ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಮಗೆ ಕೃಷ್ಣ ಎಂದಾಕ್ಷಣ ನೆನಪಾಗೊದು ಪುಟ್ಟ ಮಕ್ಕಳು…. ಆ ಮಕ್ಕಳ ತುಂಟಾಟ, ತರಲೆ, ನಗು -ಅಳು ಒಂದರಗಳಿಗೆ ಎಂತಹ ಕಲ್ಲು ಮನಕ್ಕೂ ತಾಯ್ತನದ ರೂಪ ಕೊಟ್ಟು ಸಿಂಗರಿಸಿ ಬಿಡುವ ಸೋಗು ಮಗುವಿಗಲ್ಲದೇ ಮತ್ತಾರಿಗೂ ಸಾದ್ಯವಿಲ್ಲ ಅನಿಸುತ್ತೆ ದೇವರ ರೂಪವೆಂದು ಪೂಜಿಸಿದರು ಅಚ್ಚರಿಯಿಲ್ಲ…..! ಇಂತಹ ಕೊರೊನಾದಂತಹ ಕಠಿಣ ಸಂದರ್ಭದಲ್ಲಿಯೂ ಮಕ್ಕಳಿಗೊಂದು ವೇದಿಕೆ ಸೃಷ್ಟಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಸೈ ಎನಿಸಿಕೊಂಡವರು ಶ್ರೀ ಸ್ವಚಿ ಕಲಾ ಆರ್ಟ್ಸ್ ಮಾರ್ನಮಿಕಟ್ಟೆ ಮಂಗಳೂರು ಇವರು ಆಯೋಜಿಸಿದ ಎರಡನೆ ವರ್ಷದ ಮುದ್ದು ಕೃಷ್ಣ2020 ಆನ್ಲೈನ್ ಫೋಟೋ ಸ್ಪರ್ಧೆಯನ್ನು 13 -9-2020 ರಂದು ಆಯೋಜಿಸಿದ್ದು ಈ ಕಾರ್ಯಕ್ರಮವು ಮರೋಳಿ ಶ್ರೀ ಸೂರ್ಯ ರಶ್ಮಿ ಸಭಾಂಗಣದಲ್ಲಿ ಜರುಗಿತು.
ಕತ್ತಲನ್ನು ಮರೆಸುವ ಜ್ಯೋತಿ ಅಂಧಕಾರದಿಂದ ನಮ್ಮನ್ನು ಹೊರತರುತ್ತದೆ ಎಂಬ ದೈವ ಸಂಕಲ್ಪ…! ಈ ಸಮಾರಂಭವನ್ನು ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೊಟ್ಟಾರಿ ದೀಪಬೆಳಗಿಸುವುದರ ಮೂಲಕ ಈ ಕಾರ್ಯಕ್ರಮದ ಮೆರುಗಿಗೆ ಸಾಕ್ಷಿಯಾದರು . ಈ ಒಂದು ಕಾರ್ಯದ ಮುಖ್ಯ ಅಥಿತಿಗಳಾಗಿ ಉದ್ಯಮಿ ಹಾಗೂ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರನಾಥ ಅತ್ತಾವರ,ಮರೋಳಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಸುಭಾಷ್ ಚಂದ್ರ ಶೆಟ್ಟಿ* ,ಶ್ರೀ ಶೈಲೇಶ್ ಶೆಟ್ಟಿ ,ಶ್ರೀಮತಿ ರೂಪಾಶ್ರಿ ಮಹಾನಗರ ಪಾಲಿಕೆ ಸದಸ್ಯರು , ಶ್ರೀ ರತ್ನ ಪ್ರತಿಷ್ಟಾನದ ಅದ್ಯಕ್ಷರಾದ ಶ್ರೀ ಮಾದವ ಶಿವಮೊಗ್ಗ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ರೇಷ್ಮಾ ಮಹೇಶ್ ,ರೀಮಾ ಜಗನ್ನಾಥ ಉಪಸ್ಥಿತರಿದ್ದು ಈ ಕಾರ್ಯಕ್ರಮದ ಭಾವಪೂರ್ಣ ಮೆರುಗನ್ನು ಹೆಚ್ಚಿಸಿ ಕಾರ್ಯಕ್ಕೆ ಒಂದು ಕಳೆ ತಂದರು.
