ಕುಂಬ್ರ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಪ್ ಬ್ಲಡ್ ಸೈಬೊ ದ.ಕ ಜಿಲ್ಲೆ ಇದರ 187 ನೇ ರಕ್ತದಾನ ಶಿಬಿರ ಎಸ್ಸೆಸ್ಸೆಪ್ ಕುಂಬ್ರ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಪ್ ಕಟ್ಟತ್ತಾರು ಶಾಖೆಯ ಸಹಕಾರದೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಬಾಗಿತ್ವದಲ್ಲಿ ಕಟ್ಟತ್ತಾರು ಸುನ್ನಿ ಸೆಂಟರ್ ಮುಂಬಾಗದಲ್ಲಿ ನಡೆಯಿತು.
ಶಿಬಿರದಲ್ಲಿ 78 ಮಂದಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಎಸ್ಸೆಸ್ಸೆಪ್ ಕುಂಬ್ರ ಸೆಕ್ಟರ್ ಅದ್ಯಕ್ಷ ಶಮೀರ್ ಸಖಾಪಿ ರೆಂಜಲಾಡಿ ಅದ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ಎಸ್ಸೆಸ್ಸೆಪ್ ದ.ಕ ಜಿಲ್ಲಾ ಈಸ್ಟ್ ಝೋನ್ ಪ್ರ. ಕಾರ್ಯದರ್ಶಿ ಶಪೀಕ್ ಮಾಸ್ಟರ್ ತಿಂಗಳಾಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಪ್ ಪುತ್ತೂರು ಡಿವಿಷನ್ ಉಪಾದ್ಯಕ್ಷ ಹಮೀದ್ ಸಖಾಪಿ ಪಾಣಾಜೆ,ಪ. ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ,ಕ್ಯಾಂಪಸ್ ಕಾರ್ಯ ದರ್ಶಿ ಶಿಹಾಬುರ್ರಹ್ಮಾನ್ ಹಸನ್ ನಗರ,ಬ್ಲಡ್ ಸೈಬೊ ಉಸ್ತುವಾರಿ ಹಾರಿಸ್ ಅಡ್ಕ, ಎಸ್ ವೈ ಎಸ್ ನಾಯಕರಾದ ಉಸ್ಮಾನ್ ಮುಸ್ಲಿಯಾರ್,ಕರೀಮ್ ಹಾಜಿ ಚೆನ್ನಾರ್,ಉಮರ್ ಹಾಜಿ ಕಟ್ಟತ್ತಾರು,ಅಲಿ ಸಅದಿ ಬಲ್ಕಾಡ್,ಮಹಮ್ಮದ್ ಬಯಂಬಾಡಿ ಕೆಸಿ ಎಪ್ ನಾಯಕರಾದ ಸಲೀಂ ಸಖಾಪಿ,ಯೂಸುಫ್ ಚೆನ್ನಾರ್, ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕೆ.ಸಿ ಪೂಜಾರಿ,ಅಶ್ರಪ್ ಕೆ ಎಂ ಕಟ್ಟತ್ತಾರು,ಯೂಸುಫ್ ಬಲ್ಕಾಡ್,ರಶೀದ್ ಯಮಾನಿ, ಶರೀಪ್ ಕೆ. ಎಂ ಕಟ್ಟತ್ತಾರು,ಬಶೀರ್ ಎ.ಪಿ, ಉಮರ್ ಹಾಜಿ ಬಿ ಎಂ, ನಿಸಾರ್ ಆಹ್ಮದ್ ಕಟ್ಟತ್ತಾರು, ಜಾಸಿಂ ಕಣ್ಣೂರು,ಸ್ವಾದಿಕ್ ಸಖಾಪಿ ಕಟ್ಟತ್ತಾರು, ಸಿದ್ದೀಕ್ಸ ಖಾಪಿ ಮಾಡಾವು, ಕರೀಮ್ ಸಖಾಪಿ ಕಟ್ಟತ್ತಾರು, ನಾಸಿರ್ಸ ಖಾಪಿ ಕಟ್ಟತ್ತಾರು, ಮುಂತಾದರು ಉಪಸ್ಥಿತರಿದ್ದರು.
ಸೆಕ್ಟರ್ ಕಾರ್ಯದರ್ಶಿ ಇಲ್ಯಾಸ್ ಕಟ್ಟತ್ತಾರು ಸ್ವಾಗತಿಸಿ,ಸೆಕ್ಟರ್ ಬ್ಲಡ್ ಸೈಬೊ ಉಸ್ತುವಾರಿ ಮುಹ್ಸಿನ್ ಕಟ್ಟತ್ತಾರು ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.