(www.vknews.com) : “ಬಾಲ ಭಾಸ್ಕರ ತಾನು ಆಗಸದಿ ಏರುತಿರಲು” ಎಂಬ ಕವಿ ವಾಣಿಯಂತೆ ಪುಟ್ಟ ಪುಟ್ಟ ಹೆಜ್ಜೆಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಅದ ಪ್ರತಿಭೆಗಳನ್ನು ತೋರಿಸುತ್ತ ಮನ್ಯು ಸಹೋದರು ಬೆಳೆದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ತನ್ನ ಪ್ರತಿಭೆಗಳ ಮೂಲಕ ತೆಂಕಿನಲ್ಲಿ ಮುಂದುವರಿದು ಈ ಸಹೋದರ ರಂಗದ ಮೇಲಿನ ಪ್ರತಿಭೆಯನ್ನು ಗುರುತಿಸಬಹುದು. ತೆಂಕುತ್ತಿಟ್ಟಿನಲ್ಲಿ ಮೊದಲ ವೇಷ ಬಾಲಗೋಪಾಲ ವೇಷದಿಂದ ರಂಗಕ್ಕೆ ಏರಿದ ಮನ್ಯು ಸಹೋದರರು.
ದಕ್ಷಿಣ ಕನ್ನಡ ಜಿಲ್ಲೆಯ ಪೊನ್ನಗಿರಿ ಶ್ರೀಕಾಂತ ಭಟ್ ಹಾಗು ಶ್ರೀಮತಿ ಸ್ನೇಹಲತಾ ದಂಪತಿಗಳ ಗರ್ಭ ಸಂಜಾತರಾಗಿ ದಿನಾಂಕ 27-07-2006ರಲ್ಲಿ ಕುಮಾರ ರುದ್ರಮನ್ಯು ಹಾಗು 18-06-2008ರಲ್ಲಿ ಕುಮಾರ ಶಿವಮನ್ಯು ಜನಿಸಿದರು. ಎಳವೆಯಲ್ಲೇ ಮಕ್ಕಳಿಗೆ ಕಲೆಯಾ ಬಗ್ಗೆ ಅಭಿರುಚಿಯನ್ನು ಪೋಷಕರು ತೋರಿಸಿಕೊಟ್ಟರು. ಹೀಗೆ ಮನ್ಯು ಸಹೋದರರು ಪ್ರಸ್ತುತ ಎನ್ ಐ ಟಿ ಕೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಹಿರಿಯವನಾದ ರುದ್ರಮನ್ಯು 9ನೇ ತರಗತಿಯಲ್ಲಿ ಹಾಗು ಶಿವಮನ್ಯು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು, ಅಲ್ಲದೆ ಇವರ ಪಾಠ್ಯೇತರ ಚಟುವಟಿಕೆಗಳು ಯಕ್ಷಗಾನ, ಸಂಗೀತ, ಕರಾಟೆ, ಚಿತ್ರಕಲೆ ಹಾರ್ಮೋನಿಯಂ ಮುಂತಾದ ಸಾಂಕೃತಿಕ ಕಲೆಯನ್ನು ಕಲಿಯುತ್ತಿದ್ದರು. ತೆಂಕುತ್ತಿಟ್ಟಿನ ಹೆಜ್ಜೆಯನ್ನು ಶ್ರೀಯುತ ರಾಜೇಶ್ ಐ ಕಟೀಲನವರು ಕಲಿಸಿಕೊಟ್ಟರು. ಇವರಿಂದ ಕಲಿತ ಯಕ್ಷಗಾನವನ್ನು ಬಾಲಗೋಪಾಲ ವೇಷದ ಕಟೀಲ ಮೇಳದಲ್ಲಿ ರಂಗವೇರಿದರು. ಪೀಠಿಕಾ ಸ್ತ್ರೀವೇಷಧಾರಿ ಕಟೀಲಿನ ಆರು ಮೇಳದಲ್ಲಿ ಕುಣಿದರು.
ಹಾಗೆಯೇ ಯಕ್ಷಗಾನ ಕ್ಷೇತ್ರದಲ್ಲಿ ಧರ್ಮಸ್ಥಳ ಮೇಳದಲ್ಲಿ “ಹರೇ ರಮಣ ಗೋವಿಂದನ” ಎಂದು ಬಾಲ ಗೋಪಾಲನಾಗಿಯೂ, ಹಾಗು ಕುಮಾರ ಮತ್ತು ದೇವೇಂದ್ರ ಬಲಗಳು, ಪಾತ್ರವನ್ನು ಮಾಡಿದ್ದಾರೆ. ಪೊಡವಿಗೊಡೆಯ ಕೃಷ್ಣನ ಸನ್ನಿಧಿ ಉಡುಪಿ ರಾಜಾಂಗಣದಲ್ಲಿ ಪೀಠಿಕಾ ಸ್ತ್ರೀವೇಷಧಾರಿಯಾಗಿ ಬಾಲಗೋಪಾಲರಾಗಿ ಅಲ್ಲದೇ ಉಡುಪಿ ಕ್ಷೇತ್ರ ಮಾಹಾತ್ಮೆಯಲ್ಲಿ ಕುಂತಿ ಭೋಜನ ಬಾಲಕೃಷ್ಣ ಪಾತ್ರದಲ್ಲಿ, ಮಂತ್ರಾಲಯ ಕ್ಷೇತ್ರ ಮಹಾತ್ಮೆಯಲ್ಲಿ ದರೋಡೆ ಕೋರರಾಗಿ ಪಾತ್ರ ಮಾಡಿದ್ದಾರೆ. ಗುರುಗಳಾದ ಕೆ. ಗೋವಿಂದ ಭಟ್ ರ ಗೋವಿಂದಾರ್ಪಣ ಕಾರ್ಯಕ್ರಮದಲ್ಲಿ ಬಾಲಗೋಪಾಲರಾಗಿ, ಪಾತ್ರ ಮಾಡಿದ್ದಾರೆ. ಬಪ್ಪನಾಡು ಮೇಳದಲ್ಲಿ, ಹಾಗು ದೇವಸ್ಥಾನದಲ್ಲೂ, ಪೊನ್ನಾಗಿರಿಯಲ್ಲಿ ಬ್ರಹ್ಮನಾಗಿ ಶಿವಮನ್ಯು ಕುಣಿದರು, ಮೂಡುಮಠದಲ್ಲಿ ವಿವಿಧ ಸಂಘದಲ್ಲಿ ಸಹ ಯಕ್ಷಗಾನ ಸೇವೆಯನ್ನು ಮಾಡಿದ್ದಾರೆ.
