(www.vknews.com) : ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ ಸೆಪ್ಟೆಂಬರ್ 11ರಂದು ಮಬೇಲ ದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಅಲ್ ಸಲಾಮ ಪೊಲಿಕ್ಲಿನಿಕ್ ಮಬೇಲ’ ದಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು ಶಿಬಿರದ ಉಸ್ತುವಾರಿ ಮೊಯಿದ್ದೀನ್ ಸಾಯಿಬ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಲ್ ಸಲಾಮ ಪೊಲಿಕ್ಲಿನಿಕ್ ನ ಡಾ. ರಾಶೀದ್ ಅಲಿ ರಕ್ತದಾನದ ಮಹತ್ವದದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆ ಯಲ್ಲಿ ಒಮಾನ್ ನ ಮಿನಿಸ್ಟರಿ ಆಪ್ ಡಿಪೇನ್ಸ್ ಅರ್ ಪೋರ್ಸ್ ನ ನಿವೃತ್ತ ಅದಿಕಾರಿ ಹಾಮುದ್ ಸೈದ್ ಅಲ್ ಯಾಯೀ, ರೋಯಲ್ ಗಾರ್ಡ್ ನ ನಾಶೀರ್ ಅಲಿ ನಾಶೀರ್ ,ಅಲ್ ಸಲಾಮ ಪೊಲಿಕ್ಲಿನಿಕ್ ನ ಡೈರೆಕ್ಟರ್ ಡಾ.ಸಿದ್ದೀಕ್ ಮತ್ತು ಸೋಶಿಯಲ್ ಪೋರಂ ಒಮಾನ್ ನ ನಾಯಕರು ಉಪಸ್ಥಿತರಿದ್ದರು.
ಸುಮಾರು 150ಕ್ಕೂ ಅಧಿಕ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕೋವಿಡ್ ನ ಸಂದಿಗ್ಧತೆಯಲ್ಲಿ ಒಮಾನ್ ಆರೋಗ್ಯ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿನ ರಕ್ತದ ಅಭಾವವನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ಒಮಾನ್ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಶೀರ್ಷಿಕೆಯಡಿ ರಕ್ತದಾನ ಶಿಬಿರ ಅಭಿಯಾನವನ್ನು ಆಯೋಜಿಸಲಾಗಿತ್ತು.
ವರದಿ: ಇರ್ಪಾನ್ ಉಜಿರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.