ಉ.ಪ್ರದೇಶ(ವಿಶ್ವ ಕನ್ನಡಿಗ ನ್ಯೂಸ್): ಸಿ.ಎ.ಎ (ಪೌರತ್ವ ತಿದ್ದುಪಡಿ ಕಾನೂನಿನ) ವಿರುದ್ದ ದೇಶಾದ್ಯಂತ ನಡೆದ ಪ್ರತಿಭಟನೆ ವೇಳೆ,ಭಾಗವಹಿಸಿ-ಭಾಷಣ ಮಾಡಿ-ಪ್ರತಿಭಟನಾಕಾರರನ್ನು ಬೆಂಬಲಿಸಿದ್ದ ದೇಶದ ಖ್ಯಾತ ಮಕ್ಕಳ ತಜ್ಞ ಡಾ.ಕಫೀಲ್ ಖಾನ್ ರ ಬಂಧನ ಕಾನೂನು ಬಾಹಿರ ಎಂದು ಅಲಹಾಬಾದ್ ನ್ಯಾಯಾಲಯ ತೀರ್ಪು ನೀಡಿದೆ.
ಅಲಿಘರ್ ಮುಸ್ಲಿಂ ವಿವಿ ಯಲ್ಲಿ ನಡೆಸಿದ ಭಾಷಣದಲ್ಲಿ ಪ್ರಚೋದನೆಯ ಮೂಲಕ ದೇಶದ ಸುರಕ್ಷತೆ ಧಕ್ಕೆ ತಂದಿದ್ದಾರೆ ಎನ್ನುವ ನಿಟ್ಟಿನಲ್ಲಿ ಎನ್.ಎಸ್.ಎ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಜ.29 ರಂದು ಬಂಧಿಸಲಾಗಿತ್ತು.ಆ ಬಳಿಕ ಮಥುರಾ ಜೈಲಿಗೆ ಹಾಕಲಾಗಿತ್ತು.ಆದರೆ ಡಾ.ಕಫೀಲ್ ಭಾಷಣದಲ್ಲಿ ಯಾವುದೇ ಪ್ರಚೋದನೆಯ ಅಂಶಗಳು ಪ್ರಾಥಮಿಕವಾಗಿ ಕಂಡು ಬಂದಿಲ್ಲ ಆದ್ದರಿಂದ ಈ ಕೂಡಲೇ ಅವರನ್ನು ಬಿಡುಗಡೆಮಾಡಬೇಕೆಂದು ಸರಕಾರಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.ಆದರೆ ಮಾಡದ ತಪ್ಪಿಗಾಗಿ ಈಗಾಗಲೇ 200 ಕ್ಕೂ ಅಧಿಕ ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಡಾ.ಕಫೀಲ್.ಉ.ಪ್ರದೇಶದ ಯೋಗಿ ಸರಕಾರ ಸಿ.ಎ.ಎ ವಿರುದ್ದ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಹಲವು ಪ್ರಮುಖ ವ್ಯಕ್ತಿಗಳನ್ನು ಬಂಧಿಸಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.