ಸವಣೂರು(ವಿಶ್ವಕನ್ನಡಿಗ ನ್ಯೂಸ್): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಬ್ರಾಂಚ್ ವತಿಯಿಂದ ಬ್ರಾಂಚ್ ಉಪಾದ್ಯಕ್ಷರಾದ ಲತೀಫ್ ರೋಷನ್ ಹಾಗೂ ಸಹೀರ್ ರೋಯಲ್ ರವರ ನೇತೃತ್ವದಲ್ಲಿ ಸವಣೂರು 1 ನೇ ವಾರ್ಡಿನ ಅಟ್ಟೊಲೆ ಎಂಬಲ್ಲಿ ವಾಸಿಸುತಿರುವ ಶಾಫಿ ಎಂಬವರ ವಾಸದ ಮನೆಯು ತೀರಾ ಶಿಥಿಲಾವಸ್ಥೆಯಲ್ಲಿ ಇದ್ದುದನ್ನು ಮನಗಂಡು ಹಂಚಿನ ಮನೆಯ ಛಾವಣಿ ಹಾಗೂ ಮನೆಯ ದುರಸ್ತಿ ಮತ್ತು ಮನೆಯ ಸುತ್ತಮುತ್ತ ಇದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ನಡೆಸಲಾಯಿತು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ವಲಯಾದ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ, ವಿದಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಬಾಬು ಸವಣೂರು,ಗ್ರಾಮ ಪಂ ಮಾಜಿ ಸದಸ್ಯರಾದ ಅಬ್ದುಲ್ ರಝಾಕ್ ಕೆನರ, ಯಾಕೂಬ್ ಸವಣೂರು, ಬಶೀರ್ ಕಾಯರ್ಗ,ಅಶ್ರಫ್ ಚಾಪಲ್ಲ ಉಪಸ್ಥಿತರಿದ್ದು ವಿವಿಧ ರೀತಿಯಲ್ಲಿ ಸಹಕರಿಸಿದರು. ಪಾಪ್ಯುಲರ್ ಫ್ರಂಟ್ ಪುತ್ತೂರು ಸಿಟಿ ಡಿವಿಝನ್ ಅಧ್ಯಕ್ಷರಾದ ಉಮ್ಮರ್ ಕೂರ್ನಡ್ಕರವರು ಆಗಮಿಸಿ ಪಕ್ಷದ ಕಾರ್ಯಕರ್ತರ ಶ್ರಮದಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಕ್ಷದ ಸ್ಥಳೀಯ, ನಾಯಕರು, ಕಾರ್ಯಕರ್ತರು, ಹಿತೈಷಿಗಳೆಲ್ಲ ಸೇರಿ 40ಕ್ಕೂ ಅಧಿಕ ಮಂದಿ ಶ್ರಮದಾನದಲ್ಲಿ ಭಾಗವಹಿಸಿ ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.