದುಲ್ಲತೀಫ್ ಸಖಾಫಿ ಮಾಡನ್ನೂರು, ತಖಿಯುದ್ದೀನ್ ಮದನಿ ಮಾಡನ್ನೂರು, ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾವು,ಇಬ್ರಾಹಿಂ ಸಅದಿ ಮಾಡನ್ನೂರು, ಮಸ್ಜಿದುನ್ನಈಂ ಕಾವು ಇದರ ಅಧ್ಯಕ್ಷರಾದ ಇಝುದ್ದೀನ್ ಮುಸ್ಲಿಯಾರ್ ಕಾವು, ಪ್ರಧಾನ ಕಾರ್ಯದರ್ಶಿ ರವೂಫ್ ಕಾವು, ಶರೀಫ್ ನೆಕ್ಕರೆ, ಅಬ್ದುಲ್ ಸಲಾಂ ಕಾವು, ತಾಜುದ್ದೀನ್ ಎನ್. ಮಾಡನ್ನೂರು, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಇರ್ಫಾನ್ ಮಾಡನ್ನೂರು, ನೌಫಾನ್ ಕಾವು, ರಿಯಾಝ್ ಕಾವು, ಮುನೀರ್ ಲತೀಫಿ, ಸುಹೈಲ್ ಮಾಡನ್ನೂರು, ಶರ್ವಾನ್ ಕಾವು ಅಲ್ಲದೆ ಟಿ.ಡಿ.ಸಿ. ಎಸ್.ವೈ.ಎಸ್. ಎಸ್ಸೆಸ್ಸೆಫ್ ಕಾರ್ಯಕರ್ತರು ಶಿಬಿರದಲ್ಲಿ ಉಪಸ್ಥಿತರಿದ್ದರು.
ಸುಮಾರು 200 ಕ್ಕಿಂತ ಹೆಚ್ಚು ಫಲಾನುಭವಿಗಳು ಆಯುಷ್ಮಾನ್ ಕಾರ್ಡ್ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯಕ್ರಮದ ಯಶಸ್ವಿಗೆ TDC,SYS,SSF ಶಾಖಾ ಕಾರ್ಯಕರ್ತರು ಹಾಗೂ ಊರವರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.