ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್) ಸೆ. 26: ಸಮುದಾಯದ ಮತ್ತು ಸಮಾಜದಲ್ಲಿನ ಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ,ಹಿರಿಯ ವಿದ್ವಾಂಸರಾಗಿರುವ ಉಡುಪಿ ಖಾಝಿ ಎಂದರಿಯಲ್ಪಡುವ, ಉಡುಪಿ ಚಿಕ್ಕಮಗಳೂರು-ಕೊಡಗು-ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಯವರಾದ ಬಹುಮಾನ್ಯರಾದ ಪಿ.ಎಮ್.ಇಬ್ರಾಹಿಂ ಮುಸ್ಲಿಯಾರ್ ‘ಬೇಕಲ್ ಉಸ್ತಾದ್’ ರವರ ಮರಣವು, ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ, ಒಟ್ಟು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆಯೆಂದು ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೇಕಲ್ ಉಸ್ತಾದರವರ ಸಮಾಜಮುಖಿ ಕೆಲಸಕಾರ್ಯಗಳು ಯಾವುದೇ ನಿರ್ದಿಷ್ಟ ವರ್ಗಕ್ಕೆ, ಸೀಮಿತವಾಗಿರದೆ ಮಾನವೀಯ ನೆಲೆಯಿಂದ ಕೂಡಿದ್ದವು. ಮಾತ್ರವಲ್ಲ ಆದರ ಕಾರ್ಯಕ್ಷೇತ್ರವು ಕೂಡಾ, ಯಾವುದೇ ಮಸೀದಿ, ಮೊಹಲ್ಲಾದಲ್ಲಿನ ಪ್ರದೇಶಕ್ಕೆ ಮುಗಿಯದೆ ಎಲ್ಲೆಡೆಯಲ್ಲಿಯೂ ಅವರು ತಮ್ಮ ಕ್ರಿಯಾ ಯೋಜನೆಯನ್ನು ಹೊಂದಿದ್ದರು. ತಮ್ಮ ಅಧೀನ ಸಂಘಟನೆಗಳ ಕಾರ್ಯಕರ್ತರಿಗೆ ಸಮಾಜದ ಸೇವಾರಂಗದಲ್ಲಿ ಕ್ರಿಯಾಶೀಲರಾಗಿರಲು ಅವರು ಪ್ರೇರಣೆಯಾಗಿದ್ದರು, ಇನ್ನು ಮುಂದೆಯೂ ಇಷ್ಟೊಂದು ಅವರ ಸಾಮಾಜಿಕ ಧ್ಯೇಯೋದ್ದೇಶಗಳನ್ನು ಮುಂದುವರಿಸಲು ಆದರ ಕಾರ್ಯಕರ್ತರ ಸಹಿತ ಎಲ್ಲರೂ ಕಟಿಬದ್ದರಾಗಬೇಕು. ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರಲ್ಲದೆ, ನಿಧನರಾದ ಬೇಕಲ್ ಉಸ್ತಾದ್’ ರವರ ಆತ್ಮಕ್ಕೆ ಸೃಷ್ಟಿಕರ್ತನು, ಚಿರಶಾಂತಿಯನ್ನು ಮತ್ತು ಅವರ ಕುಟುಂಬಕ್ಕೆ ಸಹನಾಶಕ್ತಿಯನ್ನೂ ಅನುಗ್ರಹಿಸಲಿ ಎಂದು ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.