ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಪ್ರತೀ ತಿಂಗಳು ಪ್ರಧಾನಿ ಮೋದಿ ನಡೆಸಿಕೊಂಡು ಬರುತ್ತಿರುವ ಮನ್ ಕೀ ಬಾತ್ 66 ನೇ ಕಂತಿನ ಅಗಸ್ಟ್ ತಿಂಗಳ ಕಾರ್ಯಕ್ರಮ ಯೂಟ್ಯೂಬ್ ನಲ್ಲಿ ಅತೀ ಹೆಚ್ಚು ಡಿಸ್ ಲೈಕ್ ಪಡೆಯುವ ಮೂಲಕ ಸಾಮಾಜಿಕ ತಾಣದಲ್ಲಿ ಚರ್ಚಾಗ್ರಾಸವಾಗಿದೆ.ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಪರೀಕ್ಷೆಯಾದ ನೀಟ್-ಜೆಇಇ ಮೊದಲಾದ ಪರೀಕ್ಷೆಗಳನ್ನು ಕೊರೋನ ಕಾರಣದಿಂದ ಮುಂದೂಡಬೇಕೆಂಬ ವ್ಯಾಪಕ ಆಗ್ರಹದ ನಡುವೆಯೂ ನಿರಾಕರಿಸಿರುವ ಕೇಂದ್ರದ ನಡೆಯ ವಿರುದ್ದ ಡಿಸ್ ಲೈಕ್ ಅಭಿಯಾನ ಆರಂಭಗೊಂಡಿದೆ.ಈಗಾಗಲೇ ಅಂದಾಜು ಹತ್ತು ಲಕ್ಷ ಡಿಸ್ ಲೈಕ್ ಗಳು,ಲಕ್ಷಾಂತರ ಕಮೆಂಟ್ ಗಳೂ ಇರುವುದನ್ನು ಕಾಣಬಹುದಾಗಿದೆ.
ಪ್ರಧಾನಿ ಹೇಳಿದ್ದೇನು? -ನಮ್ಮ ಕಾರ್ಯಕ್ರಮ ಕೋವಿಡ್ ಕಾರಣದಿಂದ ನಿಂತಿಲ್ಲ -ಕಳೆದ ಬಾರಿ ಮಾತನಾಡಿದ ಸಂದರ್ಭದಲ್ಲಿದ್ದಂತೆ ಇಂದೂ ಸಾರಿಗೆ ವ್ಯವಸ್ಥೆ,ವಿಮಾನಯಾನ ಮತು ರೈಲ್ವೇ ವ್ಯವಸ್ಥೆ ಹಾಗೇ ಉಳಿದುಕೊಂಡಿದೆ.ಹಲವು ಕಡೆ ಜಾಗರೂಕತೆಯಿಂದ ಪುನಃ ಆರಂಭಿಸಿದ್ದೇವೆ.ಕಾರ್ಖಾನೆಗಳು ನಿಧಾನಕ್ಕೆ ಉತ್ಪಾದನೆಯಲ್ಲಿ ತೊಡಗಿದೆ,ಈ ಮೂಲಕ ಆರ್ಥಿಕ ವ್ಯವಸ್ಥೆ ಚುರುಕಾಗತೊಡಗಿದೆ.ನಾವು ಮತ್ತಷ್ಟು ಎಚ್ಚರಗೊಳ್ಳಬೇಕಿದೆ. -ಸಾಮಾಜಿಕ ಅಂತರ,ಮಾಸ್ಕ್ ಧರಿಸುವಿಕೆ,ಸಾಧ್ಯವಾದಷ್ಟು ಮನೆಯಿಂದ ಹೊರಬರದಿರುವುದರ ಮೂಲಕ ಜಾಗೃತರಾಗಿರಬೇಕಿದೆ. -ಕೊರೋನಾ ನಮ್ಮನ್ನು ಬಾಧಿಸಿದೆ ಆದರೂ ಇತರ ರಾಷ್ಟ್ರಗಳಂತೆ ವೇಗವಾಗಿ ಹರಡಿಲ್ಲ -ನಮೋ ಆಪ್ ಹಾಗು ಇನ್ನಿತರ ಮಾಧ್ಯಮದ ಮೂಲಕ ನಾಗರಿಕರೂ ತಮ್ಮ ಕೊಡುಗೆಗಳನ್ನು