ಈ ಪುಟ್ಟ ಮಕ್ಕಳ ಶ್ರೀ ದುರ್ಗಾ ಮಕ್ಕಳ ವತಿಯಿಂದ ಕುಣಿಗಲ್ ನಲ್ಲಿ ಬಲರಾಮ, ಶಿವಮೊಗ್ಗದಲ್ಲಿ ಯಕ್ಷಗಾನದ ಪಾರ್ಥಿ ಸುಬ್ಬ ಪ್ರಶಸ್ತಿ ಬಲಿಪರಿಗೆ ಬಂದಾಗ ಇಂದ್ರಜಿತು ಕಾಳಗದ “ಜನಕ ದುಗುಡವೇದೇಕೆ” ಇಂದ್ರಜಿತುವಿನ ಪಾತ್ರವನ್ನು ಶಿವಮನ್ಯು ಮಾಡಿದ್ದಾರೆ. ಉಡುಪಿಯ ರಾಜಾಂಗಣದಲ್ಲಿ ಶಶಿಪ್ರಭೆ ಪರಿಣಯದ “ಅಣ್ಣ ಲಾಲಿಸುವುದು ನನ್ನಯ ಸಣ್ಣ ಮಾತಿನೊಳು” ಎನ್ನುವ ಕಮಲಧ್ವಜನಾಗಿ ರುದ್ರಮನ್ಯು ಕುಣಿದರೆ, ಹಾಗು ಯಕ್ಷಗಾನದ ಕ್ಷೇತ್ರದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲುನಲ್ಲಿ ಶ್ರೀಯುತ ವೇದಮೂರ್ತಿ ಹರಿನಾರಾಯಣ ಅಸ್ರಣ್ಣರ ಆಶೀರ್ವಾದದಿಂದ ರಾಜೇಶ ಐ ಯವರಲ್ಲಿ ಕುಮಾರ ಶಿವಮನ್ಯು ಮತ್ತು ರುದ್ರಮನ್ಯುರು ಯಕ್ಷಗಾನ ಹೆಜ್ಜೆಯನ್ನು ಕಲಿಯುತ್ತಿದ್ದಾರೆ. ಲೀಲಾವತಿ ಬೈಪಡಿತ್ತಾಯ ದಂಪತಿಗಳಿಂದ ಯಕ್ಷಗಾನದ ಭಾಗವತಿಗೆ ಹಾಗು ಹಿಮ್ಮೇಳವನ್ನು ಕಲಿಯುತ್ತಿದ್ದರು. ಸಂಗೀತ ತರಗತಿಯನ್ನು ಶ್ರೀಮತಿ ವೀಣಾ ಹಾಗು ಎಂ ನಾರಾಯಣರವರಲ್ಲಿ ಕಲಿಯುತ್ತಿದ್ದರು. ಹಾರ್ಮೋನಿಯಂ ವಾದನವನ್ನು ರಮೇಶ್ ಹೆಬ್ಬಾರ್ ರವರಲ್ಲಿ ಕಲಿಯುತ್ತಿದ್ದರು. ಪಾಠ್ಯದ ಜೊತೆಗೆ ಪಾಠ್ಯೇತರ ಚಟುವಟಿಗಳಾದ ಕರಾಟೆಯನ್ನು ನಾಗರಾಜರಲ್ಲಿ ಕಲಿಯುತ್ತಿದ್ದರು, ಕುಮಾರ ರುದ್ರಮನ್ಯುನು ಪ್ರಸ್ತುತ ರಾಮಾಯಣ ವಿಷಯದಲ್ಲಿ 9೦% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಲ್ಲದೆ ಚಿತ್ರಕಲಾ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಹೀಗೆ ಬದುಕಿನುದ್ದಕ್ಕೂ ಯಶಸ್ಸು ಕರ ಹಿಡಿಯಲಿ ಮುಂದಿನ ಭವಿಷ್ಯದ ದಾರಿ ಸುಗಮವಾಗಲಿ ನನ್ನ ಆರಾಧ್ಯ ದೇವರಾದ ಜಗನ್ಮಾತೆ ಚಾರ ಶ್ರೀ ಮಹಿಷಮರ್ದಿನಿ ಅಮ್ಮನವರು ಹಾಗು ಕಲಾ ಸರಸ್ವತಿ ಕರುಣಿ ಇರಲಿ ಎಂದು ಹಾರೈಸೋಣ.
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.