(Www.vknews.in) ಧಾರವಾಡದ ಭಾರತೀಯ ಮಜ್ದೂರ್ ಸಂಘದ ಕಛೇರಿಯಲ್ಲಿ, ಎಲ್ಲ ಪಧಾದಿಕಾರಿಗಳು ಕಾರ್ಯಕರ್ತರು ರಾಷ್ಟ್ರೀಯ ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು ವಲಯ ಕಾರ್ಯದರ್ಶಿ ಶ್ರೀ ಸಿ ಟಿ ಪಾಟೀಲ್ ಪೂಜ್ಯ ವಿಶ್ವಕರ್ಮ ಭಾವ ಚಿತ್ರಕ್ಕೆ ಮತ್ತು ಭಾರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಿಶ್ವಕರ್ಮ ಜಯಂತಿಯನ್ನು ಭಾರತೀಯ ಮಜ್ದೂರ್ ಸಂಘದಿಂದ ಏಕೆ ಮತ್ತು ಹೇಗೆ ಆಚರಿಸ್ತಾ ಬಂದಿದ್ದೇವೆ ಎಂದು ವಿವರವಾಗಿ ತಿಳಿಸಿದರು. ಬಿಎಂಎಸ್ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಎಂ ಬಾಬುರಾವ್ ಮಾತನಾಡುತ್ತಾ ಭಾರತೀಯ ಮದ್ದೂರ್ ಸಂಘದಲ್ಲಿ ವಿಶ್ವಕರ್ಮನ ಆಚರಣೆಯ ಬಗ್ಗೆ ವಿವರಿಸುತ್ತಾರೆ ಬೇರೆ ಬೇರೆ ರಾಜ್ಯಗಳಲ್ಲಿ ವಿಶ್ವಕರ್ಮನನ್ನು ರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಹಿಂದಿನಿಂದ ಹೇಗೆ ಆಚರಿಸುತ್ತ ಬಂದಿದ್ದಾರೆ ಎಂದು ತಿಳಿಸಿದರು ನಂತರ ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಅದಂತಹ ಸುರೇಶ್ ನಾಡಿಗೇರ್ ಮಾತನಾಡುತ್ತಾ ಭಾರತೀಯ ಮಜ್ದೂರ್ ಸಂಘದಲ್ಲಿ ವಿಶ್ವಕರ್ಮನಿಗೆ ಒಂದು ಪೂಜನೀಯ ಸ್ಥಾನವಿದೆ ಹಾಗೂ ವಿಶ್ವಕರ್ಮ ದಿನವನ್ನು ನಾವು ಭಾರತೀಯರು ಮಜ್ದೂರ್ ಸಂಘದವರು ಭಿನ್ನವಾಗಿ ಆಚರಿಸುತ್ತ ಬಂದಿದ್ದೇವೆ ಹಾಗೂ ವಿಶ್ವಕರ್ಮ ಹಿಂದಿನ ಇತಿಹಾಸ ಹಾಗೂ ಪರಂಪರೆ ಮುತ್ತು ಸಂಸ್ಕೃತಿ ತಿಳಿಸುತ್ತಾ ಮುಂದೆ ಒಂದು ದಿನ ಇಡೀ ಭಾರತ ದೇಶದಲ್ಲಿ ವಿಶ್ವಕರ್ಮನು ಜಯಂತಿಯನ್ನು ರಾಷ್ಟ್ರೀಯ ಕಾರ್ಮಿಕ ದಿನವನ್ನಾಗಿ ಆಚರಿಸುವ ದಿವಸಗಳು ಬಹುದೂರವಿಲ್ಲ ಎಂದು ತಿಳಿಸಿದರು ಶ್ರೀ ಈರಣ್ಣ ಮುರಗೋಡ ವಿಶ್ವಕರ್ಮ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ವಂದನೆಗಳನ್ನು ಸಲ್ಲಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.