ಈ ಸಂದರ್ಭದಲ್ಲಿ ಭಾರತೀಯ ಸೈನ್ಯದ ನಿವೃತ್ತ ಯೋಧ ಶ್ರೀ ರಾಜೇಶ್ ಮರೊಳಿ ಇವರನ್ನು ಸನ್ಮಾನಿಸಲಾಯಿತು ಜೊತೆಗೆ ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕಗಳನ್ನು ಗಳಿಸಿದ ಸ್ವಸ್ತಿ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವೀಜೇತರಾದವರು. ಮುದ್ದು ಕೃಷ್ಣ ಸ್ಪರ್ಧೆಯ ವಿಭಾಗದಲ್ಲಿ: ಪ್ರಥಮ-ಪ್ರಿಯಂಶ,ದ್ವಿತೀಯ-ಹಿರನ್ಮಯಿ ಭಟ್ತೃ,ತೀಯ-ವಾಗ್ಮಿ.
ಸಮಾಧಾನಕರ ಬಹುಮಾನ,ಸಿಯಾ ಸಾಯಿ,ಹಂಸ,ಮಾನ್ವಿ,ಗಹನ್, ಪ್ರಣವಿ,ದಿಯನ್ಸಿ
ಪುಟಾಣಿ ಕೃಷ್ಣ ವಿಭಾಗದಲ್ಲಿ: ಕ್ರಮವಾಗಿ ಲಾಸ್ಯ ಎಸ್ ಸುನಿಲ್,ಸಾನ್ವಿ ಎನ್ ಎ,ಸೋನಾ ಅದ್ಕರ್. ಸಮಾಧಾಕರ- ಅರ್ಥ ಮಿಥುನ್, ಅಚಿಂತ್ಯ,ಮಹಿನ್ ಶ್ರೀರಾಮ, ಪ್ರಾಶಿ,ಲಾಸ್ಯ ಯು ಸುವರ್ಣ, ಹಾರ್ದಿಕ ಪಾಂಜಾ,
ಬಾಲಕೃಷ್ಣ ವಿಭಾಗ ವೀಜೇತರು ಕ್ರಮವಾಗಿ ಮಾನ್ವಿ ಆರ್, ಶಾರ್ವರಿ, ಲೇಕ್ಷಾ ಪಾಟೇಲ್, ಸಮಾದಾನಕರ- ಸಂಮೃದ್ದಿ ಎಮ್ ಕೆ, ಹರ್ಷಿತ ಅಥ್ಕರ್, ಅಧಿತಿ ವಿ ಶೆಟ್ಟಿ, ಯಶಿಕಾ ಡಿಂಪಲ್,ರಿಶಿಕಾ ವೀಜೆತರಾಗಿದ್ದು ಎಲ್ಲಾ ವಿಭಾಗಳಿಗೂ ಇನ್ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು ಎಲ್ಲರಿಗೂ ಮೆಚ್ಚುಗೆಯ ಪತ್ರ ನೀಡಿ ಗೌರವಿಸಲಾಯಿತು. ರೋಹಿತ್ ಮರೋಳಿ ಇವರು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದ್ದು,ಕಿರಣ್ ತೊಕ್ಕಟ್ಟುರವರು ಶೃಶ್ರಾವ್ಯವಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಈ ಕಾರ್ಯಕ್ರಮವು ಉತ್ತಮವಾಗಿ ನಡೆದ ಖುಷಿಯೊಂದಿಗೆ ಮುಂದಿನ ಈ ದಿನಕ್ಕೆ ಅದೆಷ್ಟೋ ಮನಗಳು ಕಾದು ಕುಳಿತಂತೆ ಇತ್ತು ಎಂದು ಹೇಳಲು ಹರ್ಷನೀಯ.. ಅದೇನೇ ಇರಲಿ ಮಕ್ಕಳ ಮಿಲನ ಸಮ್ಮಿಲನದ ಕಳೆ ದೇವಳದ ಕಳೆ ಹೆಚ್ಚಲು ಸಾಕ್ಷಿ ಆಗಿದ್ದು ನಮ್ಮೂರಿನ ಹಿರಿಮೆ…
✒️ಸುಜಾತ ಕಂದ್ರವಳ್ಳಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.