ವಿವರಿಸುತ್ತಿದ್ದಾರೆ. -ಹಳ್ಳಿಗಳಲ್ಲೂ-ನಗರದಲ್ಲೂ ವಿವಿಧ ನೂತನ ಆವಿಷ್ಕಾರಗಳು ಕಂಡು ಬರುತ್ತಿದ್ದು ನನ್ನ ಹೃದಯ ತಟ್ಟಿದೆ. -ಕೋವಿಡ್ ಕಾರಣದಿಂದ ಪರಿಣಾಮ ಬೀರದ ಯಾವ ವಿಭಾಗವೂ ಇಲ್ಲ ಆದರೂ ಅತೀ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಿರುವುದು ಬಡವರು ಹಾಗು ಕಾರ್ಮಿಕರಿಗೆ -ಕೊರೋನಾ ಸಂದರ್ಭದಲ್ಲಿ ಯೋಗ ಮಹತ್ವ ಪೂರ್ಣ ಪಾತ್ರ ವಹಿಸುವುದು -ಆಯುಷ್ಮಾನ್ ಭಾರತ್ ಯೋಜನೆ ಒಂದು ಕೋಟಿ ಮಂದಿಗೆ ಸಹಾಯಕವಾಗಿದೆ. -ಪಶ್ಚಿಮ ಬಂಗಾಳ,ಒಡಿಶಾದಲ್ಲಿ ಬೀಸಿದ ಅಮ್ಫಾನ್ ಚಂಡಮಾರುತವನ್ನು ಜನರು ಧೈರ್ಯದಿಂದ ಎದುರಿಸಿದ್ದಾರೆ. -ಭಾರತದ ಕೃಷಿ ವಲಯ ಗಟ್ಟಿಯಾಗಲಿದೆ ಎಂಬ ವಿಶ್ವಾಸವಿದೆ. -ವಿಶ್ವ ಪರಿಸರ ದಿನ : ಜೈವಿಕ ವೈವಿಧ್ಯತೆ ಧ್ಯೇಯ ಸಂದರ್ಭೋಚಿತ -ನಮಗೆ ಗೆಳೆಯರಾಗಿರುವುದು ಗೊತ್ತು,ಶತ್ರುಗಳನ್ನು ಹೇಗೆ ನೋಡಬೇಕೆಂದೂ ತಿಳಿದಿದೆ.(ಚೀನಾವನ್ನ ಉದ್ದೇಶಿಸಿ ಪರೋಕ್ಷ ಟಾಂಗ್) -ಭಾರತದ ಒಳಾಂಗಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕಿದೆ. -ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,ನಿಮ್ಮ ಅಜ್ಜ ಅಜ್ಜಿಯರ ಸಂದರ್ಶನ ಮಾಡಿ ಅದನ್ನು ವೀಡಿಯೋ ಆಲ್ಬಮ್ ಗಳಾಗಿ ಸಂರಕ್ಷಿಸಿ ಇಡಿ ಎಂದು ಕರೆ ನೀಡಿದರು. -ನಾಯಿ ತಳಿಯ ಬಗ್ಗೆ ಮಾತನಾಡಿ,ದೇಶಿ ತಳಿಗಳನ್ನು ಪ್ರೋತ್ಸಾಹಿಸಬೇಕಿದೆ.ಭಾರತದ ಸೇನೆಯಲ್ಲೂ ಧೈರ್ಯವಂತ ದೇಶೀ ನಾಯಿಗಳಿವೆ.ಇದು ಕಡಿಮೆಯಲ್ಲಿ ದೊರಕುವುದು ಮಾತ್ರವಲ್ಲ ನಮ್ಮ ದೇಶೀ ತಳಿಗಳ ವೃದ್ದಿಯಲ್ಲೂ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.