ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಕರ್ನಾಟಕ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರೂ, ಜಾಮಿಅ ಸಅದಿಯ್ಯ ಪ್ರಾಂಶುಪಾಲರೂ ಆಗಿದ್ದ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ವಫಾತಾದರು. ಉದ್ಧಾಮ ವಿದ್ವಾಂಸರೂ, ದೊಡ್ಡ ಮುದರ್ರಿಸರೂ ಆಗಿದ್ದರು.
ತಾಜುಲ್ ಉಲಮಾ ಉಳ್ಳಾಲ್ ತಂಙಳ್ ರವರ ಪ್ರೀತಿಯ ಶಿಷ್ಯ. ತಾಜುಲ್ ಫುಖಹಾ ಎಂಬ ನಾಮದಿಂದ ಪ್ರಸಿದ್ಧರಾಗಿದ್ದರು. ಫಿಕ್ಹ್ ಹಾಗೂ ಗೋಳಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದರು.1971 ರಲ್ಲಿ ಬಿರುದು ಪಡೆದ ಬಳಿಕ ಐದು ದಶಕಗಳ ಕಾಲ ದರ್ಸ್ ನಡೆಸಿದ ಅವರು ಸಾವಿರಾರು ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ.
ಕರ್ನಾಟಕದ ಉಡುಪಿ ಹಾಸನ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಹಾಗೂ ಹಲವಾರು ಮೊಹಲ್ಲಾಗಳ ಖಾಝಿಯಾಗಿದ್ದರು. ಕೇರಳದಲ್ಲಿ ಸ್ಪಷ್ಟ ಮಲಯಾಳದಲ್ಲೂ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲೂ ಅವರು ನಡೆಸಿದ ಭಾಷಣಗಳು ಸುನ್ನಿಗಳಿಗೆ ಆವೇಶ ನೀಡುವಂತದ್ದಾಗಿತ್ತು.
ಸಾವಿರಾರು ಮಂದಿಯನ್ನು ಸುನ್ನತ್ ಜಮಾಅತ್ತಿನ ನೈಜ ಆಶಯಗಳಿಗೆ ತಲುಪಿಸಿದ್ದರು. ತಾಜುಲ್ ಉಲಮಾರ ಬಳಿಕ ಕರ್ನಾಟಕದ ಸುನ್ನೀ ಚಟುವಟಿಕೆಗಳಿಗೆ ಆವೇಶಭರಿತವಾದ ನಾಯಕತ್ವ ನೀಡಿದ್ದು ಉಸ್ತಾದರಾಗಿದ್ದರು. ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ವಫಾತ್ ನೈಜಾರ್ಥದಲ್ಲಿ ಒಂದು ದೊಡ್ಡ ನಷ್ಟ. ಅಲ್ಲಾಹು ಅವರ ಪಾರತ್ರಿಕ ಜೀವನದ ಪದವಿಗಳನ್ನು ಉನ್ನತಗೊಳಿಸಲಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.