(www.vknews.com) : ಕೇವಲ ಗಾನ, ನಾಟ್ಯ ಮುಂತಾದ ಪ್ರಕಾರಗಳು ಮಾತ್ರ ಕಲೆಯಲ್ಲ. ನಮ್ಮ ಜೀವನದಲ್ಲಿ ಬರುವ ವಿಶಿಷ್ಟ ಸನ್ನಿವೇಶಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುವದೂ ಒಂದು ಕಲೆ.
ಮೂಡುಬಿದಿರೆಯ ವಕೀಲೆ ಶ್ವೇತಾ ಜೈನ್ ಪ್ರತಿ ವರ್ಷ ಆಗಸ್ಟ್ 29ರಂದು ಬರುವ ತಮ್ಮ ಪುತ್ರಿ ಪ್ರಮಯಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮಾಜದ ಗಮನವನ್ನು ತಮ್ಮ ಕಡೆಗೆ ಸೆಳೆಯುವಂತೆ ಮಾಡಿದ್ದಾರೆ.
ತಾವು ಹುಟ್ಟಿ ಬೆಳೆದು ಬಾಳುತ್ತಿರುವ ಜೈನ ಧರ್ಮದ ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ಇಲ್ಲಿನ ಮುನಿ ಪರಂಪರೆಯ ಬಗ್ಗೆ ಭಕ್ತಿಯನ್ನು ಇಟ್ಟು ಕೊಂಡಿರುವ ಇವರು ಪುತ್ರಿ ಪ್ರಮಯಿಯ ಹುಟ್ಟುಹಬ್ಬವನ್ನು 2017ರಲ್ಲಿ ಪಾಣೆಮಂಗಳೂರಿನಲ್ಲಿ ಚಾತುರ್ಮಾಸದಲ್ಲಿದ್ದ ಪರಮ ಪೂಜ್ಯ 108 ಶ್ರೀ ವೀರ್ ಸಾಗರ್ ಮುನಿ ಮಹಾರಾಜರಿಗೆ ಆಹಾರ ನೀಡುವ ಮೂಲಕ ಆಚರಿಸಿದ್ದರು. 2018ರಲ್ಲಿ ಕಾರ್ಕಳದಲ್ಲಿ ಚಾತುರ್ಮಾಸ ಕೈಗೊಂಡಿದ್ದ ಪರಮ ಪೂಜ್ಯ 108 ಶ್ರೀ ವೀರ ವೀರಸಾಗರ ಮುನಿಮಹಾರಾಜರಿಗೆ ಆಹಾರ ನೀಡುವ ಮೂಲಕ ಆಚರಿಸಿದ್ದರು.
ಸಮಾಜ ಮತ್ತು ಧರ್ಮ ಇವೆರಡೂ ಕಣ್ಣುಗಳಿದ್ದಂತೆ.2019ರಲ್ಲಿ ತಮ್ಮ ಆಚರಣೆಯಲ್ಲಿ ಸಣ್ಣ ಬದಲಾವಣೆ ತಂದಿರುವ ಇವರು ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮಕ್ಕಳೊಂದಿಗೆ ಸೇರಿಕೊಂಡು ಹುಟ್ಟುಹಬ್ಬದ ಆನಂದವನ್ನು ಸವಿದರು.
ಇದೀಗ 2020 ರಲ್ಲಿ ಈ ಶುಭ ದಿನವನ್ನು ಪರಮ ಪೂಜ್ಯ 108 ಶ್ರೀ ವೀರಸಾಗರ ಮುನಿ ಮಹಾರಾಜರ ಆಹಾರ ದಾನಕ್ಕೆ ಬಳಸಿಕೊಂಡಿದ್ದು ಅಲ್ಲದೆ ಜೊತೆಗೆ ವೇಣೂರಿನಲ್ಲಿ ಚಾತುರ್ಮಾಸ ಕೈಗೊಂಡಿರುವ ಶ್ರೀ ದಿವ್ಯ ಸಾಗರ ಮುನಿ ಮಹಾರಾಜರ ಆಹಾರ ಚರ್ಯೆ ಯಲ್ಲಿ ಪಾಲ್ಗೊಂಡು , ಅಲ್ಲೇ ಸಮೀಪದ ಕುಗ್ರಾಮದ ಗುಂಡೂರಿಯಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಆಹಾರ ನೀಡಿ ಬಳಿಕ ಅರ್ಹ ವಿದ್ಯಾರ್ಥಿ ಓರ್ವರಿಗೆ ಸ್ಕೂಲ್ fee ಗೆ ಅಲ್ಪ ನೆರವು ನೀಡಿ ಸಂಜೆ ಅಕ್ಕ ಪಕ್ಕದ ಮನೆಯವರೊಂದಿಗೆ ಸೇರಿ ಸಿಹಿ ಹಂಚಿ ಸಂತೋಷ ಹಂಚಿಕೊಂಡರು….
ಮಕ್ಕಳಲ್ಲಿ ಮಾನವೀಯ ಸಂಬಂಧ, ಧಾರ್ಮಿಕ ನೆಲೆಗಟ್ಟು ಮತ್ತು ಪ್ರಕೃತಿಯ ಬೆಸುಗೆಯನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯಶೈಲಿಯ ಮೂಲಕ ಅರ್ಥ ಪೂರ್ಣ ವಾದ ವಿಶಿಷ್ಟ ಹುಟ್ಟುಹಬ್ಬದ ಆಚರಣೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.