ಹೆಬ್ರಿ(ವಿಶ್ವಕನ್ನಡಿಗ ನ್ಯೂಸ್): ಯಾವುದೇ ಕಲಾಪ್ರಕಾರವು ಯಾವುದೇ ವ್ಯಕ್ತಿಯನ್ನಾಗಲಿ, ಜಾತಿಯನ್ನಾಗಲಿ, ಮತ-ಧರ್ಮವನ್ನಾಗಲಿ, ವ್ಯಕ್ತಿಯಲ್ಲಿನ ನಿಜವಾದ ಶ್ರದ್ಧೆ, ಮತ್ತು ಪ್ರತಿಭೆಯನ್ನು ಮಾತ್ರ ಹೊರಹೊಮ್ಮುತ್ತದೆ. ಹೀಗೆ ಯಕ್ಷಗಾನ ಎನ್ನುವ ದೇವಕಲೆಯ ಕಿರು ಪ್ರತಿಭೆಯನ್ನು ಹೊಂದಿರುವ ನನಗೆ ಪ್ರತಿಷ್ಠಿತ ಘನ ರಾಜ್ಯ ಸರಕಾರದ ಪುರಸ್ಕಾರ ನನಗೆ ಲಭಿಸಿರುವುದು ಅತ್ಯಂತ ಸಂತಸವನ್ನು ನೀಡಿದೆ.
ಇದಕ್ಕೆ ಶ್ರೀ ಕ್ಷೇತ್ರದ ದೇವರು, ನಮ್ಮ ಧರ್ಮದ ದೇವರು, ಹಾಗು ಗುರು ಹಿರಿಯರ ಆಶೀರ್ವಾದದಿಂದ ೨೦೧೯ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ “ಯಕ್ಷ ಸಿರಿ ಪ್ರಶಸ್ತಿ” ಪುರಸ್ಕೃತರಾದ ಮಡಾಮಕ್ಕಿ ಮೇಳದ ಹಿರಿಯ ಕಲಾವಿದ ಕಾವ್ರಾಡಿ ಮಹಮ್ಮದ್ ಗೌಸರು ನುಡಿದಿದ್ದಾರೆ. ಶ್ರೀ ಕ್ಷೇತ್ರ ಮಡಾಮಕ್ಕಿ ವೀರಭದ್ರೇಶ್ವರ ಸನ್ನಿಧಿಯಲ್ಲಿ ದಿನಾಂಕ 11. 09. 2020ನೇ ಶುಕ್ರವಾರದಂದು ಶ್ರೀ ವೀರಭದ್ರ ಯಕ್ಷ ಬಳಗ ಮಡಾಮಕ್ಕಿ ವೇದಿಕೆಯಲ್ಲಿ “ಯಕ್ಷ ಸಿರಿ ಪುರಸ್ಕೃತ” ಶ್ರೀಯುತ ಮಹಮ್ಮದ್ ಗೌಸ್ ಕಾವ್ರಾಡಿಯವನ್ನು ಸನ್ಮಾನ ಪಡೆದು ಮಾತನಾಡಿದರು.
ವೇದಮೂರ್ತಿ ಕೃಷ್ಣಮೂರ್ತಿ ಮಂಜರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿ, ಶ್ರೀಯುತ ಮಹಮ್ಮದ್ ಗೌಸ್ ರನ್ನು ಸನ್ಮಾನಿಸಿ, ಆಶೀರ್ವಚನ ಮಾಡಿದರು. ಸಭೆಯ ಕಳಶದಂತೆ ಶೋಭಿಸುವ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ದೇಗುಲದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಶಶಿಧರ ಶೆಟ್ಟಿ ಮಡಾಮಕ್ಕಿಯವರು ವಹಿಸಿದರು. ಮುಖ್ಯ ಅಭ್ಯಾಗತರಾಗಿ ನಿವೃತ್ತ ಮುಖ್ಯೋಪಾದ್ಯಾಯರು ಅನಂತ ತಂತ್ರಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಡಾಮಕ್ಕಿ ಮೇಳದ ಕಲಾವಿದರೆಲ್ಲರಿಗೂ ಶ್ರೀ ಕ್ಷೇತ್ರ ದೇಗುಲದ ಅಭಿವೃದ್ಧಿ ಸಮಿತಿ, ಗಣೊಶೋತ್ಸವ ಸಮಿತಿ ಮಡಾಮಕ್ಕಿ, ಡಾ. ಹರಿಶ್ಚಂದ್ರ ಗಾಂಧಿ ಆಸ್ಪತ್ರೆ ಉಡುಪಿ ಹಾಗು ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆಯವರ ಸಂಯುಕ್ತ ಆಶ್ರಯದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಇವರಿಗೆ ಮೇಳದ ಸರ್ವ ಕಲಾವಿದರು ಆಬಾರಿಯಾಗಿದ್ದೇವೆ. ಸ್ಥಳೀಯರಾದ ಅಣ್ಣಯ್ಯ ಶೆಟ್ಟಿ ಸ್ವಾಗತಿಸಿ, ವಿಷ್ಣುಧರನ್ ವಂದನಾರ್ಪಣೆಗೈದರು. ನವೀನ್ ಶೆಟ್ಟಿ ಮಡಾಮಕ್ಕಿಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಂತರ ಶ್ರೀ ವೀರಭದ್ರ ಯಕ್ಷ ಬಳಗ ಮಡಾಮಕ್ಕಿ ಇದರ ಕಲಾವಿದರಿಂದ “ಮಾರುತಿ ಪ್ರತಾಪ” ಪೌರಾಣಿಕ ಆಖ್ಯಾನವನ್ನು ಆನ್ ಲೈನ್ ಯಕ್ಷಗಾನ ಪ್ರದರ್ಶನಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.